ಶರೀಫ ಮಾಕಪ್ಪನವರ ಅವರ ಕೃತಿಗೆ ಜಾನಪದ ಸಿರಿ ಪ್ರಶಸ್ತಿ
ಶಿಗ್ಗಾವಿ 08 : ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಅತ್ಯುತ್ತಮ ಪುಸ್ತಕಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತ ಬಂದಿದೆ.ಅದರಂತೆ 2023-24 ನೇ ಸಾಲಿಗೆ ಜಾನಪದ ಸಾಹಿತ್ಯಕ್ಕೆ ಮೀಸಲಾದ ಜಾನಪದ ಸಿರಿ ಪ್ರಶಸ್ತಿಗೆ ನನ್ನ ಕೃತಿಯಾದ ಜನಪದ ಕಲಾವಿದರು ಸುಧಾರಿಸಿಕೊಳ್ಳಬಹುದಾದ ಮಾರ್ಗೋಪಾಯಗಳು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವದು ಸಂತೋಷ್ ತಂದಿದೆ ಎಂದು ಯುವ ಲೇಖಕರು ಹಾಗೂ ಜಾನಪದ ಕಲಾವಿದರು ಆದ ಶರೀಫ ಮಾಕಪ್ಪನವರ ಅವರು ಹೇಳಿದರು. ಜಾನಪದ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಈ ಪ್ರಶಸ್ತಿಯು ಪ್ರೇರಣೆ ನೀಡಬಲ್ಲದು ಹಾಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸಧರಾದ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಅಧ್ಯಕ್ಷರು ಆದ ಬಸವರಾಜ ಬೊಮ್ಮಾಯಿ ಅವರಿಗೂ ಹಾಗೂ ಟ್ರಸ್ಟಿನ ಎಲ್ಲ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದರು.