ಗೋವಾದ ಬಿಚ್ಚೋಲಿಯಂನಲ್ಲಿ ನೆಡೆದ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ
16th Kannadigas Cultural Conference held in Bicholiam, Goa
ಕೊಪ್ಪಳ 16: ಪಕ್ಕದ ಗೋವಾ ರಾಜ್ಯದ ಬಿಚೋಲಿಯಂ ನಗರದ ಹಿರಾ ಬಾಯಿ ಮೆಮೋರಿಯಲ್ ಹಾಲ್ ನಲ್ಲಿ 16ನೇ ಬಾರಿಗೆ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಯಶಸ್ವಿಯಾಗಿ ಜೋರುಗಿತು,ಕನ್ನಡ ಪ್ರಾಚೀನ ಭಾಷೆಗಳಲ್ಲಿ ಒಂದು ಅಲ್ಲದೆ ಈ ಕನ್ನಡವು ಭಾರತದ 4 ಪ್ರಮುಖ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದ್ದು, ದೀರ್ಘ ಇತಿಹಾಸ ಮತ್ತು ಸ್ವತಂತ್ರ ಸಾಹಿತ್ಯ ಪರಂಪರೆಯವನ್ನು ಹೊಂದಿದೆ. ಕನ್ನಡವು ಶ್ರೀಮಂತ ಹಾಗೂ ಇತಿಹಾಸ ಹೊಂದಿರುವ ಭಾಷೆಯಾಗಿದ್ದು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಏಕೈಕ ಭಾಷೆಯಾಗಿದೆ. ಕನ್ನಡ ಸಾಹಿತ್ಯದ ಅನೇಕ ಕೃತಿಗಳು ಜಗತ್ತಿನ ಬೇರೆ ಎಲ್ಲಾ ಭಾಷೆಗಳಿಗೆ ಭಾಷಾಂತರ ಕೊಂಡು ಕನ್ನಡದ ಹಿರಿಮೆಯನ್ನು ಹೆಚ್ಚಿಸಿವೆ ಎಂದು ಸಮ್ಮೇಳನದ ಸರ್ವಾಧ್ಯಕ್ಷಕನ್ನಡಪರ ಚಿಂತಕ ಕನ್ನಡದ ನುಡಿ ಸೇವಕ ಸಮಾಜಸೇವಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.
ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿಶಿಷ್ಟ ಪೂರ್ಣವಾಗಿದ್ದು ಸುಮಾರು 751 ಮಹಿಳೆಯರು ಪೂರ್ಣ ಕುಂಬದೂಂದಿಗೆ ಸಾಂಸ್ಕೃತಿಕ ಕಲಾತಂಡಗಳ ವೈಭವಯುತ ಅದ್ದೂರಿ ಮೆರವಣಿಗೆಯಲ್ಲಿ ನನ್ನನ್ನು ಸಮ್ಮೇಳನ ಅಧ್ಯಕ್ಷನಾಗಿ ಸ್ಥಳೀಯರಿಂದ ಅಪಾರ ಗೌರವ ಸನ್ಮಾನ ಪ್ರೀತಿ ಗೌರವ ಆದರಗಳೊಂದಿಗೆ ಆತಿಥಿ ಸತ್ಕಾರ ನೀಡಿ ಕಾರ್ಯಕ್ರಮವನ್ನು ಅದ್ಭುತ ಪೂರ್ವ ಯಶಸ್ಸು ಗೂಳಿಸಲು ಗೋವಾದ ಕನ್ನಡಿಗರು ಕಾರಣ ಎಂದು ಡಾ. ಸಂಗನ ಬಸಪ್ಪ ಬಿರಾದಾರ್ ಭಾವುಕರಾಗಿ ಹೇಳಿದರು. ಈ ಗೋವಾದ ಕರ್ಮಭೂಮಿಯಲ್ಲಿ ನಮ್ಮ ಕನ್ನಡ ಪದ ಸಹೋದರ ಸಹಕಾರ ಇಲ್ಲಿನ ಜನತೆಯೊಂದಿಗೆ ಅವರ ರೀತಿ ನೀತಿ ಸಂಸ್ಕಾರದೊಂದಿಗೆ ಬೆರೆತು ತಾವು ಬೆಳೆದು ತಮ್ಮ ಉದ್ಯೋಗ ಅಭಿವೃದ್ಧಿ ಮಾಡಿಕೊಂಡು ಗೋವಾದಲ್ಲಿ ಕನ್ನಡದ ಕನ್ನಡಿಗರ ಅಭಿವೃದ್ಧಿಗಾಗಿ ಕನ್ನಡ ಜನತೆಗೆ ದೊಡ್ಡ ಕೊಡುಗೆಯಾಗಿ ಸಮಾಜವನ್ನು ಮುನ್ನಡೆಸುವ ಕಾರ್ಯ ಈ ರೀತಿ ನಿರಂತರವಾಗಿ ಆಗಬೇಕು ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 