ವಿಶೇಷ ಲೇಖನ
ದಾರವಾಡ 13: ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿ, ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಬ್ಲಡ್ ಡೋನರ್ ಆರ್ಗನೈಸೇಶನ್ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಆಫ್ ಬ್ಲಡ್ ಟ್ರಾನ್ಸ್ಫ್ಯೂಷನ್ ಸಹಯೋಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ಆಚರಣೆ ಮಾಡುತ್ತದೆ.
ರಕ್ತದಾನದಲ್ಲಿ ರಕ್ತದ ಗುಂಪು (ಃಟಠರಜ ರಡಿಠಠಿ) ಅನುಗುಣವಾಗಿ ಯಾರಿಗೆ ಯಾರು ರಕ್ತ ಕೊಡಬಹುದು ಎಂಬುದು ನಿರ್ಧಾರವಾಗುತ್ತದೆ. ರಕ್ತದ ಗುಂಪುಗಳು ನಾಲ್ಕು ಮುಖ್ಯ ವರ್ಗಗಳಿವೆ: ಂ, ಃ, ಂಃ ಮತ್ತು ಓ. ಹಾಗೆಯೇ, ಪ್ರತಿಯೊಬ್ಬರಿಗೂ ಖ ಜಿಚಿಛಿಣಠ (ಠಿಣತಜ ಅಥವಾ ಟಿಜರಚಿಣತಜ) ಇರುತ್ತದೆ. ಈ ರೀತಿಯಾಗಿ ಒಟ್ಟು 8 ಂ+, ಂ-, ಃ+, ಃ-, ಂಃ+, ಂಃ-, ಓ+, ಓ- ರಕ್ತದ ಗುಂಪುಗಳಿರುತ್ತವೆ.
ಯಾರು ಯಾರಿಗೆ ರಕ್ತ ಕೊಡಬಹುದೇದಂರೆ ಓ- (ಒ-ನೆಗೆಟಿವ್): ಎಲ್ಲ ರಕ್ತ ಗುಂಪಿನವರಿಗೆ ರಕ್ತ ನೀಡಬಹುದು. ಆದರೆ ತನ್ನಂತವರಿಗೆ ಮಾತ್ರ ರಕ್ತ ಸ್ವೀಕರಿಸಬಹುದು.
ಓ+ (ಒ-ಪಾಸಿಟಿವ್): ಂ+, ಃ+, ಂಃ+, ಓ+ ಗೆ ರಕ್ತ ಕೊಡಬಹುದು. ಓ+ ಅಥವಾ ಓ- ಗಳಿಂದ ಮಾತ್ರ ರಕ್ತ ಸ್ವೀಕರಿಸಬಹುದು.ಂ- (ಎ-ನೆಗೆಟಿವ್): ಂ-, ಂ+, ಂಃ-, ಂಃ+ ಗೆ ರಕ್ತ ಕೊಡಬಹುದು. ಂ- ಅಥವಾ ಓ- ಗಳಿಂದ ರಕ್ತ ಸ್ವೀಕರಿಸಬಹುದು.ಂ+ (ಎ-ಪಾಸಿಟಿವ್): ಂ+ ಮತ್ತು ಂಃ+ ಗೆ ರಕ್ತ ಕೊಡಬಹುದು. ಂ+, ಂ-, ಓ+, ಓ- ಗಳಿಂದ ರಕ್ತ ಸ್ವೀಕರಿಸಬಹುದು.ಃ- (ಬಿ-ನೆಗೆಟಿವ್): ಃ-, ಃ+, ಂಃ-, ಂಃ+ ಗೆ ರಕ್ತ ಕೊಡಬಹುದು. ಃ- ಅಥವಾ ಓ- ಗಳಿಂದ ರಕ್ತ ಸ್ವೀಕರಿಸಬಹುದು.ಃ+ (ಬಿ-ಪಾಸಿಟಿವ್): ಃ+ ಮತ್ತು ಂಃ+ ಗೆ ರಕ್ತ ಕೊಡಬಹುದು. ಃ+, ಃ-, ಓ+, ಓ- ಗಳಿಂದ ರಕ್ತ ಸ್ವೀಕರಿಸಬಹುದು.ಂಃ- (ಎಬಿ-ನೆಗೆಟಿವ್): ಂಃ- ಮತ್ತು ಂಃ+ ಗೆ ರಕ್ತ ಕೊಡಬಹುದು. ಂ-, ಃ-, ಂಃ-, ಓ- ಗಳಿಂದ ರಕ್ತ ಸ್ವೀಕರಿಸಬಹುದು.ಂಃ+ (ಎಬಿ-ಪಾಸಿಟಿವ್): ಎಲ್ಲರಿಂದ ರಕ್ತ ಸ್ವೀಕರಿಸಬಹುದು (ಗಟಿತಜಢಿಚಿಟ ಖಜಛಿಠಿಜಟಿಣ). ಆದರೆ ರಕ್ತ ನೀಡುವುದು ಕೇವಲ ಂಃ+ ಗೆ ಮಾತ್ರ ನೀಡಬಹುದು.
