ಜೀವನಧಾರಾ ಟ್ರಸ್ಟಿನಿಂದ ಇನ್ನೊಂದು ಮಾನವೀಯ ಕಾರ್ಯ
ಲೋಕದರ್ಶನ ವರದಿ
ಹೊನ್ನಾವರ,14:.ಯಾರಿಗೂ ಬೇಡದವರಾದ ಮಾನಸಿಕ ರೋಗಿಗಳಾಗಿ ಗೊತ್ತು ಗುರಿ ಇಲ್ಲದೇ ರಾಷ್ಟ್ರೀಯ ಹೆದ್ದಾರಿಯಗಲಕ್ಕು ಅಲೆಯುತ್ತಿದ್ದ ಇಬ್ಬರನ್ನು ಜೀವನಧಾರಾ ಟ್ರಸ್ಟಿನಿಂದ ಹೊನ್ನಾವರದಿಂದ ದಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಗೆ ರವಾನಿಸಲಾಯಿತು.
ಕಳೆದ 8-10 ದಿನಗಳಿಂದ ಹೊನ್ನಾವರದಿಂದ ಕಾಸರಕೋಡಿನವರೆಗೆ ತಿಂಡಿ ಹಾಗೂ ಆಶ್ರಯಕ್ಕಾಗಿ ಹುಚ್ಚಾಪಟ್ಟೆ ತಿರುಗಾಡುತ್ತಿದ್ದ ಇವರನ್ನು ಸಂಘದ ಅಧ್ಯಕ್ಷರಾದ ಜೆ.ಜೆ.ಡಿಸೋಜಾ ಹಾಗೂ ಸದಸ್ಯರಾದ ಎಸ್.ಜೆ.ಕೈರನ್ನ ಹಾಗೂ ಮಹೇಶ ಕಲ್ಯಾಣಪುರ ಗುರುತಿಸಿ, ಹೊನ್ನಾವರ ಪೋಲಿಸ್ ಠಾಣಾ ಅಧಿಕಾರಗಳ ಸಹಕಾರದೊಂದಿಗೆ ಠಾಣೆಗೆ ತಂದು ನಂತರ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನ್ಯಾಯಾಲಯದ ಮೂಲಕ ಧಾರವಾಡ ಮಾನಸಿಕ ರೋಗಿಗಳ ಆಸ್ಪತ್ರೆಗೆ ಜೀವನಧಾರಾ ಟ್ರಿಸ್ಟಿನ ಸದಸ್ಯರಾದ ಡಾ. ರಂಗನಾಥ ಪೂಜಾರಿ ಹಾಗೂ ಮಹೇಶ ಕಲ್ಯಾಣಪುರ ಮತ್ತು ಪೋಲಿಸರಾದ ಓಮು ನಾಯ್ಕ ಹಾಗೂ ಹೋಮ್ಗಾಡರ್್ನಾದ ಶಶಿಹಿತ್ತಲ್ ರವರು ಸುರಕ್ಷಿತವಾಗಿ
ಮುಟ್ಟಿಸಿರುತ್ತಾರೆ.
ಈ ಕಾರ್ಯದಲ್ಲಿ ಹೆಚ್ಚಿನ ಮುತವಜರ್ಿ ಸಹಕರಿಸಿದ ಹೊನ್ನಾವರದ ಪಿ.ಎಸ್.ಆಯ್. ಸಂತೋಷ್ ಕಾಯ್ಕಿಣಿಯವರಿಗೆ ಹಾಗೂ ಇಗ್ನೇಷಿಯಸ್ ಆಸ್ಪತ್ರೆಯ ಸಿಬ್ಬಂದಿಗಳಿಗೆ ಜೀವನಧಾರ ಟ್ರಸ್ಟಿನ ಸರ್ವ ಸದಸ್ಯರು ವಂದನೆ ಸಲ್ಲಿಸಿರುತ್ತಾರೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 