370 ನೇ ವಿಧಿ ರದ್ದು: ಭಾರತೀಯ ಹೈಕಮಿಷನರ್ ಗೆ ಪಾಕ್ ತರಾಟೆ

370 ನೇ ವಿಧಿ ರದ್ದು: ಭಾರತೀಯ ಹೈಕಮಿಷನರ್ ಗೆ ಪಾಕ್ ತರಾಟೆ

ಮಾಸ್ಕೋ, ಆಗಸ್ಟ್ 6   ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ  ನೀಡುವ ಸಂವಿಧಾನದ  370 ಮತ್ತು 35 ಎ ವಿಧಿ ರದ್ದುಗೊಳಿಸಿದ  ಭಾರತ ಸರ್ಕಾರದ  ನಿರ್ಧಾರದಿಂದ ಅಸಮಾಧಾನಗೊಂಡ ಪಾಕಿಸ್ತಾನ ಭಾರತೀಯ ಹೈಕಮಿಷನರ್ ಅವರನ್ನು ಕಚೇರಿಗೆ  ಕರೆಸಿಕೊಂಡು  ಇದರ ಬಗ್ಗೆ ತೀವ್ರ ಪ್ರತಿರೋಧ  ವ್ಯಕ್ತಪಡಿಸಿದೆ.  

"ವಿದೇಶಾಂಗ ಕಾರ್ಯದರ್ಶಿ ಭಾರತೀಯ ಹೈಕಮಿಷನರ್ ಅವರನ್ನು ಕಚೇರಿಗೆ ಕರೆಸಿ  ಸೋಮವಾರ  ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡ  ಕ್ರಮಕ್ಕೆ  ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ  ಎಂದು ಸ್ಪುಟ್ನಿಕ್ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.  

ಸೋಮವಾರ,  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ   ಸಂವಿಧಾನದ 370 ನೇ ವಿಧಿಯನ್ನು  ರಾಷ್ಟ್ರಪತಿ  ಅಧಿಸೂಚನೆ ಮೂಲಕ ರದ್ದುಪಡಿಸಿತ್ತು . ಇದರ ಜೊತೆಗೆ  ವಿವಾದಿತ ಪ್ರದೇಶವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸಿ, - ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಂತ ವಿಧಾನಸಭೆಹೊಂದಿದ  ಮತ್ತು  ಲಡಾಖ್ ಗೆ  ವಿಧಾನಸಭೆಯಿಲ್ಲದ ಕೇಂದ್ರಾಡಳಿತ  ಪ್ರದೇಶದ ಸ್ಥಾನಮಾನ ನೀಡುವ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡಿಸಿದ್ದು ಇದಕ್ಕೆ  ರಾಜ್ಯಸಭೆಯ ಸಮ್ಮತಿ  ದೊರಕಿದ್ದು ಲೋಕಸಭೆಯ  ಸಮ್ಮತಿ ಇನ್ನಷ್ಟೆ ದೊರಕಬೇಕಿದೆ.  

ಪಾಕಿಸ್ತಾನದ ವಿದೇಶಾಂಗ ಕಾರ್ಯದಶರ್ಿ ಪ್ರಕಾರ, ಈ ನಿರ್ಧಾರವು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ  ನಿರ್ಣಯಗಳಿಗೆ ವಿರುದ್ಧವಾಗಿದೆ.  

ಜಮ್ಮು ಮತ್ತು ಕಾಶ್ಮೀರವನ್ನು ಮತ್ತಷ್ಟು  ಅಸ್ಥಿರಗೊಳಿಸುವ ಚಟುವಟಿಕೆಗಳಿಂದ ದೂರವಿರುವಂತೆ  ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಭಾರತಕ್ಕೆ ಸೂಚಿಸಿದ್ದಾರೆ.  ಕಾಶ್ಮೀರಿ ಜನರಿಗೆ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುವುದಾಗಿ  ಇಸ್ಲಾಮಾಬಾದ್ನ ತನ್ನ ಬದ್ಧತೆಯನ್ನು   ಪುನರುಚ್ಚರಿಸಿದೆ.  

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಕೈಗೊಂಡ ಅಕ್ರಮ ತೀಮರ್ಾನಗಳನ್ನೂ   ಎದುರಿಸಲು ಸಾಧ್ಯವಿರುವ ಎಲ್ಲ ಆಯ್ಕೆ, ಅವಕಾಶ  ಬಳಸಿಕೊಂಡು ಹೋರಾಟ ಮಾಡುವುದಾಗಿ  ಪಾಕಿಸ್ತಾನ ಸೋಮವಾರ ಹೇಳಿತ್ತು.  

"ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಪ್ರತಿಪಾದಿಸಿರುವಂತೆ ಭಾರತ ಸರ್ಕಾರದ ಯಾವುದೇ ಏಕಪಕ್ಷೀಯ ತೀರ್ಮಾನದಿಂದ  ವಿವಾದಿತ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ  ಜೊತೆಗೆ  "ಈ ನಿರ್ಧಾರವೂ  ಕಾಶ್ಮೀರ ಮತ್ತು ಪಾಕಿಸ್ತಾನದ ಜನರಿಗೆ ಎಂದಿಗೂ ಸಮ್ಮತಿಯಾಗುವುದಿಲ್ಲ ಎಚ್ಚರಿಕೆ ನೀಡಿದೆ