ಎಪಿಎಂಸಿ ಕಾರಕೂನ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
APMC Karakoon Association elects president, vice president
ಮಹಾಲಿಂಗಪುರ 18: ಪಟ್ಟಣದ ಎಪಿಎಂಸಿ ಕಾರಕೂನ ಸಂಘಕ್ಕೆ ಬಸವರಾಜ. ಎಂ. ನುಚ್ಚಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಟಿರಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಗಷ್ಟ 15 ರಂದು ಎಪಿಎಂಸಿ ಕಾರಕೂನ ಸಂಘದ ಕಚೇರಿಯಲ್ಲಿ ಸೇರಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಮಯದಲ್ಲಿ ಆಡಳಿತ ಮಂಡಳಿಗೆ ಸುರೇಶ್ ಕರಡಿ ಕಾರ್ಯದರ್ಶಿ, ಖಜಾಂಚಿಯಾಗಿ ಮಲ್ಲಪ್ಪ ಬೀಳಗಿ ಆಯ್ಕೆಯಾದರು.
ಉಳಿದಂತೆ ರವೀಂದ್ರ ಶಿರೋಳ, ಮಂಜುನಾಥ ಯಾದವಾಡ, ಬಸವರಾಜ ಹುನಶ್ಯಾಳ, ಶಿವಾನಂದ ಕರಡಿ, ಚಂದ್ರಶೇಖರ ಮಿರ್ಜಿ, ಮುತ್ತಪ್ಪ ಮುರಗೋಡ, ಶ್ರೀಶೈಲ ಕಾಗಿ ಸದಸ್ಯರಾಗಿ ಮುಂದುವರೆದರು. ಸಲಹಾ ಸಮಿತಿಯಲ್ಲಿ ಮಲ್ಲಪ್ಪ ಕುಳಲಿ, ಪಂಡಿತಪ್ಪ ಜಮಖಂಡಿ, ವಿನಾಯಕ ಹಳ್ಳಿ, ಶಂಕರ ಬಂಡಿಗಣಿ, ಈಶ್ವರ ಕುಕ್ಕುಗೋಳ ಮತ್ತು ಪರ್ಪ ಬಂಡಿಗಣಿ ಇದ್ದಾರೆ. ಇವರೆಲ್ಲರೂ ನೂತನ ಅಧ್ಯಕ್ಷರಾದಿಯಾಗಿ ನೂತನ ಆಯ್ಕೆ ಮಂಡಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 