ಹಾವೇರಿ: ಮೇ 22: ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತ ಕೋವಿಡ್ ವೈರಸ್ನ ಹರಡುವಿಕೆಯ ಸಂದಿಗ್ದ ಸನ್ನಿವೇಶದಲ್ಲಿ ನಾವಿದ್ದೇವೆ. ಕೋವಿಡ್ ವಿರುದ್ಧ ಹೋರಾಟದ ಜೊತೆಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯು, ಚಿಕನ್ ಗುನ್ಯಾ, ಮೆದಳು ಜ್ವರ ನಿಯಂತ್ರಣಕ್ಕಾಗಿ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತೆ, ಜಾಗೃತಿ, ಅರಿವು ಮೂಡಿಸುವ ಕೆಲಸವನ್ನು ಆಯಾ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಾಮಾನ್ಯ ಕಾಯಿಲೆಗಳಿಗೆ ವೈದ್ಯಕೀಯ ಸೌಲಭ್ಯಗಳ ಕೊರತೆ ಉಂಟಾಗಿದೆ. ಈ ಸಂದರ್ಭದಲ್ಲಿ ಖಾಸಗಿ ವೈದ್ಯರ ನೆರವು ಪಡೆದು ಕೋವಿಡ್ ಜೊತೆಗೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಶ್ರಮಿಸಬೇಕಾಗಿದೆ. ಈ ಕುರಿತಂತೆ ಸಮುದಾಯದಲ್ಲಿ ಅರಿವು ಮೂಡಿಸಲು ಶಾಲಾ ಶಿಕ್ಷಕರಿಗೆ ಡೆಂಗ್ಯು ತಡೆಗಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಕ್ತ ನಿದರ್ೆಶನ ನೀಡಬೇಕು. ಶಾಲೆಗಳ ಸುತ್ತ ಹಾಗೂ ಗ್ರಂಥಾಲಯಗಳಲ್ಲಿ ಸೊಳ್ಳೆ ರಹಿತ ವಾತಾವರಣ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಕೈಗೊಳ್ಳಬೇಕು. ಗಣಿ ಇಲಾಖೆಯವರು ಕಲ್ಲು ಕ್ವಾರೆಗಳನ್ನು ಸೊಳ್ಳೆ ರಹಿತ ವಾತಾವರಣ, ಕಾಮರ್ಿಕರಿಗೆ ಆರೋಗ್ಯ ಕಾಡರ್್ ವಿತರಣೆ, ಆರೋಗ್ಯ ತಪಾಸಣೆ, ಕ್ವಾರೆಗಳನ್ನು ನವೀಕರಿಸಲು ಆರೋಗ್ಯ ಇಲಾಖೆ ಸಮ್ಮತಿ ಪಡೆಯಲು ಗುತ್ತಿಗೆದಾರರಿಗೆ ಸೂಚಿಸಬೇಕು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ವಿಲೇವಾರಿ, ಚರಂಡಿ ಸ್ವಚ್ಛತೆ, ತೊಟ್ಟಿಗಳ ಸ್ವಚ್ಛತೆ ಸೇರಿದಂತೆ ಮೈಕಿಂಗ್ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಮೀನುಗಾರಿಕೆ, ಪಶು ಸಂಗೋಪನೆ ಇಲಾಖೆಗಳು ಗಪ್ಪಿ ಮತ್ತು ಗಾಂಬೂಸಿಯಾ ಮೀನುಗಳ ಸಂತಾನೋತ್ಪತ್ತಿ, ಜಿಲ್ಲೆಯಲ್ಲಿರುವ ಕೆರೆ, ಹೊಂಡ, ಬಾವಿ, ನದಿ, ಹಳ್ಳಗಳ ನಕ್ಷೆಯನ್ನು ಆರೋಗ್ಯ ಇಲಾಖೆಯೊಂದಿಗೆ ಹಂಚಿಕೊಳ್ಳುವುದು, ಜನವಸತಿಯಿಂದ ಹಂದಿ ಸಾಗಾಣಿಕೆ ದೂರ ಇರುವಂತೆ ನೋಡಿಕೊಳ್ಳುವುದು, ಮಂಗನ ಕಾಯಿಲೆ ಹರಡದಂತೆ ಅಸಹಜ ಮರಣಹೊಂದಿದ ಮಂಗಳ ಶವಪರೀಕ್ಷೆ ನಡೆಸಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೃಷಿ, ತೋಟಗಾರಿಕೆ ಇಲಾಖೆಗಳು ಕೃಷಿ ಹೊಂಡಗಳಿಗೆ ಲಾವರ್ಾಹಾರಿ ಗಪ್ಪಿ ಮೀನು ಬಿಡುವುದು, ಭತ್ತದ ಗದ್ದೆಗಳಿಗೆ ಬೇವು ಆಧಾರಿತ ಗೊಬ್ಬರ ಹಾಕುವುದು, ಹನಿ ನೀರಾವರಿಗೆ ಪ್ರೇರೆಪಣೆ ಮಾಡುವಂತೆ ಸಲಹೆ ನೀಡಿದರು. ಅಂಗನವಾಡಿ ವಾತಾವರಣ ಸೊಳ್ಳರ ಹಿತವಾಗಿ ನಿರ್ವಹಣೆ, ವಸತಿ ಶಾಲೆಗಳಲ್ಲಿ ಜಾಲರಿ ಅಳವಡಿಕೆ, ನೀರಿನ ಟ್ಯಾಂಕ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿರುಪಯುಕ್ತ ಟೈಯರ್ಗಳು, ಬಿಡಿಭಾಗಗಳಲ್ಲಿ ನೀರು ನಿಂತು ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸೂಕ್ತ ನಿರ್ವಹಣೆಮಾಡಬೇಕು. ಲಾವರ್ಾನಾಶಕ ಸಿಂಪರಣೆ, ಡಿಪೋವನ್ನು ಸೊಳ್ಳೆರಹಿತವಾಗಿಸಲು ಕ್ರಮವಹಿಸಲು ವಾಯವ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಮಾತನಾಡಿ, 2025ರೊಳಗೆ ಮಲೇರಿಯಾ ನಿಮರ್ೂಲನೆ ಹಾಗೂ ಡೆಂಗ್ಯು ಹರಡುವಿಕೆಯ ನಿಯಂತ್ರಣ ಮಾಡುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಸಹಕಾರ ಅಗತ್ಯವಾಗಿದೆ. 2016 ರಿಂದ 2020ರ ಎಪ್ರಿಲ್ ಮಾಹೆಯವರೆಗೆ ಅವಲೋಕಿಸಿದಾಗ ಮಲೇರಿಯಾ ಪ್ರಕರಣಗಳು, ಚಿಕನ್ಗುನ್ಯಾ ಪ್ರಕರಣಗಳು ತೀವ್ರವಾಗಿ ಇಳಿಮುಖವಾಗಿವೆ. ಡೆಂಗ್ಯು ಪ್ರಕರಣಗಳು ಇಳಿಮುಖವಾಗಿಲ್ಲ. ಅದೇ ರೀತಿ ಚಿಕನ್ ಗುನ್ಯಾ ಪ್ರಕರಣಗಳು 2016ರಲ್ಲಿ 26 ಪ್ರಕರಂಗಳು, 2017ರಲ್ಲಿ 138, 2018 ರಲ್ಲಿ 741, 2019 ರಲ್ಲಿ 207 ಹಾಗೂ 2020ರ ಈವರೆಗೆ 8 ಪ್ರಕರಣಗಳು ಪತ್ತೆಯಾಗಿವೆ. ಡೆಂಗ್ಯು ಪ್ರಕರಣಗಳು 2016ರಲ್ಲಿ 255, 2017ರಲ್ಲಿ 398, 2018ರಲ್ಲಿ 211, 2019ರಲ್ಲಿ 413 ಹಾಗೂ 2020ರ ಈವರೆಗೆ 38 ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
ಡಾ.ಜಯಾನಂದ ಅವರು ತಾಯಿ ಮರಣ, ಶಿಶು ಮರಣವಿವರ, ಎನ್.ಆರ್.ಎಚ್.ಎಂ. ಹಾಗೂ ಜನನಿ ಸುರಕ್ಷಾ ಯೋಜನೆ ಪ್ರಗತಿ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಜಂಟಿ ನಿದರ್ೆಶಕ ಡಾ.ಅಪ್ಪಾಸಾಹೇಬ ನರಹಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಹಾವನೂರ, ಡಾ.ಜಯಾನಂದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಮುಖ್ಯಸ್ಥರು ಉಪಸ್ಥಿತರಿದ್ದರು.