ರಕ್ತದಾನ ಮಾಡುವ ಮೊದಲು ರಕ್ತದ ಪ್ರಮಾಣ ಮತ್ತು ನಂತರ ಪಾಲಿಸಬೇಕಾದ ಕೆಲವೊಂದು ಮುಖ್ಯವಾದ ಕ್ರಮಗಳು ಇವೆ. ಇವು ರಕ್ತದಾನವು ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ ಮತ್ತು ದಾತರಿಗೂ ಲಾಭಕಾರಿಯಾಗಿರುತ್ತವೆ.
ರಕ್ತದಾನಕ್ಕೆ ಮುನ್ನ (ಃಜಜಿಠಜ ಃಟಠರಜ ಆಠಚಿಣಠ): ರಕ್ತದಾನಿಗಳು ರಕ್ತದ ಅರ್ಹತೆ ಪರೀಕ್ಷಿಸಿಕೊಳ್ಳಬೇಕು. ವಯಸ್ಸು 18-60 ವರ್ಷಗಳ ಮಧ್ಯೆ ಇರಬೇಕು, ತೂಕ ಕನಿಷ್ಠ 50 ಕೆ.ಜಿ. ರಕ್ತದೊತ್ತಡ, ಹಿಮೋಗ್ಲೋಬಿನ್ ಮೊದಲಾದವು ಸಾಮಾನ್ಯ ಮಟ್ಟದಲ್ಲಿರಬೇಕು. ತೀವ್ರವಾದ ಅನಾರೋಗ್ಯ, ಇತ್ತೀಚಿನ ಶಸ್ತ್ರಚಿಕಿತ್ಸೆ, ಸೋಂಕು ಇದ್ದರೆ ರಕ್ತದಾನ ಬೇಡಬಾರದು. ಏನಾದರೂ ತಿನ್ನಿ ಖಾಲಿ ಹೊಟ್ಟೆಯಲ್ಲಿ ಹೋಗಬಾರದು. ಹಗುರವಾದ ಆಹಾರ ಸೇವಿಸಿ. ಪಾನೀಯ ಸೇವಿಸಿ. ದೇಹದಲ್ಲಿ ತೇವಾಂಶ ಇರುವಾಗ ರಕ್ತದಾನ ಸುಲಭವಾಗುತ್ತದೆ. ನೀರು ಅಥವಾ ಹಣ್ಣಿನ ರಸ ಕುಡಿಯಿರಿ. ಯಾವುದಾದರು ಓಷಧಿ ಸೇವಿಸುತ್ತಿದ್ದರೆ ವೈದ್ಯರಿಗೆ ಮಾಹಿತಿ ನೀಡಿಬೇಕು.
