ಪಾಟೀಲರವರಿಂದ 1 ಲಕ್ಷ ರೂ. ಚೆಕ್ ವಿತರಣೆ
ಲೋಕದರ್ಶನವರದಿ
ಶಿಗ್ಗಾವಿ : ನೆರೆಹಾವಳಿಯಿಂದ ತ್ರೀವ ಸಮಸ್ಯೆಗಳಿಗೆ ಒಳಗಾದ ಸಂತ್ರಸ್ತರಿಗೆ ತಾಲೂಕಿನ ಕಂಕನವಾಡ ಗ್ರಾಮದ ಪ್ರಗತಿಪರ ಸಾವಯವ ಕೃಷಿಕರಾದ ಸಿ ಡಿ ಪಾಟೀಲ ಅವರು ವೈಯಕ್ತಿಕವಾಗಿ 1 ಲಕ್ಷ ರೂ. ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಹಶೀಲ್ದಾರ ಚಂದ್ರಶೇಖರ ಗಾಳಿಯವರ ಮೂಲಕ ಮಂಗಳವಾರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಪಿಎಮ್ಸಿ ಅದ್ಯಕ್ಷೆ ಪ್ರೇಮಾ ಪಾಟೀಲ, ಫಕ್ಕೀರಜ್ಜ ಯಲಿಗಾರ, ಶಶಿಧರ ಯಲಿಗಾರ, ಆರ್ ಎಸ್ ಪಾಟೀಲ, ಭರಮಜ್ಜ ನವಲಗುಂದ, ಈರಣ್ಣ ಬಡ್ಡಿ, ಬಸಣ್ಣ ಹಾವೇರಿ, ಬಸವರಾಜ ರಾಗಿ, ಬಿ ಡಿ ಗುಂಡಣ್ಣವರ, ವಿ ಸಿ ಪಾಟೀಲ, ಪ್ರಶಾಂತ ದುಂಡಿಗೌಡ್ರ, ಜಿ ಸಿ ಪಾಟೀಲ, ಸಿ ಎಸ್ ಪಾಟೀಲ, ಸಿದ್ರಾಮಗೌಡ ಮೆಳ್ಳೆಗಟ್ಟಿ, ಶಿವಯೋಗೆಪ್ಪ ನವಲಗುಂದ, ಪ್ರಕಾಶ ಮೆಳ್ಳೆಳ್ಳಿ ಸೇರಿದಂತೆ ಇತರರು ಇದ್ದರು.
ಪ್ರಸಂಶೆ : ತಾಲೂಕಿನ ತಹಶೀಲ್ದಾರ ಚಂದ್ರಶೇಖರ್ ಗಾಳಿ ಚೆಕ್ ಸ್ವೀಕರಿಸಿ ಮಾತನಾಡಿ ತಾಲೂಕಿನಿಂದ ನೆರೆಸಂತ್ರಸ್ಥರಿಗೆ ನೀಡಿದ ಪರಿಹಾರದಲ್ಲಿ ಇದೇ ಅತೀ ಹೆಚ್ಚಿನ ಮೊತ್ತವಾಗಿದ್ದು ಸಿ ಡಿ ಪಾಟೀಲ ಅವರ ಈ ಮಾನವೀಯ ಕಾರ್ಯಕ್ಕೆ ಪ್ರಸಂಶಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 