ಕಾಶ್ಮೀರ ತಾಜಾ ಸೇಬಿನ ಹಣ್ಣುಗಳ ಮೇಲೂ ಭಾರತ ವಿರೋಧಿ ಘೋಷಣೆ....!
ಶ್ರೀನಗರ, ಅ 17: ಮಾರುಕಟ್ಟೆಗೆ ಕಾಶ್ಮೀರದ ತಾಜಾ ಸೇಬು ಹಣ್ಣುಗಳು ಬಂದಿವೆ. ವ್ಯಾಪಾರಿಗಳು ಸಂತಸದಿಂದಲೇ ಸೇಬು ಖರೀದಿಸಿದರು, ಹಣ್ಣಿನ ಪೆಟ್ಟಿಗೆ ತೆರೆದು ನೋಡಿ... ದಿಗ್ಬ್ರಮೆಗೊಳಗಾಗಿದ್ದಾರೆ...!
ಸೇಬಿನ ಹಣ್ಣುಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕಪ್ಪು ಸ್ಕೆಚ್ ಪೆನ್ನಲ್ಲಿ ಬರೆದಿರುವುದೇ ಇದಕ್ಕೆ ಕಾರಣ. ಕಾಶ್ಮೀರದ ಕತುವಾ ಸಗಟು ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಈ ಕೃತ್ಯವನ್ನು ವಿರೋಧಿಸಿ ವ್ಯಾಪಾರಿಗಳು ಕೂಡಲೇ ಮಾರುಕಟ್ಟೆಯ ಮುಂದೆ ಪ್ರತಿಭಟನೆ ನಡೆಸಿದರು. ಸೇಬು ಹಣ್ಣುಗಳ ಮೇಲೆ 'ಬುರ್ಹಾನ್ ವನಿ', 'ಪಾಕಿಸ್ತಾನ್ ಜಿಂದಾಬಾದ್' ಹಾಗೂ 'ಗೋ ಬ್ಯಾಂಕ್ ಇಂಡಿಯಾ' ಘೋಷಣೆಗಳನ್ನು ಬರೆದಿರುವ ಬಗ್ಗೆ ವ್ಯಾಪಾರಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.
ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿರುವ ಮಾರುಕಟ್ಟೆ ಅಧ್ಯಕ್ಷ ರೋಹಿತ್ ಗುಪ್ತಾ, ದುಷ್ಕೃತ್ಯ ನಡೆಸಿದವರನ್ನು ಕೂಡಲೇ ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 