ರಕ್ತದಾನದ ವೇಳೆ (ಆಣಡಿಟಿರ ಆಠಚಿಣಠ): ಧೈರ್ಯದಿಂದ, ನೆಮ್ಮದಿಯಿಂದ ಆರಾಮವಾಗಿ ಕುಳಿತುಕೊಳ್ಳಿ. ಕೆಲವೊಮ್ಮೆ ಸಣ್ಣ ತುಳಕಾಟ, ತಲೆಸುತ್ತು ಆಗಬಹುದು ಸಿಬ್ಬಂದಿಗೆ ತಕ್ಷಣವೇ ಹೇಳಿ.ರಕ್ತದಾನ ನಂತರ (ಂಜಿಣಜಡಿ ಆಠಚಿಣಠ): ಅಲ್ಪ ವಿಶ್ರಾಂತಿ, 10-15 ನಿಮಿಷಗಳಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಅಲ್ಪಾಹಾರ ಸೇವನೆ, ಮಿಠಾಯಿ, ಹಣ್ಣು ರಸ, ನೀರು ಮುಂತಾದವು ನೀಡಲಾಗುತ್ತದೆ ತೆಗೆದುಕೊಳ್ಳಿ. ಶ್ರಮದ ಕೆಲಸ ಬೇಡ, ದಿನವಿಡಿ ಭಾರವಾದ ಕೆಲಸ ಅಥವಾ ವ್ಯಾಯಾಮ ತಪ್ಪಿಸಿ.3 ತಿಂಗಳಿಗೊಮ್ಮೆ (ಪುರುಷರು) ಮತ್ತು 4 ತಿಂಗಳಿಗೊಮ್ಮೆ (ಮಹಿಳೆಯರು) ಮಾತ್ರ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದದರಿಂದ ಆರೋಗ್ಯದಲ್ಲಿ ಹಾನಿಯಾಗುವುದಿಲ್ಲ. ಬದಲಾಗಿ, ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ.
ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು 11 ರಕ್ತ ನಿಧಿ ಇದ್ದು, ಅದರಲ್ಲಿ ಎರಡು ಸರ್ಕಾರದ ಅಧಿನಿಯಮದಡಿ ಕಾರ್ಯನಿರ್ವಹಿಸುತ್ತವೆ. 9 ಅರೆ ಸರಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜನರಿಗೆ ಸಮರ್ಕವಾಗಿ ರಕ್ತವು ಸಿಗುತ್ತಿಲ್ಲ.
ಇದಕ್ಕೆ ಮುಖ್ಯ ಕಾರಣ ಜನರಲ್ಲಿ ರಕ್ತದಾನದ ಬಗ್ಗೆ ಸರಿಯಾದ ಅರಿವು ಮಾಹಿತಿ ಇಲ್ಲದೆ ಇರುವುದು. ಇಂದಿನ ಸಮಾಜದಲ್ಲಿ ಇನ್ನೂ ಬಹುತೇಕ ಜನರು ರಕ್ತದಾನದ ಬಗ್ಗೆ ಸಮರ್ಕ ಮಾಹಿತಿ ಹೊಂದಿಲ್ಲ. ಈ ಅಜ್ಞಾನವೇ ರಕ್ತದಾನದ ಕೊರತೆಯ ಪ್ರಮುಖ ಕಾರಣವಾಗಿದೆ.ಜನರಿಗೆ ಮಾಹಿತಿ ಇಲ್ಲದಿರುವ ಕೆಲವು ಮುಖ್ಯ ಕಾರಣಗಳು: ರಕ್ತದಾನ ಮಾಡಿದರೆ ಶಕ್ತಿ ಕಡಿಮೆ ಆಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ, ರಕ್ತದಾನದಿಂದ ಆರೋಗ್ಯ ಹದಗೆಡುತ್ತದೆ ಎಂದು ಭಯಪಡುವುದು, ನಾನು ರಕ್ತದಾನ ಮಾಡುವ ಅವಶ್ಯಕತೆ ಏನು? ಎಂಬ ನಿರಾಸಕ್ತಿ, ರಕ್ತದಾನ ಮಾಡುವ ಪ್ರಕ್ರಿಯೆ ಹೇಗಿರುತ್ತದೆ ಎಂಬ ಅರಿವು ಇಲ್ಲದೆ ಇರುವುದು.
ರಕ್ತದಾನಿಗಳು ರಕ್ತದಾನ ಮಾಡದೆ ಇದ್ದರೆ ಆಗುವಂತಹ ಪರಿಣಾಮಗಳು: ಅನೇಕ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ ಬೇಕಾದಷ್ಟು ರಕ್ತ ಲಭ್ಯವಿಲ್ಲದಂತಾಗುವುದು, ಅಪಘಾತ, ಗರ್ಭಿಣಿ ಸ್ತ್ರೀಯರಿಗೆ, ಶಸ್ತ್ರಚಿಕಿತ್ಸೆ, ಅಥವಾ ಗಂಭೀರ ರೋಗಗಳಲ್ಲಿ ರೋಗಿಗಳಿಗೆ ರಕ್ತ ಸಿಗದೇ ಜೀವಹಾನಿ ಸಂಭವಿಸುತ್ತಿವೆ.
