ಮುಂಬಯಿನಲ್ಲೂ ಜಾರಿಗೆ ಬಂತು 10 ರೂಪಾಯಿ ಬಿಸಿ ಊಟ..!
ಮುಂಬೈ, ಡಿ 21 ಮಧ್ಯಾಹ್ನದ ಬಿಸಿ ಊಟ ಈಗ
ದೇಶದ ಜನಪ್ರಿಯ ಕಾರ್ಯಕ್ರಮವಾಗುತ್ತಿದೆ ಅನೇಕ ಸರಕಾರಗಳು ಇದನ್ನು ಪೈಪೋಟಿಯ ,ಮೇಲೆ ಜಾರಿಗೆ ತರುತ್ತಿವೆ.ಈಗ ಬೃಹತ್ ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ)
ತನ್ನ ನೌಕರರಿಗೆ 10 ರೂಪಾಯಿಗೆ ಬಿಸಿ ಊಟ ಕೊಡುವ ಯೋಜನೆಯನ್ನು ಜಾರಿಗೊಳಿಸಿದೆ. ಮೇಲಾಗಿ ಮುಂಬೈ
ಮಹಾಜನತೆಗೂ ಕೇವಲ ಒಂದೆರಡು ದಿನದಲ್ಲಿ ಈ ಸೌಲಭ್ಯ
ದೊರಕಲಿದೆ ಎಂದು ಮೇಯರ್ ಕಿಶೋರಿ ಫೆಢ್ನೆಕರ್ ತಿಳಿಸಿದ್ದಾರೆ.ಬಿಎಂಸಿ ಮೇಯರ್ ಕಿಶೋರಿ ಫೆಢ್ನೆಕರ್
ಈ ಯೋಜನೆ ಗೆ ಈಗಾಗಲೇ ಚಾಲನೆ ನೀಡಿದ್ದಾರೆ 10 ರೂ
ಗಳಿಗೆ ಎರಡು ಚಪಾತಿ, ಅನ್ನ, ದಾಲ್, ಎರಡು ಖಾದ್ಯಗಳು
ಸಿಗಲಿದೆ. ಶಿವಸೇನಾ ತನ್ನ ಪ್ರಣಾಳಿಕೆಯಲ್ಲಿ ಈ
10 ರೂ ಊಟದ ಯೋಜನೆ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು, ಇದನ್ನು ನಗರದ ನಾಗರಿಕರಿಗೂ ವಿಸ್ತರಣೆ ಮಾಡುವುದಾಗಿ ಅವರು
ತಿಳಿಸಿದ್ದಾರೆ. ಕೇವಲ ಎರಡು ದಿನದಲ್ಲಿ ಜನರಿಂದ ಇದಕ್ಕೆ
ಉತ್ತಮ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಕಾರಣ ಈ ಯೋಜನೆಯನ್ನು ಎಲ್ಲಾ ಜನರಿಗೂ ವಿಸ್ತರಿಸಲಾಗುವುದು
ಎಂದೂ ಕ್ಯಾಂಟಿನ್ ಮಾಲಿಕರು ತಿಳಿಸಿದ್ಧಾರೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 