ಕಥಾ ಕಮ್ಮಟ ಕಾಯರ್ಾಗಾರ ಸಂಪನ್ನ
ಲೋಕದರ್ಶನ ವರದಿ
ಬೆಳಗಾವಿ 25, ಇಲ್ಲಿನ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ 24ರಂದು "ಕಥಾ ಕಮ್ಮಟ" ಒಂದು ದಿನದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾಯರ್ಾಗಾರವನ್ನು ಖ್ಯಾತ ಲೇಖಕರು ಮತ್ತು ಕಥೆಗಾರರಾದ ಪ್ರೊ. ಪ್ರೇಮ ಶೆಖರ ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಕನ್ನಡ ಕಥೆಗಳ ಗುಟ್ಟುಗಾರಿಗೆ ಮತ್ತು ಯಶಸ್ವಿ ಕಥೆಗಳನ್ನು ಬರೆಯುವ ಮೂಲಾಂಶಗಳು ಕಥೆಯ ರಚನೆ, ಪ್ರಕಟಣೆ ಮುಂತಾದವುಗಳ ಬಗ್ಗೆ ತಿಳಿಸಿದರು.
ಕಾಯರ್ಾಗಾರದ ಮುಖ್ಯ ಅಥಿತಿಗಳಾದ ಶ್ರೀಮತಿ ಪಾರ್ವತಿ ಪಿಟಗಿ ಪ್ರಶಿಕ್ಷಣಾಥರ್ಿಗಳನ್ನು ಉದ್ದೇಶಿಸಿ ತಮ್ಮ ಜೀವನದ ಅನುಭವಗಳ ಕುರಿತು ಮತ್ತು ಅವರಲ್ಲಿ ಕಥೆ ಹುಟ್ಟಿದ ಬಗೆಯನ್ನು ಹಂಚಿಕೊಂಡರು.
ಕಾಯರ್ಾಗಾರದ ಅಧ್ಯಕ್ಷರಾದ ಡಾ.ಎನ್.ಜಿ. ಬಟ್ಟಲ ಶಿಕ್ಷಕರಾಗುವವರಲ್ಲಿ ಸಾಹಿತ್ಯಿಕ ಒಲವು ಬೆಳೆದು ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕಥಾರೂಪದಲ್ಲಿ ಓದುಗರ ಮುಂದಿಡುವ ಸಾಮಥ್ರ್ಯ ಬೆಳೆದಾಗ ಕಥಾ ಕಮ್ಮಟದ ಉದ್ದೇಶ ಈಡೇರುವುದು. ಅಂತಹ ಒಂದು ಪ್ರೇರಣೆಯನ್ನು ಇಂದಿನ ಕಥಾಕಮ್ಮಟ ವಿದ್ಯಾಥರ್ಿಗಳಲ್ಲಿ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಕಾಯರ್ಾಗಾರದಲ್ಲಿ ಎಲ್ಲ ಪ್ರಶಿಕ್ಷಣಾಥರ್ಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಶಿಕ್ಷಣಾಥರ್ಿಗಳುತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾಗತವನ್ನು ಕು.ಎಸ್.ಜಿ. ಚಿನಿವಾಲ, ನಿರೂಪಣೆ ಕು.ಆರ್.ವಿ. ಅಕ್ಕಿ ಮತ್ತು ವಂದನಾರ್ಪಣೆಯನ್ನು ಶ್ರೀ.ಎಸ್.ವಿ. ವಾಲಿಶೆಟ್ಟಿ ನೆರವೇರಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 