ಅಂಜುಮನ್ ಸಂಸ್ಥೆಯಿಂದ ಸಾಧಕರಿಗೆ ಸನ್ಮಾನ
Anjuman honors achievers
ಮಹಾಲಿಂಗಪುರ 01: ಸೋಮವಾರ ಪಟ್ಟಣದ ಅಂಜುಮನ್. ಏ.ಇಸ್ಲಾಂ ಕಮಿಟಿ ಮತ್ತು ಸಮುದಾಯ ಸೇರಿ ದಾರೂಲ್ ಉಲೂಂ ಎಜ್ಯುಕೇಶನ್ ಸೊಸೈಟಿ ಕಚೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮತ್ತು ಪ್ರಶಸ್ತಿ ಪುರಸ್ಕೃತರಾದವರನ್ನು ಸನ್ಮಾನಿಸಿ ಗೌರವಿಸಿದರು.
ರಾಜಕೀಯ ರಂಗದ ಯುವ ಮುಖಂಡ ಸಿದ್ದು ಕೊಣ್ಣೂರ ಸಾಮಾಜಿಕ ಸಹಕಾರ ಗುಣಕ್ಕೆ ಅಂಜುಮನ್ ವತಿಯಿಂದ ಸನ್ಮಾನ ಪಡೆದರೆ, ಡಾ.ಅಜೀತ ಕನಕರೆಡ್ಡಿ ಉತ್ತಮ ವೈದ್ಯ ಪ್ರಶಸ್ತಿ, ಮೀರಾ ತಟಗಾರ ಉತ್ತಮ ವರದಿಗಾರ ಪ್ರಶಸ್ತಿಯನ್ನು ರಬಕವಿ /ಬನಹಟ್ಟಿ ತಾಲೂಕಡಳಿತದಿಂದ ಇತ್ತಿಚೆಗೆ ನಡೆದ ಸ್ವಾತಂತ್ರ್ಯ ದಿನಾಚರಣೆಯಂದು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಧನೆ ಯಾರೋಬ್ಬರ ಸ್ವತ್ತಲ್ಲ, ದೃಢ ನಿರ್ಧಾರ ಮತ್ತು ಶ್ರಮ ವಹಿಸುವ ಜನರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ, ಇದಕ್ಕೆ ಉತ್ತಮ ಉದಾಹರಣೆ ಇವರೆ ಆಗಿದ್ದಾರೆ ಎಂದರೆ ತಪ್ಪಾಗಲಾರದು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಭವಿಷ್ಯದಲ್ಲಿಯೂ ಸಮಾಜ ಬಯಸುವ ಧನಾತ್ಮಕ ಚಿಂತನೆ ಇವರದಾಗಲಿ ಎಂದು ಹಾರೈಸಿದರು.
ಸ್ಥಳೀಯ ವೆಂಕಟೇಶ್ ಆಸ್ಪತ್ರೆಯ ಡಾ.ಅಜೀತ ಕನಕರೆಡ್ಡಿಯವರು ಗೌರವ ಸನ್ಮಾನ ಸ್ವೀಕರಿಸಿ ಕೃತಜ್ಞತೆಗಳನ್ನು ಸಲ್ಲಿಸಿ ಮಾತನಾಡಿದ ಅವರು, ಸಾಧನೆ ಮಾಡಬಯಸುವ ಮಕ್ಕಳಲ್ಲಿರುವ ಅಭಿರುಚಿಯನ್ನು ಬಾಲ್ಯದಲ್ಲಿಯೇ ಶಿಕ್ಷಕರು, ಪಾಲಕರು, ಗುರುತಿಸಬೇಕು. ಇದರಿಂದ ಮಗುವಿನಲ್ಲಿರುವ ಕೌಶಲ್ಯ ಬೆಳಕಿಗೆ ಬರುತ್ತದೆ. ಆ ನಿಟ್ಟಿನಲ್ಲಿಯೇ ಅವರಿಗೆ ಸಹಕಾರ ಸಹ ನೀಡಬೇಕು ಅವರೇ ಸಾಧಕರಾಗುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ನಜೀರ್ ಅತ್ತಾರ ಮಾತನಾಡಿದರು. ಎಂಬಿಬಿಎಸ್ ಶ್ರೇಣಿಗೆ ದಾಖಲೆ ಪಡೆದಿರುವ ಜುಬೇರ್ ರೋಣ ಮತ್ತು ಅದ್ನಾನ್ ಯಕ್ಸಂಬಿ ಅವರನ್ನೂ ಸಹಿತ ಈ ಸಂದರ್ಭದಲ್ಲಿ ಅಂಜುಮನ್ ಸನ್ಮಾನಿಸಿತು. ಕಾರ್ಯಕ್ರಮದ ಆರಂಭಕ್ಕೆ ಶಾಲಾ ಮಕ್ಕಳು ಕಿರಾತ ಓದಿದರು.
ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮೌಲಾನ ಜಕ್ರೀಯಾಸಾಬ, ಮೌಲಾನ ಅಸ್ಲಂ, ಮಲ್ಲಪ್ಪ ಸಿಂಗಾಡಿ, ಡಾ.ಜಬ್ಬಾರ್ ಯಕ್ಸಂಬಿ, ಹಾಸಿಂ ಪೆಂಡಾರಿ, ಫಾರೂಖ್ ಪಕಾಲಿ, ಸಯ್ಯದ್ ಯಾದವಾಡ, ನಜೀರ್ ಝಾರೆ, ನಿಯಾಝ್ ಪಟೇಲ್, ನಬಿ ಯಕ್ಸಂಬಿ, ಜಮೀರ್ ಯಕ್ಸಂಬಿ, ಪೈಗಂಬರ್ ಪೆಂಡಾರಿ, ಅಬ್ದುಲಗಫೂರ ಆಲಗೂರ, ಮೇಹಬೂಬ ಜೀರಗಾಳ, ಬಂದೇನವಾಜ್ ಸಿಂದಗಿ, ಮೇಹಬೂಬ ಜಮಾದಾರ, ರಾಜೇಸಾಬ ನದಾಫ, ಹಾಫೀಜ್ ಯುಸೂಫ್, ಮೇಹಬೂಬ ಮುಜಾವರ, ಶಿಕಂದರ ಮೋಪಗಾರ, ಯಾಸೀನ್ ಐನಾಪೂರ, ಮೌಲಾಲಿ ಬುರಲಿ, ರಸೂಲ್ ಸಾಂಗ್ಲಿಕರ, ಬುಡ್ಡಾ ಬೀಳಗಿ, ಸಿರಾಜಸಾಬ ಮುಜಾವರ, ಮೇಹಬೂಬ ನಾಗನೂರ ಇನ್ನೂ ಮುಂತಾದವರಿದ್ದರು.ಸುದ್ದಿ ಮಿತ್ರ ಯ್ಯೂಟ್ಯ್ಯೂಬ್ ವರದಿಗಾರ ಲಾಲಸಾಬ ನಗಾರ್ಚಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಏಜಾಜ್ ಬಾಗೇವಾಡಿ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 