ಇದರ ಪರಿಹಾರ ಕ್ರಮಗಳು: ಶಾಲೆ, ಕಾಲೇಜು, ಕಚೇರಿ, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ಅತೀ ಹೆಚ್ಹಾಗಿ ನಡೆಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಕ ಸಂದೇಶಗಳನು ಹಂಚಿಕೊಳ್ಳಬೇಕು. ರಕ್ತದಾನ ಮಾಡಿದವರು ತಮ್ಮ ಅನುಭವ ಹಂಚಿಕೊಳ್ಳುವುದರಿಂದ ಇತರರಿಗೂ ಧೈರ್ಯ ಬರುತ್ತದೆ. ಆರೋಗ್ಯವಂತರು ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಕೆಂಪು ರಕ್ತಕಣಗಳನ್ನು 35 ದಿನಗಳವರೆಗೆ ಸಂಗ್ರಹಿಸಿ ಇಡಬಹುದು. ಬಿಳಿ ರಕ್ತ ಕಣಗಳನ್ನು 5 ದಿನಗಳವರೆಗೆ ಸಂಗ್ರಹಿಸಬಹುದು. ಮತ್ತು ಪ್ಲಾಸ್ಮಗಳನ್ನು ಒಂದು ವರ್ಷಗಳವರೆಗೆ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಮರೆಯಲಾರದ ಕ್ಷಣ ನನ್ನ ಮೊದಲ ರಕ್ತದಾನ: ನಾನು ಮೊದಲ ಬಾರಿಗೆ ರಕ್ತದಾನಕ್ಕೆ ಹೋದಾಗ ಹೃದಯದಲ್ಲಿ ಅಲ್ಪ ಭಯವಿತ್ತು, ಆದರೆ ತುಂಬಾ ಉತ್ಸಾಹವೂವಿತ್ತು. ಆಸ್ಪತ್ರೆಯ ಒಳಗಿದ್ದ ಅಜ್ಞಾತ ವಾತಾವರಣ, ಜ್ವಲಂತ ನದಿಯಂತಿದ್ದ ನನ್ನ ನಾಡಿ ಎಲ್ಲವೂ ಹೊಸತು. ನಿನ್ನ ರಕ್ತದಿಂದ ಒಂದು ಜೀವಕ್ಕೆ ಉಪಯೋಗವಾಗುತ್ತದೆ ಎಂಬ ನರ್ಸ್ ಮಾತುಗಳು ಇನ್ನೂ ನನ್ನ ಮನಸ್ಸಿನಲ್ಲಿ ತೊಳಲುತ್ತಿವೆ. ಕೈಗೆ ಸೂಜಿ ಹಾಕುವಾಗ ಕ್ಷಣಮಾತ್ರವಷ್ಟೇ ನೋವಿನ ಒಂದು ಭಾವನೆ. ಕೆಲವೇ ನಿಮಿಷಗಳಲ್ಲಿ ನನ್ನ ರಕ್ತದ ಹನಿ ಹನಿ, ಯಾರದೋ ಬದುಕಿನ ದೀಪವಾಯಿತು.ಆ ಕ್ಷಣ ನನಗೆ ತಿಳಿದುಬಂದಿತು ನಾನೊಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಜೀವ ಉಳಿಸುವ ಶಕ್ತಿಯನ್ನು ಹೊಂದಿದ್ದೆ ಎಂದು. ಭಾವನೆಗಳಿಂದ ಭರಿತವಾದ ಆ ಮೊದಲ ಅನುಭವ, ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯಿತು. ಅದೇ ಪ್ರಾರಂಭ, ಅಲ್ಲಿಂದ ಮತ್ತೆ ಹಲವು ಬಾರಿ ರಕ್ತದಾನ ಮಾಡಿರುವ ಮನಸ್ ತೃಪ್ತಿ ನನ್ನಲ್ಲಿದೆ.