ರಾತ್ರಿ 9 ಗಂಟೆ ಬಳಿಕ ಎಟಿಎಂಗಳಿಗೆ ನಗದು ತುಂಬಿಸುವಂತಿಲ್ಲ
ನವದೆಹಲಿ: ಮುಂದಿನ ವರ್ಷದಿಂದ ಯಾವುದೇ ಪಟ್ಟಣದಲ್ಲಿ ರಾತ್ರಿ 9 ಗಂಟೆ ಬಳಿಕ ಎಟಿಎಂಗಳಿಗೆ ನಗದು ತುಂಬಿಸುವಂತಿಲ್ಲ. ಗ್ರಾಮಿಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ಬಳಿಕ ನಗದು ಮರುಪೂರಣ ಮಾಡುವಂತಿಲ್ಲ! ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಮುಂದಿನ ವರ್ಷ ಫೆಬ್ರವರಿ 8ರಿಂದ ಇದು ಜಾರಿಗೆ ಬರಲಿದೆ.
ದೇಶದ ವಿವಿಧೆಡೆ ನಗದು ಸಾಗಿಸುವ ವಾಹನಗಳ ಮೆಲೆ ದಾಳಿ, ದರೊಡೆ, ಎಟಿಎಂಗೆ ಕನ್ನ ಮತ್ತಿತರ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆ ಯಲ್ಲಿ ಕೇಂದ್ರ ಸಕರ್ಾರ ಈ ಕ್ರಮಕ್ಕೆ ಮುಂದಾಗಿದೆ.
ಎಟಿಎಂ ವಾಹನಗಳಲ್ಲಿ ಹಣ ಸಾಗಿಸುವ ವೇಳೆ ಡ್ರೆವರ್ ಹೊರತಾಗಿ ಇಬ್ಬರು ಗಾಡ್ರ್ಗಳು, ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು. ಒಬ್ಬ ಸಶಸ್ತ್ರ ಗಾಡರ್್ ಡ್ರೆವರ್ ಪಕ್ಕದಲ್ಲಿ ಕುಳಿತಿಬೇಕು. ಇನ್ನೊಬ್ಬ ಗಾಡರ್್ ಹಿಂದಿನ ಸೀಟಿನಲ್ಲಿ ಕುಳಿತಿರಬೇಕು.
ವಾಹನಕ್ಕೆ ನಗದನ್ನು ತುಂಬಿಸುವಾಗ ಅಥವಾ ತೆಗೆಯುವಾಗ, ಚಹಾ, ಊಟದ ಸಮಯದಲ್ಲಿ ಕನಿಷ್ಠ ಒಬ್ಬ ಗಾಡರ್್ ನಗದು ತುಂಬಿರುವ ವಾಹನದ ಬಳಿಯೆ ಇರಬೇಕು. ಮಾಜಿ ಸೈನಿಕರು, ಸೇನೆಯಲ್ಲಿ ಗಾಡ್ರ್ಗಳಾಗಿದ್ದವರಿಗೆ ಆದ್ಯತೆ ನೀಡಬೇಕು. ಟಿಪಿಎಸ್, ಸಿಸಿಟಿವಿ ಕ್ಯಾಮರಾ ಮತ್ತಿತರ ಉಪಕರಣಗಳ ಮೂಲಕ ನಿಗಾ ಇರಿಸಬೇಕು. ಯಾವುದೇ ವಾಹನದಲ್ಲಿ 5 ಕೊ?ಟಿಗಿಂತ ಹೆಚ್ಚಿನ ಹಣ ಸಾಗಿಸಬಾರದು.
ಖಾಸಗಿ ಏಜೆನ್ಸಿಗಳು ಭದ್ರತಾ ಸಿಬ್ಬಂದಿಯನ್ನು ನೇಮಿಸುವಾಗ ವ್ಯಕ್ತಿಯ ಹಿನ್ನೆಲೆ ಕುರಿತು ಪೊಲೀಸ್ ಪರಿಶೀಲನೆ ನಡೆಸಬೇಕು. ಆಧಾರ್ ಸಂಖ್ಯೆ, ಕಾಯಂ ವಿಳಾಸ, ಈ ಹಿಂದೆ ಆತ ಎಲ್ಲಿ ಕೆಲಸ ಮಾಡಿದ್ದ, ಆತನ ವಿರುದ್ಧ ದೂರು, ಪ್ರಕರಣ ಇದೆಯೆ ಎಂಬುದನ್ನು ಪರಿಶೀಲಿಸುವುದು ಕಡ್ಡಾಯ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 