ಅನಂತಪೂರ-ಕೊಕಳಾ ರಸ್ತೆ ಡಾಂಬರೀಕರಣಕ್ಕೆ ಚಾಲನೆ
ಲೋಕದರ್ಶನ ವರದಿ
ಸಂಬರಗಿ 27: 50 ವರ್ಷದಿಂದ ರಸ್ತೆ ದುರಸ್ತಿ ನೆನೆಗುದಿಗೆ ಬಿದ್ದಿದ್ದ ಅನಂತಪೂರ-ಕೊಕಳಾ 3 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿ ಈ ಭಾಗದ ಕಾಂಗ್ರೆಸ್ ಜಿ.ಪಂ ಸದಸ್ಯೆ ಮಾದುರಿ ಶಿಂಧೆ ಹಾಗೂ ಕಾಂಗ್ರೆಸ್ ಮುಖಂಡ ದಾದಾ ಶಿಂಧೆ ಇವರ ಪ್ರಯತ್ನದಿಂದ ಪ್ರಾರಂಭವಾಗಿದೆ. ಇದರಿಂದ ಅತ್ಯಂತ ಕಷ್ಟ ಪಡುತ್ತಿದ್ದ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಅನುಕೂಲವಾಗಿದೆ.
ಅನಂತಪೂರ-ಕೊಕಳಾ ರಸ್ತೆ ಗಡಿ ಭಾಗದಲ್ಲಿ ಇದ್ದು ಹಲವಾರು ಬಾರಿ ರಾಜಕೀಯ ಮುಖಂಡರ ಗಮನಕ್ಕೆ ತಂದರೂ ಸಹ ರಸ್ತೆಯಾಗಿರಲಿಲ್ಲ. ಅನಂತಪೂರ-ಕೊಕಳಾ ಮಾರ್ಗವಾಗಿ ಕವಟೆಮಹಾಂಕಾಳ ಮಹಾರಾಷ್ಟ್ರಕ್ಕೆ ಹೋಗಲು ರಸ್ತೆ ಅನುಕೂಲವಾಗಿದೆ. ಈ ಭಾಗದ ಜನರು ದಿನನಿತ್ಯ ತಮ್ಮ ಕೆಲಸಗಳಿಗಾಗಿ ಕವಟೆಮಹಾಂಕಾಳಕ್ಕೆ ಹೋಗುತ್ತಿದ್ದಾರೆ. ಕಾಡಾ ಯೋಜನೆಯಡಿಯಲ್ಲಿ ಒಂದು ಕೋಟಿ ರೂ. ಅನುದಾನ ಮಂಜೂರಾಗಿ ರಸ್ತೆ ಡಾಂಬರೀಕರಣದಿಂದ ಒಳ್ಳೆಯ ಗುಣಮಟ್ಟದಿಂದ ನಡೆಯುತ್ತಿದೆ.
ಮಾಜಿ ತಾ.ಪಂ ಸದಸ್ಯ ಮಹಾಂತೇಶ ಸಾಲಿಮಠ, ರುದ್ರಗೌಡಾ ಪಾಟೀಲ, ಹುಸೇನ ಅತ್ತಾರ, ಇವರ ಸತತ ಪ್ರಯತ್ನದಿಂದ ಗಡಿ ಭಾಗದ ರಸ್ತೆಗಳು ಡಾಂಬರೀಕರಣ ಆಗುತ್ತಿವೆ. ಅನಂತಪೂರ-ಯಕ್ಕುಂಡಿ ರಸ್ತೆಯನ್ನು ಶೀಘ್ರದಲ್ಲಿ ಡಾಂಬರೀಕರಣ ಮಾಡಲಾಗುವದೆಂದು ದಾದಾ ಶಿಂಧೆ ಹೇಳಿದರು.
ಫೋಟೋ ಶಿಷರ್ಿಕೆ: ಅನಂತಪೂರ-ಕೋಕಳಾ ರಸ್ತೆ ಡಾಂಬರೀಕರಣ ನಡೆಯುತಿರುವುದು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 