ನಮ್ಮ ಉನ್ನತಿ ಮತ್ತು ಅವನತಿಗೆ ನಾವೇ ಕಾರಣ: ಗವಿಸಿದ್ದೇಶ್ವರ ಶ್ರೀ
We are responsible for our rise and fall: Gavisiddheshwara Sri
ಮಹಾಲಿಂಗಪುರ 26: ತಂದೆ-ಮಕ್ಕಳಿಗೆ, ಮಗ ತಾಯಿಗೆ, ಅಣ್ಣ ತಮ್ಮನಿಗೆ ಅಥವಾ ಗಂಡ ಹೆಂಡತಿಗೆ ಆಗುವನೆ, ಮೊಮ್ಮಕ್ಕಳು ಅಜ್ಜನಿಗೆ ಆಗುವರೆ ಹೀಗೆ ಯಾರು ಯಾರಿಗೆ ಆಗುತ್ತಾರೆ, ಈ ಜಗತ್ತಿನಲ್ಲಿ ಯಾರು ಯಾರಿಗೆ ಹಿತವರು ಎಂದು ಹೇಳಲಾಗದು ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕೆ ಎಲ್ ಇ ಕಾಲೇಜ ಎದುರುಗಡೆ ಇರುವ ಮೈದಾನದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನದ ಐದನೆ ದಿನ ಸಂಜೆ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇಲ್ಲಿ ಯಾರು ಯಾರಿಗೂ ಶತ್ರುವಲ್ಲ, ಯಾರಿಗೆ ಯಾರು ಮಿತ್ರರಲ್ಲ, ಇಲ್ಲಿ ಯಾರಿಂದ ಯಾರ ಉನ್ನತಿ, ಯಾರಿಂದ ಯಾರ ಅವನತಿ ಎಂದು ಹೇಳಲಾಗದು, ನಿನ್ನ ಉನ್ನತಿ ನಿನ್ನಿಂದಲೆ ಮತ್ತು ನಿನ್ನ ಅವನತಿ ನಿನ್ನ ಕೈಯಲ್ಲಿದೆ, ಇಲ್ಲಿ ನಿಗನೆ ನೀನೆ ಶತ್ರು, ನಿನಗೆ ನೀನೆ ಮಿತ್ರ.ನಾವು ಬರುವಾಗ ಏಕಾಂಕಿಯಾಗಿ ಬಂದಿದ್ದೇವೆ ಹೋಗುವಾಗಲೂ ಏಕಾಂಗಿಯಾಗಿಯೇ ಹೋಗಬೇಕು.
ಮನುಷ್ಯ ಇರುವುದಕ್ಕಿಂತ ಜಾಸ್ತಿ ತೋರಿಸಬೇಕು ಎನ್ನುವುದಕ್ಕೆ ಅವನ ಅವನತಿಯಾಗುತ್ತಿದೆ. ಮನುಷ್ಯ ತನ್ನ ಸೋಲನ್ನು ಬೇರೆಯವರ ಮೇಲೆ ಹಾಕಿಬಿಡುತ್ತಾನೆ, ಮನುಷ್ಯ ಸಂತೋಷವಾಗಿರಬೇಕಾದರೆ 2 ಸೂತ್ರಗಳ ಇವೆ, 1) ದೇವರು ಕೊಟ್ಟದ್ದನ್ನು ಸರಿಯಾಗಿನೋಡಿಕೊಳ್ಳಬೇಕು, 2) ದೇವರು ಕೊಡದೆ ಇರುವುದರ ಕಡೆಗೆ ತಲೆ ಕಡೆಸಿಕೊಳ್ಳಬೇಡ ಇದನ್ನು ತಿಳಿದು ನಡೆದರೆ ನಿಮ್ಮ ಬದುಕು ಸಂತೋಷವಾಗಿರುವುದು. ಆತ್ಮವಿಸ್ವಾಸದಿಂದ ಮಾತ್ರ ಮನುಷ್ಯನ ಉನ್ನತಿ ಸಾಧ್ಯ. ಮನುಷ್ಯ ಹೇಗೆ ಬೇಳೆಯಬೇಕು ಎಂದರೆ ನಿಮ್ಮ ಶತ್ರುಗಳ ನಿನ್ನ ಬಗ್ಗೆ ಕೊಂಡಾಡಬೇಕು,
ನಿನ್ನಲ್ಲಿ ಒಳ್ಳೆಯ ಗುಣಗಳಿದ್ದರೆ ನೀನಗೆ ನೀನೆ ಮಿತ್ರ, ನಿನ್ನಲ್ಲಿ ಕೆಟ್ಟು ಗುಣಗಳಿದ್ದರೆ ನಿನಗೆ ನೀನೆ ಶತ್ರು.ಮನುಷ್ಯನಗೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ತಿಳಿಸುವುದು ಮನಸ್ಸು.ನಮ್ಮಲ್ಲಿರುವ ಇಂದ್ರಿಯಗಳು ನೀನು ವಿವೇಕದಿಂದ ಕೆಲಸ ಮಾಡಿದರೆ ನಿನಗೆ ಮಿತ್ರನಾಗುತ್ತವೆ, ನೀನು ಅವಿವೇಕದಿಂದ ಕೆಲಸ ಮಾಡಿದರೆ ಅವು ಶತ್ರುಗಳಾಗುತ್ತವೆ. ಹೀಗೆ ನಿನ್ನ ಉನ್ನತಿ ಮತ್ತು ಅವನತಿಗೆ ನೀನೆ ಕಾರಣ ಆದ್ದರಿಂದ ನಮ್ಮ ಜೀವನದ ಗೆಲುವು ಸೋಲುಗಳು ನಮ್ಮ ಕೈಯಲ್ಲಿವೆ, ವಿವೇಕದಿಂದ ಜೀವನ ನಡೆಸಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 