ಹಾವೇರಿ05: ಮುಂಬೈನಿಂದ ಜಿಲ್ಲೆಗೆ ಬಂದ ವ್ಯಕ್ತಿಯನ್ನು ಸ್ಥಳೀಯರ ಮಾಹಿತಿ ಆಧರಿಸಿ ಕೋವಿಡ್ ತಪಾಸಣೆಗೆ ಒಳಪಡಿಸಿ ಸೋಂಕು ದೃಢಪಟ್ಟ ಕಾರಣ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ನಗರದಿಂದ ಎಪ್ರಿಲ್ 28 ರಂದು ಒಬ್ಬ ವ್ಯಕ್ತಿಯು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ.ಕೃಷ್ಣ ನಗರಕ್ಕೆ ಬಂದಿರುವ ವಿಷಯ ತಿಳಿದು ಸ್ಥಳೀಯ ನಿವಾಸಿಗಳು ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ಕೂಡಲೇ ಮಾಹಿತಿ ನೀಡಿದ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತವು ಕಾರ್ಯಪ್ರವೃತರಾಗಿ ಸದರಿ ವ್ಯಕ್ತಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ.
ಮೇ04ರಂದು ಜಿಲ್ಲಾಡಳಿತವು 160 ಜನರ ಸ್ವಾಬ್ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 159 ಜನರ ವರದಿಯು ನೆಗೇಟಿವ್ ಬಂದಿದ್ದು, ಅದರಲ್ಲಿ ಮುಂಬೈ ನಗರದಿಂದ ಪ್ರಯಾಣ ಮಾಡಿದ ವ್ಯಕ್ತಿಗೆ ಮಾತ್ರ ಪಾಸಿಟಿವ್ ಎಂದು ವರದಿ ಬಂದಿರುತ್ತದೆ. ಪಾಸಿಟಿವ್ ವರದಿ ಬಂದಿರುವ ವ್ಯಕ್ತಿಯನ್ನು ನಿಗದಿಪಡಿಸಿರುವ ಕೋವಿಡ್-19 ಆಸ್ಪತ್ರೆಯಲ್ಲಿ ಈಗಾಗಲೇ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಸದರಿ ವ್ಯಕ್ತಿಯಿಂದ ಪ್ರಾಥಮಿಕ ಸಂಪರ್ಕದಲ್ಲಿರುವ 18 ಜನರನ್ನು ಗುರುತಿಸಿದ್ದು, ಹಾಗೂ ದ್ವಿತೀಯ ಸಂಪರ್ಕದಲ್ಲಿರುವ 12 ವ್ಯಕ್ತಿಗಳನ್ನು ಇಲ್ಲಿಯವರೆಗೆ ಗುರುತಿಸಿದ್ದು, ಇವರುಗಳ ಸ್ವ್ಯಾಬ್ನ್ನು ಪರೀಕ್ಷೆಗೆ ಒಳಪಡಿಸಿದ್ದು ಫಲಿತಾಂಶವು ನಿರೀಕ್ಷೆಯಲ್ಲಿರುತ್ತದೆ. ಇನ್ನೂಳಿದವರ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಸವಣೂರು ತಾಲ್ಲೂಕಿನ ಎಸ್.ಎಂ.ಕೃಷ್ಣ ನಗರದಲ್ಲಿನ 393 ಮನೆಗಳಲ್ಲಿನ 1729 ಜನರನ್ನು ಗುರುತಿಸಿದ್ದು, ಸದರಿ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದ್ದು, ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ "ಫೀವರ್ ಕ್ಲಿನಿಕ್ ಅನ್ನು ತೆರೆಯಲಾಗಿದ್ದು, ಅಲ್ಲಿನ ಜನರಿಗೆ ದಾದಿಯರು ಹಾಗೂ ಆಶಾ ಕಾರ್ಯಕತರ್ೆಯರು ಪ್ರತಿ ದಿನವು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.
ಸೀಲ್ಡೌನ್ ಪ್ರದೇಶದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಲು, ತರಕಾರಿ, ಹಾಗೂ ದಿನಸಿ ಸಾಮಾಗ್ರಿಗಳನ್ನು ಜಿಲ್ಲಾಡಳಿತದಿಂದಲೇ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಸವಣೂರು ಪಟ್ಟಣವನ್ನು ಬಫರ್ಜೋನ್ನ್ನು ಗುರುತಿಸಲಾಗಿದ್ದು, ಸವಣೂರು ನಗರ ಪ್ರದೇಶದಲ್ಲಿ ವ್ಯಾಪರ, ವ್ಯವಹಾರ ವಹಿವಾಟುಗಳನ್ನು ನಿರ್ವಹಿಸದಂತೆ ಸೂಚಿಸಲಾಗಿದ್ದು ಹಾಗೂ ಅಲ್ಲಿಯೇ ಕಂಟ್ರೋಲ್ ರೂಂ ಸಹ ತೆರೆಯಲಾಗಿರುತ್ತದೆ.
ಈಗಾಗಲೇ ಹಾವೇರಿ ಜಿಲ್ಲಾಧ್ಯಾಂತ 3,28,159 ಮನೆಗಳಲ್ಲಿನ 15,67,612 ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ನಡೆಸಿದ್ದು ಅದರಲ್ಲಿ 668 ವ್ಯಕ್ತಿಗಳಿಗೆ ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೂ ಸಹ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ.
ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದಿಲ್ಲ.
ಜಿಲ್ಲೆಯ ಜನತೆಯು ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ಮನವರಿಕೆ ಮಾಡಿ ಜಿಲ್ಲಾಡಳಿತಕ್ಕೆ ತೀವ್ರ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.