ನಮ್ಮ ಉನ್ನತಿ ಮತ್ತು ಅವನತಿಗೆ ನಾವೇ ಕಾರಣ: ಗವಿಸಿದ್ದೇಶ್ವರ ಶ್ರೀ
We are responsible for our rise and fall: Gavisiddheshwara Sri
ಮಹಾಲಿಂಗಪುರ 26: ತಂದೆ-ಮಕ್ಕಳಿಗೆ, ಮಗ ತಾಯಿಗೆ, ಅಣ್ಣ ತಮ್ಮನಿಗೆ ಅಥವಾ ಗಂಡ ಹೆಂಡತಿಗೆ ಆಗುವನೆ, ಮೊಮ್ಮಕ್ಕಳು ಅಜ್ಜನಿಗೆ ಆಗುವರೆ ಹೀಗೆ ಯಾರು ಯಾರಿಗೆ ಆಗುತ್ತಾರೆ, ಈ ಜಗತ್ತಿನಲ್ಲಿ ಯಾರು ಯಾರಿಗೆ ಹಿತವರು ಎಂದು ಹೇಳಲಾಗದು ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ನಗರದ ಕೆ ಎಲ್ ಇ ಕಾಲೇಜ ಎದುರುಗಡೆ ಇರುವ ಮೈದಾನದಲ್ಲಿ ನಡೆಯುತ್ತಿರುವ ಅಧ್ಯಾತ್ಮ ಪ್ರವಚನದ ಐದನೆ ದಿನ ಸಂಜೆ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇಲ್ಲಿ ಯಾರು ಯಾರಿಗೂ ಶತ್ರುವಲ್ಲ, ಯಾರಿಗೆ ಯಾರು ಮಿತ್ರರಲ್ಲ, ಇಲ್ಲಿ ಯಾರಿಂದ ಯಾರ ಉನ್ನತಿ, ಯಾರಿಂದ ಯಾರ ಅವನತಿ ಎಂದು ಹೇಳಲಾಗದು, ನಿನ್ನ ಉನ್ನತಿ ನಿನ್ನಿಂದಲೆ ಮತ್ತು ನಿನ್ನ ಅವನತಿ ನಿನ್ನ ಕೈಯಲ್ಲಿದೆ, ಇಲ್ಲಿ ನಿಗನೆ ನೀನೆ ಶತ್ರು, ನಿನಗೆ ನೀನೆ ಮಿತ್ರ.ನಾವು ಬರುವಾಗ ಏಕಾಂಕಿಯಾಗಿ ಬಂದಿದ್ದೇವೆ ಹೋಗುವಾಗಲೂ ಏಕಾಂಗಿಯಾಗಿಯೇ ಹೋಗಬೇಕು.
ಮನುಷ್ಯ ಇರುವುದಕ್ಕಿಂತ ಜಾಸ್ತಿ ತೋರಿಸಬೇಕು ಎನ್ನುವುದಕ್ಕೆ ಅವನ ಅವನತಿಯಾಗುತ್ತಿದೆ. ಮನುಷ್ಯ ತನ್ನ ಸೋಲನ್ನು ಬೇರೆಯವರ ಮೇಲೆ ಹಾಕಿಬಿಡುತ್ತಾನೆ, ಮನುಷ್ಯ ಸಂತೋಷವಾಗಿರಬೇಕಾದರೆ 2 ಸೂತ್ರಗಳ ಇವೆ, 1) ದೇವರು ಕೊಟ್ಟದ್ದನ್ನು ಸರಿಯಾಗಿನೋಡಿಕೊಳ್ಳಬೇಕು, 2) ದೇವರು ಕೊಡದೆ ಇರುವುದರ ಕಡೆಗೆ ತಲೆ ಕಡೆಸಿಕೊಳ್ಳಬೇಡ ಇದನ್ನು ತಿಳಿದು ನಡೆದರೆ ನಿಮ್ಮ ಬದುಕು ಸಂತೋಷವಾಗಿರುವುದು. ಆತ್ಮವಿಸ್ವಾಸದಿಂದ ಮಾತ್ರ ಮನುಷ್ಯನ ಉನ್ನತಿ ಸಾಧ್ಯ. ಮನುಷ್ಯ ಹೇಗೆ ಬೇಳೆಯಬೇಕು ಎಂದರೆ ನಿಮ್ಮ ಶತ್ರುಗಳ ನಿನ್ನ ಬಗ್ಗೆ ಕೊಂಡಾಡಬೇಕು,
ನಿನ್ನಲ್ಲಿ ಒಳ್ಳೆಯ ಗುಣಗಳಿದ್ದರೆ ನೀನಗೆ ನೀನೆ ಮಿತ್ರ, ನಿನ್ನಲ್ಲಿ ಕೆಟ್ಟು ಗುಣಗಳಿದ್ದರೆ ನಿನಗೆ ನೀನೆ ಶತ್ರು.ಮನುಷ್ಯನಗೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂದು ತಿಳಿಸುವುದು ಮನಸ್ಸು.ನಮ್ಮಲ್ಲಿರುವ ಇಂದ್ರಿಯಗಳು ನೀನು ವಿವೇಕದಿಂದ ಕೆಲಸ ಮಾಡಿದರೆ ನಿನಗೆ ಮಿತ್ರನಾಗುತ್ತವೆ, ನೀನು ಅವಿವೇಕದಿಂದ ಕೆಲಸ ಮಾಡಿದರೆ ಅವು ಶತ್ರುಗಳಾಗುತ್ತವೆ. ಹೀಗೆ ನಿನ್ನ ಉನ್ನತಿ ಮತ್ತು ಅವನತಿಗೆ ನೀನೆ ಕಾರಣ ಆದ್ದರಿಂದ ನಮ್ಮ ಜೀವನದ ಗೆಲುವು ಸೋಲುಗಳು ನಮ್ಮ ಕೈಯಲ್ಲಿವೆ, ವಿವೇಕದಿಂದ ಜೀವನ ನಡೆಸಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 