ಪೇಟಿಯಂ ಹಣಕಾಸು ಸೇವೆಗಳ ನಿರ್ದೇಶಕ ಸ್ಥಾನ ತೊರೆದ ವಿಜಯ್ ಶೇಖರ್ ಶರ್ಮಾ
ನವದೆಹಲಿ, ೧೧ ದೇಶದ
ಪ್ರಮುಖ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥಾಪಕ
ವಿಜಯ್ ಶೇಖರ್ ಶರ್ಮಾ ಅನಿರೀಕ್ಷಿತ ನಿರ್ಧಾರ ಕೈಗೊಂಡಿದ್ದಾರೆ. ಪೇಟಿಯಂ ಹಣಕಾಸು ಸೇವೆಗಳ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ.ಈ ಸಂಬಂಧ ಅವರು
ಡಿಸೆಂಬರ್ ೨ ರಂದು ಪೇಟಿಎಂ ಹಣಕಾಸು ಸೇವೆಗಳ ಮಂಡಳಿಗೆ ಪತ್ರ ಬರೆದಿದ್ದಾರೆ ಎಂದು ಫೈನಾನ್ಷಿಯಲ್
ಎಕ್ಸ್ಪ್ರೆಸ್ ವರದಿ ಮಾಡಿದೆ.
ಇನ್ನಿತರ ಜವಾಬ್ದಾರಿಗಳಿಂದಾಗಿ ನಿರ್ದೇಶಕ
ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ
ಎಂದು ವಿಜಯ್ ಶೇಖರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ ನಿಬಂಧನೆಗಳ
ಹಿನ್ನೆಲೆಯಲ್ಲಿ ಅವರು ಹಣಕಾಸು ಸೇವೆಗಳ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಪಾವತಿ ಬ್ಯಾಂಕ್ ಅಧ್ಯಕ್ಷರು
ಎನ್ಬಿಎಫ್ಸಿ (ಬ್ಯಾಂಕೇತರ ಹಣಕಾಸು ಕಂಪನಿ) ನಿರ್ದೇಶಕ ಸ್ಥಾನ ಹೊಂದುವುದನ್ನು ನಿಷೇಧಿಸಿತ್ತು. ಬ್ಯಾಂಕ್ ಗೆ ಸೇರಿದ ಅಂಗಸಂಸ್ಥೆಯಾಗಿರದ ಹೊರತು ಬ್ಯಾಂಕಿನ ಅಧ್ಯಕ್ಷರು ನಿರ್ದೇಶಕರಾಗಬಾರದು
ಎಂದು ಸ್ಪಷ್ಟಪಡಿಸಿತ್ತು. ಈ ನಡುವೆ, ಸಂಸ್ಥೆಯ ಉಪಾಧ್ಯಕ್ಷ ರೋಹಿತ್ ಲೋಹಿಯಾ ಅವರನ್ನು ನಿರ್ದೇಶಕರನ್ನಾಗಿ ಆಡಳಿತ
ಮಂಡಳಿ ನೇಮಿಸಿದೆ. ಪೇಟಿಎಂ ತನ್ನ ಪಾವತಿ
ಬ್ಯಾಂಕ್ ಅನ್ನು ಭಾರತದಲ್ಲಿ ೨೦೧೭ ರ ಮೇನಲ್ಲಿ ಆರಂಭಿಸಿತ್ತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 