ವೃತ್ತಿಯಿಂದ ನಿವೃತ್ತಿರಾದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲ್ಲಸಮುದ್ರ ಅವರಿಗೆ ಅಭಿಮಾನೋತ್ಸವ
Tribute to the ideal teacher Lakshmana Mallasamudra who retired from the profession
ಲಕ್ಷ್ಮೇಶ್ವರ 21: ವೃತ್ತಿಯಲ್ಲಿಯೇ ಪವಿತ್ರ ವೃತ್ತಿಯಾದ ಶಿಕ್ಷಕರ ವೃತ್ತಿ ಅಂತ ಪವಿತ್ರವಾದ ಸರ್ಕಾರಿ ಶಿಕ್ಷಕರಾಗಿ ಮೂರು ದಶಕಗಳ ಕಾಲ ಸಮರ್ಥವಾಗಿ ಸೇವೆ ಸಲ್ಲಿಸಿ ಆದರ್ಶ ಶಿಕ್ಷಕರಾಗಿ ವೃತ್ತಿಯಿಂದ ನಿವೃತ್ತರಾದ ಲಕ್ಷ್ಮಣ್ಣರಾಮಣ್ಣ ಮಲಸಮುದ್ರ ಅವರಿಗೆ ಅಭಿನಂದನೆ ಅಭಿಮಾನೋತ್ಸವ ಕಾರ್ಯಕ್ರಮವು ಪಟ್ಟಣದ ಸ್ಟೇಟ್ ಬ್ಯಾಂಕ್ ಮೇಲ್ಗಡೆ ಇರುವ ಎಪಿಎಂಸಿ ವರ್ತಕರ ಸಭಾಭವನದಲ್ಲಿ ನಡೆಯಿತು ಶಿಕ್ಷಕ ವೃತ್ತಿಯಿಂದ ನಿವೃತ್ತಿರಾದ ಲಕ್ಷ್ಮಣ್ಣ ಮಲ್ಲಸಮುದ್ರ ದಂಪತಿಗಳಿಗೆ ಅವರ ಆತ್ಮೀಯ ಎಲ್ಲಾ ಶಿಕ್ಷಕರು ಅಭಿಮಾನಿಗಳು ಹಿತೈಷಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸುವದರೊಂದಿಗೆ ಅಭಿನಂದಿಸಿದರು.
ಆತ್ಮೀಯ ಎಲ್ಲ ಶಿಕ್ಷಕರ ಅಭಿಮಾನಿಗಳ ಅಭಿಮಾನದ ಸನ್ಮಾನವನ್ನು ಸ್ವೀಕರಿಸಿದ ವೃತ್ತಿಯಿಂದ ನಿವೃತ್ತಿರಾದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲ್ಲಸಮುದ್ರ ಅವರು ಮಾತನಾಡಿ ತಮ್ಮ ಶಿಕ್ಷಕ ಸೇವಾ ಅವಧಿಯಲ್ಲಿ ತಾವು ಕಲಿಸಿದ ಶಿಕ್ಷಣ ನಡೆದು ಬಂದ ಹಾದಿ ತಾವು ಅನುಭವಿಸಿದ ಕಷ್ಟ ಸುಖ ನೆನಪುಗಳು ಮತ್ತು ತಾವು ಪಡೆದ ರಾಜ್ಯ ಉತ್ತಮ ಶಿಕ್ಷಕ ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಎಲ್ಲದರ ಬಗ್ಗೆ ವಿಸ್ತಾರವಾಗಿ ಹಂಚಿಕೊಂಡರು ಇದೇ ಸಮಯದಲ್ಲಿ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಆದರ್ಶ ಶಿಕ್ಷಕ ಲಕ್ಷ್ಮಣ್ಣ ಮಲಸಮುದ್ರ ಅವರು ತಮ್ಮ ಜೊತೆಗೆ ಶಿಕ್ಷಕ ಸೇವೆಯನ್ನು ಸಲ್ಲಿಸಿದ ಶಿಕ್ಷಕರನ್ನು ತಮಗೆ ಶಿಕ್ಷಣ ಕಲಿಸಿದ ಗುರುಗಳನ್ನು ಆತ್ಮೀಯ ಹಿರಿಯರನ್ನು ಸನ್ಮಾನಿಸಿದರು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಿಕ್ಷಕ ವೃಂದದವರು ಅಭಿಮಾನಿಗಳು ಪಾಲ್ಗೊಂಡಿದ್ದರು
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 