ಕಂಡೆ ಮೀನು ಚುಚ್ಚಿದ ಪರಿಣಾಮ ಯುವಕನ ಸಾವು
A young man died after being bitten by a stingray
ಕಂಡೆ ಮೀನು ಚುಚ್ಚಿದ ಪರಿಣಾಮ ಯುವಕನ ಸಾವು
ಕಾರವಾರ 16 : ಕಾರವಾರ ಸಮೀಪದ ಮಾಜಾಳಿ ದಂಡೇಭಾಗ್ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಂಡೆ ಜಾತಿಯ ಮೀನು ಚುಚ್ಚಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಅನಿಲ್ ಮಜಾಳಿಕರ್ ( 24) ಸಾವನ್ನಪ್ಪಿದ್ದಾರೆ.ಅಕ್ಟೋಬರ್ 14 ಮಂಗಳವಾರ ಅಕ್ಷಯ್ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ 8-10 ಇಂಚುಗಳಷ್ಟು ಉದ್ದದ ಕಂಡೆ (ಸಕ್ಕರ್ ಮೀನು) ಮೀನು ತೀಕ್ಷ್ಣವಾದ ಮುಳ್ಳಿನ ರೀತಿ ಮೊನಚಾದ ಮೂಗಿನ ಮೀನು ಸಮುದ್ರ ನೀರಿನಿಂದ ಹಾರಿ ಅಕ್ಷಯ ಹೊಟ್ಟೆಗೆ ಚುಚ್ಚಿತು. ಮೀನಿನ ತೀಕ್ಷ್ಣವಾದ ಮೂತಿಯಿಂದ ತಿವಿದ ಕಾರಣ ಅಕ್ಷಯಗೆ ತೀವ್ರವಾದ ಗಾಯವಾಗಿತ್ತು. ಅವರ ಕರುಳುಗೆ ತೀವ್ರ ಹಾನಿಯಾಗಿ ಆಂತರಿಕ ಬ್ಲೀಡಿಂಗ್ ಆಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ . ಅಕ್ಷಯ್ ಅವರನ್ನು ತಕ್ಷಣವೇ ಕಾರವಾರದ ಕ್ರಿಮ್ಸ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಗಾಯಗಳಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು . ಆದರೆ ನಿರಂತರ ನೋವಿನಿಂದಾಗಿ ಅಕ್ಷಯ ಅವರು ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಕ್ಷಯ್ ಸಾವನ್ನಪ್ಪಿದ್ದಾರೆ . ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಅಕ್ಷಯ ಸಾವಿಗೆ ಕಾರಣ ಎಂದು ಅಕ್ಷಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 