ಶಿಥಿಲಗೊಂಡ ಶಾಲಾ ಕಟ್ಟಡ ಬಯಲಲ್ಲೇ ಮಕ್ಕಳಿಗೆ ಪಾಠ
ಸಂಬರಗಿ 11: ಗಡಿ ಭಾಗದ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕೊಠಡಿ ಇಲ್ಲದೆ ಮಕ್ಕಳು ಒಂದೇ ಕೊಠಡಿಯಲ್ಲಿ ಕೂತು ಪಾಠ ಕಲಿಯುತ್ತಿದ್ದಾರೆ ಆದರೆ ರಾಜ್ಯ ಸರಕಾರ ಗಡಿ ಭಾಗದ ಕನ್ನಡ ಶಾಲೆಗಳು ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ ಶಾಲೆಯ ಕೊಠಡಿಯ ಮೇಲಿನ ಮೆಲ್ಚಾವಣಿ ತೆಗೆದು ಹಾಕಿದ್ದಾರೆ ಆದರೆ ಇನ್ನೂವರೆಗೆ ದುರಸ್ತಿಯಾಗಿಲ್ಲ ಮಕ್ಕಳಿಗೆ ಬೈಲಿಗೆ ಕೂತು ಪಾಠ ಕಲಿಯುವ ಸ್ಥಿತಿ ಬಂದಿದೆ.
ಗಡಿ ಭಾಗದ ಸಂಬರಗಿ, ಶಿರೂರ, ಪಾಂಡೆಗಾಂವ, ಮದಭಾವಿ, ಜಂಬಗಿ ಸೇರಿದಂತ ಹಲವಾರು 200 ಶಾಲೆಗಳ ಕೊಠಡಿ ಮೇಲ್ಚಾವಣಿ ತೆಗೆದು ದುರಸ್ತಿಯನ್ನು ಕನರ್ಾಟಕ ಗ್ರಾಮೀಣ ಮೂಲಬೂತ ಸೌಕರ್ಯ ಅಭಿವೃದ್ದಿ ಇಲಾಖೆಯವರು ಮಾಡುತ್ತಿದ್ದಾರೆ ಆದರೆ ಕೆಲಸವನ್ನು ಮಂದಗತಿಯಲ್ಲಿ ನಡೆಯುತ್ತಿದ್ದು ಹಲವಾರು ಶಾಲೆಗಳ ಮೇಲೆ ಇನ್ನೂ ಮೇಲ್ಚಾವಣಿ ಹಾಕಿಲ್ಲ ಆಕಾರಣಕ್ಕೆ ಮಕ್ಕಳಿಗೆ ಎಲ್ಲಿ ಕೂತು ಪಾಠ ಕಲಿಯಬೇಕೆಂದು ಪ್ರಶ್ನೆಯಾಗಿದೆ.
ಗಡಿ ಭಾಗದ ಕನ್ನಡ ಶಾಲೆ ವಿವಧ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತದೆ ಅದರಲ್ಲಿ ಶಿಕ್ಷಕರ ಕೊರತೆ ಮಕ್ಕಳ ಕೊರತೆ ಕೊಠಡಿ ಕೊರತೆ ಈ ಕುರಿತು ಎಸ್.ಡಿ.ಎಮ್.ಸಿ ಪದಾಧಿಕಾರಿಗಳು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರು ಅವರಿಂದ ಆಶ್ವಾಸನೆ ಮಾತ್ರ ಸಿಗುತ್ತದೆ ಕಾರ್ಯರೂಪದಲ್ಲಿ ಬರುತ್ತಿಲ್ಲ. ಕನ್ನಡ ಪರ ಶಾಲೆಗಳ ಸಮಸ್ಯೆ ಬಗೆಹರಿಸಲು ಕನ್ನಡ ಪರ ಅನೇಕ ಸಂಘಟನೆಗಳು ಹೋರಾಟ ಮಾಡಿದ್ದಾರೆ. ಈ ಸಮಸ್ಯೆ ಕುರಿತು ಕ.ರ.ವೇ ಅಧ್ಯಕ್ಷ ಬಸಗೌಡ ಪಾಟೀಲ ಬೀದಿಗಿಳಿದು ಹೋರಾಟ ಮಾಡಿದ್ದಾರೆ.
ಆನಂತರ ಅಧಿಕಾರಿಗಳು ಶಾಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಅಷ್ಟೆ ಮಾಡಿದ್ದಾರೆ ಆದರೆ ಶಾಲೆಗಳಿಗೆ ಶಿಕ್ಷಕರು ಹಾಗೂ ಹೊಸದಾಗಿ ಕೊಠಡಿ ನಿಮರ್ಾನ ಕುರಿತು ಯಾವುದೇ ಕಾರ್ಯಕೈಗೊಂಡಿಲ್ಲ.
ಸಧ್ಯದಲ್ಲಿ ಸಕರ್ಾರದಿಂದ ಹಳೆ ಕಟ್ಟಡ ಮೇಲ್ಚಾವಣಿ ತೆಗೆದು ದುರಸ್ತಿ ಮಾಡುತ್ತಿದ್ದಾರೆ ಆದರೆ ಹಲವಾರು ಗ್ರಾಮಗಳಲ್ಲಿ ಮೇಲ್ಚಾವಣಿ ತೆಗೆದಿದ್ದಾರೆ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿದೆ. ಸಧ್ಯದಲ್ಲಿ ವಿಧ್ಯಾಥರ್ಿಗಳಿಗೆ ಕೂತು ಪಾಠ ಕಲಿಯುವ ಕೊಠಡಿ ಇಲ್ಲ ದಿನದಿಂದ ದಿನಕ್ಕೆ ಗಡಿ ಭಾಗದ ಶಾಲೆಗಳ ಸಮಸ್ಯೆ ಹೆಚ್ಚಾಗುತ್ತಿದ್ದು ಆದರೆ ಕಡಿಮೆಯಾಗುತ್ತಿಲ್ಲ.
ಈ ಕುರಿತು ಕ.ರ.ವೇ ಅಧ್ಯಕ್ಷ ಬಸಗೌಡ ಪಾಟೀಲ, ಬೊಮ್ಮನಾಳ ಇವರಿಗೆ ಸಂಪಕರ್ಿಸಿದಾಗ ಗಡಿ ಭಾಗದ ಕನ್ನಡ ಪ್ರಾಥಮಿಕ ಶಾಲೆಗಳ ಮೇಲ್ಛಾವಣಿ ತೆಗೆದು ಸುಮಾರು 1 ತಿಂಗಳಾದರು ಇನ್ನೂವರೆಗು ದುರಸ್ತಿಗೊಂಡಿಲ್ಲ ಶೀಘ್ರದಲ್ಲಿ ದುರಸ್ತಿಗೊಳಿಸಬೇಕು ಇಲ್ಲವಾದರೆ ಬೀದಿಗಳಿದು ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ. ಮೊರಟಗಿ ಇವರಿಗೆ ಸಂಪಕರ್ಿಸಿದಾಗ ಅಂತಹ ಶಾಲೆಗೆ ಬೇಟಿ ನೀಡಿ ಪರಿಶೀಲನೆ ಮಾಡಿ ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 