ಇಂದುಶ್ರೀಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದ 38ನೇ ವಾರ್ಷಿಕೋತ್ಸವ

ಇಂದುಶ್ರೀಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದ 38ನೇ ವಾರ್ಷಿಕೋತ್ಸವ  38th Anniversary of Indusree Kailasa Varasiddhi Ganapathi Temple

ಲೋಕದರ್ಶನ ವರದಿ 

ಗದಗ 04: ನಗರದ ಮಸಾರಿ, ವಿನಾಯಕ ನಗರ, ಜೆ.ಟಿ.ಕಾಲೇಜ್ ಬಳಿಯ ಶ್ರೀಕೈಲಾಸ ವರಸಿದ್ಧಿ ಗಣಪತಿ ದೇವಸ್ಥಾನದ 38ನೇ ವಾರ್ಷಿಕೋತ್ಸವ ಸಮಾರಂಭ ಎ.5 ರಂದು ರವಿವಾರ ಜರುಗಲಿದೆ. ಮುಂಜಾನೆ 7 ಗಂಟೆಯಿಂದ ಗಣಪತಿ ದೇವರಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮುಂಜಾನೆ 9 ಗಂಟೆಯಿಂದ  ಪುಣ್ಯಾಹವಾಚನ, ಮಹಾಗಣಪತಿ ಹೋಮ, ಕಲಾತತ್ವ ಹೋಮ, ಪಂಚವಿಂಶತಿ ಕಲಶಾಭಿಷೇಕ, ಗಣಹೋಮ, ನವಗ್ರಹ ಶಾಂತಿ, ಸುಬ್ರಹ್ಮಣ್ಯ ಹೋಮ ಹಮ್ಮಿಕೊಳ್ಳಲಾಗಿದೆ.  ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಂತರ, ಪ್ರಸಾದ ವಿತರಣೆ(ಅನ್ನ ಸಂತರೆ​‍್ಣ), ರಾತ್ರಿ 9ಕ್ಕೆ ರಂಗ ಪೂಜಾ ಅಷ್ಟಾವಧಾನ ಸೇವೆ ಜರುಗಲಿದೆ. ಸದ್ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ತನು, ಮನ, ಧನಕನಕಾಧಿಗಳನ್ನಿತ್ತು ಶ್ರೀಗಣಪತಿ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕು.