ನಾಳೆ ಸಹಸ್ರ ಪೂರ್ಣಚಂದ್ರ ದರ್ಶನ ಕಾರ್ಯಕ್ರಮ

ಲೋಕದರ್ಶನ ವರದಿ

ಮುಂಡಗೋಡ:ಪಟ್ಟಣದ ಗಾಂಧಿ ನಗರದಲ್ಲಿರುವ ಶ್ರೀಮಳೆಬಸವೇಶ್ವರ ದೇವಸ್ಥಾನದಲ್ಲಿ ಆ.6(ಶನಿವಾರ)ದಂದು ಬೆಳಗ್ಗೆ 11ಗಂಟೆಗೆ ಹಿರೇಮಠದ ಪರಮಪೂಜ್ಯ ಪಂ.ಶ್ರೀರುದ್ರಮುನಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀಮಳೆಬಸವಣ್ಣ ದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ 75ರಿಂದ80ರ ವಸಂತಗಳ ಸಂಭ್ರಮದಲ್ಲಿರುವ ಹಿರಿಯ ಚೇತನಗಳ ಜನ್ಮದಿನದ ವಜ್ರ ಮಹೋತ್ಸವ ಸಹಸ್ರ ಪೂರ್ಣಚಂದ್ರ ದರ್ಶನ ಕಾರ್ಯಕ್ರಮದ ಅಂಗವಾಗಿ ಫಲ-ಪುಷ್ಪ, ತಾಂಬೂಲಾದಿಗಳಿಂದ ಗೌರವ ಸನ್ಮಾನ ಸಮರ್ಪಣೆ ಹಾಗೂ ಅನ್ನಸಂತರ್ಪಣೆ ಜರುಗುವುದು. ಶತಾಯುಷಿ(101ವಸಂತ)ಪರಮಪೂಜ್ಯ ಶ್ರೀವೇ.ಪಂಚಾಕ್ಷರ ಸ್ವಾಮಿಗಳು ಕಂಬಾಳಿಮಠ ಪೂಜ್ಯರಿಗೆ ಗುರುವಂದನೆ ಸಲ್ಲಿಸಲಾಗುವುದು.

ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ನೌಕರ ಎಸ್.ಜಿ.ಉಗ್ರಾಣ ಅಧ್ಯಕ್ಷತೆ ವಹಿಸುವರು ಮತ್ತು ಓಂ ಗ್ಯಾಸ್ ಸವರ್ೀಸಸ್ ಮಾಲೀಕ ಬಸವರಾಜ ಓಶಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