ಮಾನವೀಯತೆ ಮೆರೆದ 108 ವಾಹನ ಸಿಬ್ಬಂದಿ
ಮಹಾಲಿಂಗಪೂರ : ' ಹಣ ಎಂದರೆ ಹೆಣವೂ ಬಾಯಿ ಬಿಡುವುದು' ಎನ್ನುವ ಹಿರಿಯರ ಅನುಭವದ ನುಡಿಯಂತೆ ಈ ಕಾಲದಲ್ಲಿ ಹೇಗಾದರಾಗಲಿ ಹಣವಂತನಾಗಬೇಕು ಎನ್ನುವ ಮನೋಭಾವ ಭಾಗಶಃ ಜನರಲ್ಲಿ ಮನೆ ಮಾಡಿದೆ.
ಆದರೆ ಇಲ್ಲಿ 108 ವಾಹನ ಸಿಬ್ಬಂದಿಗಳಾದ ಚಾಲಕ ವಿಜಯ ಮನವಾಡೆ ಹಾಗೂ ಸ್ಟಾಫ್ ನಸರ್್ ಅಯ್ಯಪ್ಪಾ ಮೇಲಿ ತೀವೃ ಗಾಯಗೊಂಡ ಸಿಕಂದರ್ ಗೆ ರಸ್ತೆಯಲ್ಲಿ ಬಿದ್ದ ಅವನ 70 ಸಾವಿರ ಹಣದ ಬ್ಯಾಗ್ನ್ನು ಗೆಳೆಯನ ಕೈಗೆ ಮುಧೋಳ ಆಸ್ಪತ್ರೆಯಲ್ಲಿಯೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಆ.19 ಸೋಮವಾರ ರಂದು ಸಾಂಯಕಾಲ 07 ಘಂ.ಗೆ ಮಹಾಲಿಂಗಪೂರ ಪಟ್ಟಣದಿಂದ ಮುಧೋಳ ತಾಲೂಕಿನ ಸ್ವಂತ ಗ್ರಾಮ ಕುಳಲಿಗೆ ಸಿಕಂದರ ಕೋಳಿ ಎನ್ನುವಾತ ತನ್ನ ಬಜಾಜ್ ಪ್ಲಾಟಿನಾ ಮೋಟರ್ ಬೈಕ್ ಮೇಲೆ ಸಾಗುತ್ತಿರುವಾಗ ಮುಗಳಖೋಡ್ ಗ್ರಾಮದ ಕ್ರಾಸ್ಸ್ ಹತ್ತಿರ ಇನ್ನೊಂದು ಮೋಟರ್ ಬೈಕ್ ಮುಕಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಾಳುಗಳಾದ ಬೈಕ್ ಸವಾರರನ್ನು ಮಹಾಲಿಂಗಪೂರದ ಸಮುದಾಯ ಆರೋಗ್ಯ ಕೇಂದ್ರದ 108 ಅಂಬ್ಯುಲೆನ್ಸ್ ಸಿಬ್ಬಂದಿ ಮುಧೋಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಣವನ್ನು ಮರಳಿಸಿದ ಸಿಬ್ಬಂದಿಗಳನ್ನು ಗಾಯಾಳು, ಕುಟುಂಬಸ್ಥರು, ಸಾರ್ವಜನಿಕರು ಕೊಂಡಾಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 