ಉಮರೇ, ಗಲಗಲಿ, ಶಾಮಲಾದೇವಿ ಶಿವಯ್ಯಗೆ ಸನ್ಮಾನ

Umar, Galagali, Shamaladevi Shivayya's tribute

ಉಮರೇ, ಗಲಗಲಿ, ಶಾಮಲಾದೇವಿ ಶಿವಯ್ಯಗೆ ಸನ್ಮಾನ 

ಸಂಬರಗಿ 08: ಖಿಳೇಗಾಂವ ಗ್ರಾಮದ ವಿವಿಧ ಉದ್ದೇಶಗಳ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ ಮುಖ್ಯ ವ್ಯವಸ್ಥಾಪಕ ಸುನಿಲ್ ಉಮರೇ ಮ್ಯಾನೇಜರ ಆಗಿ ಬಡ್ತಿ ಹೊಂದಿದ್ದು,  ಜಿಲ್ಲಾ ಕೇಂದ್ರ ಬ್ಯಾಂಕ್ ನೀರೀಕ್ಷಕ ರಮೇಶ್ ಗಲಗಲಿ ಅವರು ಬ್ಯಾಂಕ್‌ಗೆ ಭೇಟಿ ನೀಡಿದ ನಿಮಿತ್ತ ಮತ್ತು ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಸ್ತಿ ನಿಲಯದ  ಅಡುಗೆಯವರಾದ ಶಾಮಲಾದೇವಿ ಶಿವಯ್ಯ ಅವರ ನಿವೃತ್ತಿ ಹೊಂದಿದ ನಿಮಿತ್ತ ಈ ಮೂವರನ್ನು  ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಸತೀಶ್ ಹೊಣ್ಣಾಗೋಳು ಹಾಗೂ ಇನ್ನಿತರ ಕಮಿಟಿ ಪದಾಧಿಕಾರಿಗಳು ಸತ್ಕರಿಸಿದರು. ಸಂಘದ ನೂತನ ವ್ಯವಸ್ಥಾಪಕ ಸುನಿಲ್ ಉಮರೇ ಮಾತನಾಡಿ ಎಲ್ಲಾ ಸದಸ್ಯರು ನನಗೆ ಜವಾಬ್ದಾರಿಯನ್ನು ವಹಿಸಿದ್ದಾರೆ ಮತ್ತು ಅದನ್ನು ಪ್ರಾಮಾಣಿಕವಾಗಿ ಅನುಸರಿಸುವ ಮೂಲಕ ಎಲ್ಲಾ ಸದಸ್ಯರು ಮತ್ತು ರೈತರಿಗೆ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು. ಯಾವುದೇ ಸಮಸ್ಯೆ ಇದ್ದರೆ, ನಾನು ನಿಮ್ಮ ಸಹಾಯವನ್ನು ತೆಗೆದುಕೊಂಡು ಆ ಸಮಸ್ಯೆಯನ್ನು ಪರಿಹರಿಸುತ್ತೇನೆ. ಎಲ್ಲರ ಸಹಕಾರ ಅತ್ಯಗತ್ಯ. ಈ ಸನ್ಮಾನ ನನ್ನದಲ್ಲ, ಎಲ್ಲರದ್ದೆಂದು ಎಲ್ಲರೂ ಇದೆ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.    ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್ ಹೋನ್ನಾಗೋಳ, ಸಂಜಯ್ ಉಮರೇ, ಗಣೇಶ್ ಹೊನ್ನಾಗೋಳ, ರಾಜು ಬಗಲಿ, ರಮೇಶ್ ಪಾಟೀಲ್ ದರ್ಯಪ್ಪ ದಿವಾನಗೋಳ, ಅಣ್ಣಪ್ಪ ಕಡಿಮನಿ, ರವಿ ನಾಗಗೋಳ,  ಅನೇಕ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.