ಹಿಡಕಲ್ ಆನೆಕಟ್ಟೆಯಿಂದ ಕೃಷ್ಣಾ ನದಿಗೆ 1 ಟಿ.ಎಂ.ಸಿ ನೀರು ಹರಿಸಲು ರಾಜ್ಯದ ಜಲ ಸಂಪನ್ನಮೂಲ ಸಚಿವ ಡಿ.ಕೆ.ಶಿವಕುಮಾರ ಆದೇಶ.
ಕಾಗವಾಡ 18: ಕಳೆದ ಎರಡು ತಿಂಗಳಗಳಿಂದ ಕೃಷ್ಣಾ ನದಿ ಬತ್ತಿಹೋಗಿದ್ದು, ನದಿಯಲ್ಲಿ ನೀರು ಹರಿಸಲು ಮಹಾರಾಷ್ಟ್ರ ಸಕರ್ಾರಕ್ಕೆ ಮನವಿ ಮಾಡಿಕೊಂಡರು ನೀರು ಹರಿಸದೆ ಇದಿದ್ದರಿಂದ ಕೃಷ್ಣಾ ನದಿ ತೀರದ ಜನರಿಗೆ ನೀರಿಲ್ಲದೇ ಆಗುತ್ತಿರುವ ಸಮಸ್ಯೆಗಳು ಎದುರಿಸಲು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ 1 ಟಿ.ಎಂ.ಸಿ ನೀರು ಬಿಡಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆಯೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದರು.
ಶನಿವಾರ ರಂದು ಬೆಂಗಳೂರಿನಿಂದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುವಾಗ, ಕೃಷ್ಣಾ ನದಿಗೆ ನೀರಿಲ್ಲದೇ ಬತ್ತಿಹೋಗಿದ್ದರಿಂದ ಕಾಗವಾಡ ಮತ್ತು ಅಥಣಿ ತಾಲೂಕಿನ ಜನರು ತತ್ತರಿಸಿ ಹೋಗಿದ್ದಾರೆ. ಅಥಣಿ ಪೂರ್ವ ಭಾಗದ ಜನರು ಕಳೇದ ಅನೇಕ ವರ್ಷಗಳಿಂದ ಬರ ಎದುರಿಸುತ್ತಿದ್ದಾರೆ. ಆದರೆ, ಈಗ ನದಿ ತೀರದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಸಮಸ್ಯೆ ರಾಜ್ಯದ ಮುಖ್ಯಮಂತ್ರಿಗಳು ಕುಮಾರಸ್ವಾಮಿ, ಜಲ ಸಂಪನ್ನಮೂಲ ಸಚಿವ ಡಿ.ಕೆ.ಶಿವಕುಮಾರ ಇವರ ಗಮನಕ್ಕೆ ತಂದು ಯಾವ ಕಾಲಕ್ಕೂ ನೀರು ಹರಿಸಬೇಕೆಂದು ತಾಲೂಕಿನ ರೈತ ಮುಖಂಡರೊಂದಿಗೆ ಪಟ್ಟು ಹಿಡಿದಿದ್ದರಿಂದ ಸಚಿವರು ಹಿಡಕಲ್ ಆನೆಕಟ್ಟೆಯಿಂದ 1 ಟಿ.ಎಂ.ಸಿ ನೀರು ಕೃಷ್ಣಾ ನದಿಗೆ ಹರಿಸಲು ಆದೇಶಿಸಿದ್ದಾರೆ.ಈ ಪ್ರಕ್ರೀಯೆ ಶನಿವಾರ ರಾತ್ರಿಯಿಂದ ಪ್ರಾರಂಭಗೊಳ್ಳಲಿದೆಯೆಂದು ಶ್ರೀಮಂತ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಉಳಿದು ಇಲ್ಲಿಯ ಜನರ ನೀರಿನ ದಾಹ ಮತ್ತು ತೊಂದರೆ ಸಕರ್ಾರಕ್ಕೆ ಗಮನಕ್ಕೆ ತಂದು ನೀರು ಹರಿಸಲು ಶಾಸಕ ಶ್ರೀಮಂತ ಪಾಟೀಲ ಪ್ರಯತ್ನಿಸುತ್ತಿದ್ದರು. ಮಹಾರಾಷ್ಟ್ರದ ಕೋಯ್ನಾ ಆನೆಕಟ್ಟೆಯಿಂದ ನೀರು ಹರಿಸಬೇಕೆಂದು ಕೇಳಿಕೊಂಡಿದ್ದರು. ರಾಜ್ಯ ಸಕರ್ಾರ ಪ್ರಯತ್ನಿಸಿದರೂ, ಮಹಾರಾಷ್ಟ್ರ ಸಕರ್ಾರ ನೀರು ಬಿಡಲು ಸಧ್ಯಕ್ಕೆ ನಿರಾಕರಿಸಿದೆ. ಇದರಿಂದ ಹಿಡಕಲ್ ಆನೆಕಟ್ಟೆಯಿಂದ ನೀರು ಹರಿಸಲು ಜಲ ಸಂಪನ್ನಮೂಲ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದು, ರಾಜ್ಯದ ಇಲಾಖೆ ಅಧಿಕಾರಿಗೆ ಮನವಿ ಮಾಡಿಕೊಳ್ಳಲಾಗಿತ್ತುಯೆಂದು ಶ್ರೀಮಂತ ಪಾಟೀಲ ಹೇಳಿದರು.
ಶಾಸಕರೊಂದಿಗೆ ಅಥಣಿ ನ್ಯಾಯವಾದಿ ಬಿ.ಎ.ಚವ್ಹಾಣ, ರೈತ ಮುಖಂಡ ದಾದಾ ಪಾಟೀಲ, ಅಬ್ದುಲಬಾರಿ ಮುಲ್ಲಾ, ಸೇರಿದಂತೆ ಅನೇಕರು ರೈತ ನಿಯೋಗದಲ್ಲಿ ಪಾಲ್ಗೊಂಡಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 