ಮಹಿಳೆಯರು ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ
Society can develop only when women are empowered
ಮಹಿಳೆಯರು ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ
ಹೂವಿನ ಹಡಗಲಿ 22: ಮಹಿಳೆಯರು ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಕಿ ವಿದ್ಯಾ ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಬಸವಪ್ರಭು ನಗರದಲ್ಲಿ ಶನಿವಾರ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಸಮಾನತೆ ದೊರೆತರೆ ಪ್ರಗತಿಗೆ ವೇಗ ಹೆಚ್ಚಾಗುತ್ತದೆ.ಸ್ತ್ರೀಯರಿಗೆ ಸೂಕ್ತ ಸ್ಥಾನಮಾನ ಹೆಚ್ಚು ಸಿಗುವಂತಾಗಬೇಕು ಎಂದು ಹೇಳಿದರು. ಮಹಿಳೆ ಕುಟುಂಬದ ನಿರ್ವಹಣೆ ಜೊತೆಗೆ ಸಾಮಾಜಿಕ ಜವಾಬ್ದಾರಿ ಅರಿಯಬೇಕು.ಸಂಘ ಸಂಸ್ಥೆಗಳೊಂದಿಗೆ ಗುರಿತಿಸಿಕೊಂಡು ವಿಕಾಸ ಹೊಂದಿರಿ ಎಂದರು.ಶಿಕ್ಷಕಿ ಜಯಶ್ರೀ ಚಟ್ರಿಕಿ ಮಾತನಾಡಿ 59 ವರ್ಷದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸಾಧನೆ ಎಲ್ಲರಿಗೂ ಸ್ಪೂರ್ತಿ ಆಗಬೇಕು.ಸ್ವಾವಲಂಬನೆ ಸಾಧಿಸಲು ಮಹಿಳೆಯರಿಗೆ ಛಲ ಗುರಿ ಇರಬೇಕು ಎಂದು ತಿಳಿಸಿದರು.ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಸಿಂಗಟಾಲೂರು ಶೆಟ್ರು ಅಧ್ಯಕ್ಷತೆ ವಹಿಸಿ ಮಹಿಳಾ ದಿನಾಚರಣೆಗೆ ಸಹಕರಿಸಿದ ಸರ್ವರ ಸಹಕಾರ ಸ್ಮರಿಸಿದರು.ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ಅಧ್ಯಕ್ಷೆ ಸವಿತಾ ಅಂಗಡಿ, ಗೌರವಾಧ್ಯಕ್ಷೆ ನಾಗರತ್ನ ಕುಂಚೂರು ಶಿಕ್ಷಕಿ ವೈ ಜಯಮ್ಮ ಇತರರು ಉಪಸ್ಥಿತರಿದ್ದರು.ಗೌರವ ಸನ್ಮಾನ: ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಶಿಕ್ಷಕಿಯರಾದ ಜಯಶ್ರೀ ಚಟ್ರಿಕಿ, ವಿದ್ಯಾ ಮಲ್ಲಿಕಾರ್ಜುನ,ಬಿ ಕೆ ವಿಜಯಲಕ್ಷ್ಮಿ ರವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.ಎಸ್ ಎಸ್ ಪೂರ್ಣಿಮಾ, ವಿಜಯ ಕಡ್ಲಿ, ಮಂಗಳ ಕರ್ಜಿಗಿಸುಮಂಗಲಾ ಕೆ, ಶೈಲಶ್ರೀ ಸವಿತಾ ಕೆ ನಿರ್ವಹಿಸಿದರು.ಸಾವಿತ್ರಿ ಬಾಯಿ ಫುಲೆ ರೂಪಕ:ಸವಿತಾ ಕುಂಬಾರಿ ನಿರ್ದೇಶನದಲ್ಲಿ ಶಿಕ್ಷಣದ ಮಹತ್ವ ಹಾಗೂ ಸಾವಿತ್ರಿ ಬಾಯಿ ಫುಲೆ ಜೀವನ ಕಥೆ ಬಿಂಬಿಸುವ ನೃತ್ಯ ರೂಪಕ ಜನಮನ ಸೊರೆಗೊಂಡಿತು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 