ವಾಜಪೇಯಿ ವಸತಿ ಯೋಜನೆ ಬಡವರ ಆತ್ಮಸ್ಥೈರ್ಯ: ಮಾಲಗಿತ್ತಿ
ಲೋಕದರ್ಶನ ವರದಿ
ಕೊಪ್ಪಳ 03: ಬಡತನ ರೇಖೆಗಿಂತ ಕೆಳಗಿರುವವರಿಗೆ, ವಸತಿ ರಹಿತರ ಹಿತ ಕಾಯಲು ಸಕರ್ಾರ ರೂಪಿಸಿರುವ ವಾಜಪೇಯಿ ವಸತಿ ಆವಾಸ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ದೇವಮ್ಮ ಮಾಲಗಿತ್ತಿ ಹೇಳಿದರು.
ಪಟ್ಟಣ ಪಂಚಾಯತ ಕಾಯರ್ಾಲಯದಲ್ಲಿ 16ನೇ ವಾಡರ್ಿನ ವಾಜಪೇಯಿ ವಸತಿ ಆವಾಸ್ ಯೋಜನೆಯ 20 ಫಲಾನುಭವಿಗಳಿಗೆ ಕಾಯರ್ಾದೇಶ ನೀಡಿ ಮಾತನಾಡಿದರು. ಆವಾಸ್ ಯೋಜನೆಯು ವಸತಿರಹಿತರಿಗೆ ಸೂರು ಕಲ್ಪಿಸುವುದರೊಂದಿಗೆ ಅವರಲ್ಲಿ ಚೈತನ್ಯ ತುಂಬಿ ಸಾವಲಂಬಿಗಳಾಗಿ ಬದುಕುವಂತೆ ಆತ್ಮಸ್ಥೈರ್ಯ ತಂದುಕೊಡುತ್ತದೆ ಎಂದರು.
ಮುಖ್ಯಾಧಿಕಾರಿಗಳಾದ ಬಿ.ಬಾಬು ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು. ಪ್ರತಿವಾಡರ್ಿನಲ್ಲಿರುವ ಯುವಕ-ಯುವತಿ ಮಂಡಳಿಯ ಪದಾಧಿಕಾರಿಗಳು ಜನಜಾಗೃತಿ ಮೂಡಿಸುವಲ್ಲಿ ಶ್ರಮವಹಿಸಲು ಅಗತ್ಯ ನೆರವು ನೀಡಲು ಪಟ್ಟಣ ಪಂಚಾಯತ ಸಿದ್ದವಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಮಂಗಳಾ ಕುಲಕಣರ್ಿ, ಮಹಾದೇವಿ ಬಣಗಾರ, ಫಲಾನುಭವಿಗಳಾದ ಶಾಂತಮ್ಮ ಮೇಟಿ, ಸರೋಜಮ್ಮ ಅಂಗಡಿ, ಶಾರಮ್ಮ ಅಳವಂಡಿ, ಗವಿಸಿದ್ದಮ್ಮ ಪಲ್ಲೇದ, ಶೋಭಾ ಪಾಟೀಲ, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಗಿರೀಶಾನಂದ ಜ್ಞಾನಸುಂದರ, ಮುಖಂಡ ಜಗದೀಶ ಮಾಲಗಿತ್ತಿ ಹಾಗೂ ಅನೇಕರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 