ಹಾವೇರಿ:27 : ಪರಿಸರದಲ್ಲಿ ಇಂಗಾಲ ಡೈಆಕ್ಸೈಡ್ ಸಾಂದ್ರತೆಯ ಪ್ರಮಾಣ ಹೆಚ್ಚಾಗುತ್ತಿರುವುದು ಇಂದಿನ ಹವಾಮಾನ ಬದಲಾವಣೆಗೆ ಕಾರಣ ಎಂದು ಜಂಟಿ ಕೃಷಿ ನಿರ್ದೇಶಕರಾದ ಮಂಜುನಾಥ ಬಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಣೇಬೆನ್ನೂರು ತಾಲೂಕು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ "ಹವಾಮಾನ ಬದಲಾವಣೆ ಮತ್ತು ಕೃಷಿ ಮೇಲೆ ಅದರ ಪರಿಣಾಮ" ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೀಟಗಳು ಮತ್ತು ಅವುಗಳ ನೈಸಗರ್ಿಕ ಶತ್ರುಗಳನ್ನು ಅರ್ಥಮಾಡಿಕೊಳ್ಳುವುದು ಕೃಷಿ ಸಂಶೋಧನೆಯಲ್ಲಿ ಒಂದು ಪ್ರಮುಖ ಸವಾಲಾಗಿ ಮಾರ್ಪಟ್ಟಿದೆ ಎಂದು ಹೇಳಿದರು.
ಬ್ಯಾಡಗಿ ಸಹಾಯಕ ತೋಟಗಾರಿಕಾ ನಿದರ್ೇಶಕರಾದ ವಿಜಯಲಕ್ಷ್ಮಿ, ಅವರು ಮಾತನಾಡಿ, ಅನಿಶ್ಚಿತ ಹವಾಮಾನ ಪರಿಸ್ಥಿತಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಹವಾಮಾನ ಸ್ಥಿತಿಯ ಸಮಯೋಚಿತ ಮುನ್ಸೂಚನೆಗಾಗಿ ಮೊಬೈಲ್ ಆಪ್ಲಿಕೇಶನ್ಗಳ ಅಗತ್ಯವನ್ನು ತಿಳಿಸಿದರು.
ಡಾ.ಯು.ಕೆ.ಹುಲಿಹಳ್ಳಿ, ಪ್ರಾದ್ಯಾಪಕರು (ಬೇಸಾಯಶಾಸ್ತ್ರ), ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ ಅವರು ಹವಾಮಾನ ಬದಲಾವಣೆಯು ಕೃಷಿ ಉತ್ಪಾದಕತೆಯ ಮೇಲೆ ಆಗುವ ಪರಿಣಾಮವನ್ನು ತಗ್ಗಿಸುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಡಾ. ಶ್ರೀಪಾದ್ ಕುಲಕರ್ಣಿ ಹಾಗೂ ಅವರು ಮಾತನಾಡಿದರು.
ಇದೆ ಸಂದರ್ಭದಲ್ಲಿ ಧಾರವಾಡದ ಕೃ.ವಿ.ವಿ. ಡಾ. ಆರ್.ಎಚ್.ಪಾಟೀಲ್ ಸಹ ಪ್ರಾದ್ಯಾಪಕ ಮತ್ತು ಮುಖ್ಯಸ್ಥರಾದ (ಕೃಷಿ ಹವಾಮಾನ ಶಾಸ್ತ್ರ), ಅವರು ಹವಾಮಾನ ಬದಲಾವಣೆ ಮತ್ತು ಕೃಷಿಯ ಮೇಲೆ ಅದರ ಪ್ರಭಾವ, ಕೃಷಿ ವಿಜ್ಞಾನಿಯಾದ ಡಾ. ಪ್ರವೀಣಕುಮಾರ ಎಮ್. ಗುಳೇದ, (ಕೃಷಿ ಹವಾಮಾನ ಶಾಸ್ತ್ರ) ಭವಿಷ್ಯದ ತಾಪಮಾನವನ್ನು ಮತ್ತು ಸರಾಸರಿ ಸಮುದ್ರ ಮಟ್ಟದ ಕುರಿತು ಮಾತನಾಡಿದರು.
ಡಾ. ಅಶೋಕ.ಪಿ. ಹಿರಿಯ ವಿಜ್ಞಾನಿ ಮತ್ತು ಮುಖ್ಯಸರು, ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ "ಮೇಘದೂತ" ಎಂಬ ಆಂಡ್ರಾಯ್ಡ್ ಅಪ್ಲೀಕೇಶನ್ (ಭಾರತೀಯ ಕೃಷಿ ಅನುಸಂದಾನ ಪರಿಷತ್ ಐ.ಸಿ.ಎ.ಅರ್ ಮತ್ತು ಭಾರತೀಯ ಉಷ್ಣವಲಯ ಹವಾಮಾನ ಶಾಸ್ತ್ರ ಸಂಸ್ಥೆ ಐ.ಐ.ಟಿ.ಎಮ್ ಸಹಭಾಗಿತ್ವದಲ್ಲಿ) ಬಗ್ಗೆ ವಿವರಿಸಿದರು.
ಕಾಯರ್ಾಗಾರದ ಅಧ್ಯಕ್ಷತೆವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥರಾದ ಡಾ. ಆರ್.ಬಿ. ಬಸವರಾಜಪ್ಪ ಅವರು ಮಾತನಾಡಿ, ಪಶುಸಂಗೋಪನೆ ಮತ್ತು ಪ್ರಮುಖ ಕೃಷಿ ಪದ್ಧತಿಗಳಿಗೆ ಸಂಬಂಧಿಸಿದ ಇತರೆ ಉದ್ಯೋಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು (ಐ.ಎಫ್.ಎಸ್) ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಯರ್ಾಗಾರದಲ್ಲಿ ವಿಜ್ಞಾನಿಗಳಾದ ಡಾ. ಜಿ. ಆರ್. ರಾಜಕುಮಾರ, ಡಾ. ಕೆ. ಪಿ. ಗುಂಡಣ್ಣವರ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.