ವಾಜಪೇಯಿ ವಸತಿ ಯೋಜನೆ ಬಡವರ ಆತ್ಮಸ್ಥೈರ್ಯ: ಮಾಲಗಿತ್ತಿ
ಲೋಕದರ್ಶನ ವರದಿ
ಕೊಪ್ಪಳ 03: ಬಡತನ ರೇಖೆಗಿಂತ ಕೆಳಗಿರುವವರಿಗೆ, ವಸತಿ ರಹಿತರ ಹಿತ ಕಾಯಲು ಸಕರ್ಾರ ರೂಪಿಸಿರುವ ವಾಜಪೇಯಿ ವಸತಿ ಆವಾಸ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ದೇವಮ್ಮ ಮಾಲಗಿತ್ತಿ ಹೇಳಿದರು.
ಪಟ್ಟಣ ಪಂಚಾಯತ ಕಾಯರ್ಾಲಯದಲ್ಲಿ 16ನೇ ವಾಡರ್ಿನ ವಾಜಪೇಯಿ ವಸತಿ ಆವಾಸ್ ಯೋಜನೆಯ 20 ಫಲಾನುಭವಿಗಳಿಗೆ ಕಾಯರ್ಾದೇಶ ನೀಡಿ ಮಾತನಾಡಿದರು. ಆವಾಸ್ ಯೋಜನೆಯು ವಸತಿರಹಿತರಿಗೆ ಸೂರು ಕಲ್ಪಿಸುವುದರೊಂದಿಗೆ ಅವರಲ್ಲಿ ಚೈತನ್ಯ ತುಂಬಿ ಸಾವಲಂಬಿಗಳಾಗಿ ಬದುಕುವಂತೆ ಆತ್ಮಸ್ಥೈರ್ಯ ತಂದುಕೊಡುತ್ತದೆ ಎಂದರು.
ಮುಖ್ಯಾಧಿಕಾರಿಗಳಾದ ಬಿ.ಬಾಬು ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು. ಪ್ರತಿವಾಡರ್ಿನಲ್ಲಿರುವ ಯುವಕ-ಯುವತಿ ಮಂಡಳಿಯ ಪದಾಧಿಕಾರಿಗಳು ಜನಜಾಗೃತಿ ಮೂಡಿಸುವಲ್ಲಿ ಶ್ರಮವಹಿಸಲು ಅಗತ್ಯ ನೆರವು ನೀಡಲು ಪಟ್ಟಣ ಪಂಚಾಯತ ಸಿದ್ದವಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಮಂಗಳಾ ಕುಲಕಣರ್ಿ, ಮಹಾದೇವಿ ಬಣಗಾರ, ಫಲಾನುಭವಿಗಳಾದ ಶಾಂತಮ್ಮ ಮೇಟಿ, ಸರೋಜಮ್ಮ ಅಂಗಡಿ, ಶಾರಮ್ಮ ಅಳವಂಡಿ, ಗವಿಸಿದ್ದಮ್ಮ ಪಲ್ಲೇದ, ಶೋಭಾ ಪಾಟೀಲ, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಗಿರೀಶಾನಂದ ಜ್ಞಾನಸುಂದರ, ಮುಖಂಡ ಜಗದೀಶ ಮಾಲಗಿತ್ತಿ ಹಾಗೂ ಅನೇಕರು ಭಾಗವಹಿಸಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 