ವಡ್ಡರಬಂಡೆ ರಾಜಕಾಲುವೆ ಸೇತುವೆ ಪುನರ್ ನಿರ್ಮಿಸಲು ಒತ್ತಾಯ
Waddarabande Rajkaluve bridge forced to rebuild
ವಡ್ಡರಬಂಡೆ ರಾಜಕಾಲುವೆ ಸೇತುವೆ ಪುನರ್ ನಿರ್ಮಿಸಲು ಒತ್ತಾಯ
ಬಳ್ಳಾರಿ 22: ನಗರದ ವಾರ್ಡ್ ನಂ. 15, ಬಾಲಾಜಿ ರಾವ್ ರಸ್ತೆ ಕೊನೆಯ ಭಾಗದಲ್ಲಿ ವಡ್ಡರಬಂಡೆ ರಾಜ್ ಕಾಲುವೆ ರಸ್ತೆಯಲ್ಲಿ ದೊಡ್ಡ ಗುಂಡಿ ತೆಗೆದು ಸುಮಾರು ಒಂದು ತಿಂಗಳಾದರೂ ಕಾಮಗಾರಿ ಕಾರ್ಯ ಪ್ರಾರಂಭ ಮಾಡಿರುವುದಿಲ್ಲ ಏಕೆ.ಈ ರಸ್ತೆಯು ಮಧ್ಯಭಾಗದಲ್ಲಿರುವುದರಿಂದ ಹಾಗೂ ಅಕ್ಕ-ಪಕ್ಕದಲ್ಲಿ ಗ್ಯಾರೇಜ್ಗಳು ಮತ್ತು ಲಗೇಜ್ ಆಟೋಗಳು ಮತ್ತು ಭಾರಿ ವಾಹನಗಳು ನಿಲ್ಲ್ಲುವುದರಿಂದ ಈ ಸದರಿ ರಸ್ತೆಯಲ್ಲಿ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಹಾಗೂ ಓಡಾಡುವುದಕ್ಕೆ ತುಂಬಾ ತೊಂದರೆಯಾಗುತ್ತದೆ.ಇದನ್ನು ಸರಿಪಡಿಸುವುದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾಕೇ ನಿರ್ಲಕ್ಷ್ಯತನ ತೋರುತ್ತಿದ್ದಾರೆನ್ನುವುದು ತಿಳಿಯುತ್ತಿಲ್ಲ, ಒಂದು ವೇಳೆ ರಾತ್ರಿ ಸಮಯದಲ್ಲಿ ಅಪಘಾತವಾದರೇ ಅದಕ್ಕೆ ಯಾರು ಹೊಣೆಗಾರರು ? ಆದ್ದರಿಂದ ಮಾನ್ಯರಾದ ತಾವುಗಳು ದಯಮಾಡಿ ಸದರಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಮೇಯರ್ ನಂದೀಶ್ ಅವರಿಗೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರರೆಡ್ಡಿ, ಎಸ್.ಕೃಷ್ಣ, ಜಿ.ಎಂ. ಭಾಷ, ಪಿ. ಶ್ರೀನಿವಾಸರೆಡ್ಡಿ, ಉಪ್ಪಾರ ಮಲ್ಲಪ್ಪ, ಶ್ರೀನಿವಾಸರೆಡ್ಡಿ ಎಂ, ಎಂ.ಕೆ. ಜಗನ್ನಾಥ, ಪಿ. ನಾರಾಯಣ,ಕೆ. ವೆಂಕಟೇಶ, ಎಂ. ಅಭಿಷೇಕ್ ಮತ್ತು ಇತರರು ಆಗಮಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 