‘ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ’

 ‘ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ನನಗೆ ಗೊತ್ತಿಲ್ಲ’ ‘I don’t know about the change of CM after Sankranti’

ಧಾರವಾಡ: ಸಂಕ್ರಾಂತಿ ಬಳಿಕ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ. ಸಿಎಂ ಬದಲಾವಣೆ ವಿಚಾರವನ್ನು ನಾನೂ ಪತ್ರಿಕೆ ಹಾಗೂ ಟಿವಿಯಲ್ಲಿ ಮಾತ್ರ ನೋಡಿದ್ದೇನೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಅವರು ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಗ್ಗೆ ಶಾಸಕಾಂಗ ಪಕ್ಷದಲ್ಲಿ ತೀರ್ಮಾನ ಆಗುತ್ತದೆ. ಹೈಕಮಾಂಡ್ ಹೇಳಿದ ಮೇಲೆ ನಾವೆಲ್ಲ ಒಪ್ಪಿಕೊಳ್ಳುವುದಿದೆ. ಕರ್ನಾಟಕದವರೇ ಆಗಿರುವ ಖರ್ಗೆ ಸಾಹೇಬರಿಗೆ ಎಲ್ಲವೂ ಗೊತ್ತಿದೆ.

ಎಲ್ಲವನ್ನೂ ಅವರು ನಿಭಾಯಿಸುತ್ತಾರೆ. ಹೈಕಮಾಂಡ್ ಸಿಎಂ ಬದಲಾವಣೆ ಬಗ್ಗೆ ನನ್ನನ್ನು ಕೇಳಿದರೆ ಮಾತ್ರ ಅವರಿಗೆ ರಿಯಾಕ್ಟ್ ಮಾಡುತ್ತೇನೆ ಎಂದರುಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಮರಳಿ ವಸತಿ ಕಲ್ಪಿಸುವ ವಿಚಾರ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.