ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸಲು - ಎಸ್ಯುಸಿಐ(ಕಮ್ಯುನಿಸ್ಟ್) ಪಕ್ಷದ ಆಗ್ರಹ.
ಕೊಪ್ಪಳ 3 : ಬಸವೇಶ್ವರ ವೃತ್ತದಲ್ಲಿ ಎಸ್ಯುಸಿಐ(ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಆಗ್ರಹಿಸಿ ಪ್ರತಿಭಟನೆಯನ್ನು ಮಾಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಪಕ್ಷದ ಮುಖಂಡರಾದ ಶರಣು ಗಡ್ಡಿ ಮಾತನಾಡಿ, ಕೊಪ್ಪಳ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಕಊಅ, ಅಊಅ ಹಾಗೂ ತಾಲೂಕು ಆಸ್ಪತ್ರೆಗಳಿಂದ ಹಿಡಿದು ಜಿಲ್ಲಾಸ್ಪತ್ರೆವರೆಗೂ ಸಾಕಷ್ಟು ಸಮಸ್ಯೆಗಳಿವೆ. ಅವಶ್ಯಕತೆ ಇರುವಷ್ಟು ತಜ್ಞ ವೈದ್ಯರ, ದಾದಿಯರ, ಮತ್ತಿತರ ವೈದ್ಯಕೀಯ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಯಿದೆ. ಃಕಐ ಕಾರ್ಡ್ದಾರರಿಗೆ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಸರ್ಜರಿ ಸೇರಿದಂತೆ ಇತರೆ ಉಚಿತ ತಪಾಸಣೆಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಅಖಿ ಸ್ಕ್ಯಾನ್ ಮಾಡಲು ಹಣ ಸಂಗ್ರಹ ಮಾಡಲಾಗುತ್ತಿದೆ. ಒಖಋ ಸೌಲಭ್ಯ ಇಲ್ಲವಾಗಿದೆ. ಇನ್ನೊಂದೆಡೆ ಚೀಟಿ, ಓಷಧಿ ಮತ್ತು ಹಣ ಪಾವತಿ ಕೌಂಟರ್ಗಳ ಸಂಖ್ಯೆ ಕಡಿಮೆ ಇರುವುದರಿಂದ ದಿನವಿಡಿ ನೂರಾರು ರೋಗಿಗಳು ಪಾಳಿಯಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ಬಡರೋಗಿಗಳು ತಮ್ಮ ದಿನಗೂಲಿ ಬಿಟ್ಟು ಸಣ್ಣಪುಟ್ಟ ಕಾಯಿಲೆಗಳಿಗೂ ವಾರಗಟ್ಟಲೆ ಆಸ್ಪತ್ರೆಗೆ ಆಲೆದಾಡುವಂತಾಗಿದೆ. ಆಸ್ಪತ್ರೆಯ ಓಷಧಾಲಯಗಳಲ್ಲಿ ಉತ್ತಮ ಗುಣಮಟ್ಟದ ಓಷಧಿ ಪೂರೈಕೆಯಾಗುತ್ತಿಲ್ಲ. ತಜ್ಞ ವೈದ್ಯರು ಅನೇಕ ಬಾರಿ ಆಸ್ಪತ್ರೆಗಳಲ್ಲಿ ಜನಗಳ ಸೇವೆಗೆ ದೊರಕುತ್ತಿಲ್ಲ. ಸ್ವಚ್ಛತೆ ಇಲ್ಲದೆ ಆಸ್ಪತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ಕಾರಣಗಳಿಂದ ಬೇಸತ್ತು ಅನೇಕ ಬಾರಿ ಜನರು ಅಸಹಾಯಕರಾಗಿ ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು...
ಪಕ್ಷದ ಮತ್ತೊಬ್ಬ ಮುಖಂಡರಾದ ಶರಣು ಪಾಟೀಲ್ ಮಾತನಾಡಿ, ಆರೋಗ್ಯ ಒಂದು ಅವಶ್ಯಕ ಸಾರ್ವಜನಿಕ ಸೇವೆಯಾಗಿದೆ. ಆದರೆ ಜಾಗತೀಕರಣ, ಉದಾರಿಕರಣ, ಖಾಸಗಿಕರಣದ(ಐಕಉ) ಕಾರಣದಿಂದಾಗಿ ಇಂದು ಆರೋಗ್ಯ ಕ್ಷೇತ್ರ ಲಾಭದಾಹಿ ಉದ್ದಿಮೆಯಾಗಿ ಮಾರ್ಪಟಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಸೇವೆಗಳಿಗೆ ನಿಗದಿಯಾಗಿರುವ ಬಜೆಟ್ ಪ್ರಮಾಣ ಕಡಿಮೆ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಆಸ್ಪತ್ರೆ ಸೌಲಭ್ಯಕ್ಕೆ ತಗಲುವ ವೆಚ್ಚವನ್ನು ಭರಿಸಲಾಗದೇ ಅದೆಷ್ಟೋ ಬಡಜೀವಗಳು ಸಾವನ್ನಪ್ಪುತ್ತಿದ್ದಾರೆ. ಇವು ಸಹಜ ಸಾವಲ್ಲ; ಬಡವರನ್ನು ಅಸಹಾಯಕ ಸ್ಥಿತಿಗೆ ತಳ್ಳಿ ವ್ಯವಸ್ಥೆ ಮಾಡುತ್ತಿರುವ ಕ್ರೂರ ಕೊಲೆಗಳಾಗಿವೆ.
ಇತ್ತೀಚಿನ ಹಲವು ವರದಿಗಳನ್ವಯ ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ರಾಜ್ಯದ ಹಲವಾರು ಕಡೆ ಬಾಣಂತಿಯರು ಮತ್ತು ನೂರಾರು ಹಸುಗೂಸುಗಳು ಸಾವನ್ನಪ್ಪಿವೆ. ಪಶ್ಚಿಮ ಬಂಗಾಳದಿಂದ ಆಮದು ಮಾಡಿಕೊಂಡ ಸೋಂಕಿತ ಹಾಗೂ ಕಳಪೆ ಗುಣಮಟ್ಟದ ಓಷಧಿಗಳೇ ಈ ಬಾಣಂತಿಯರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇದು ಸರ್ಕಾರದ ಬೇಜವಾಬ್ದಾರಿತನದ ಮಟ್ಟವನ್ನು ತೋರಿಸುತ್ತದೆ. ಬಡ ಮಹಿಳೆಯರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಸಾವಿನ ಕೂಪಗಳಾಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲಾ ಹಂತದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳನ್ನು ಕೊಡಲೇ ಜಿಲ್ಲಾಧಿಕಾರಿಗಳು, ಮತ್ತು ಅರೋಗ್ಯ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡುವ ಮೂಲಕ ಸಮಸ್ಯೆ ಸರಿಪಡಿಸಿ ಬಡ ಜನರ ಅರೋಗ್ಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಮಾನ್ಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಸಿದ್ದರಾಮೇಶ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಪಕ್ಷದ ಸದಸ್ಯರಾದ ಗಂಗರಾಜ ಅಳ್ಳಳ್ಳಿ ಮಾತನಾಡಿದರು. ಪಕ್ಷದ ಸದಸ್ಯರಾದ ಶಾರದಾ ಗಡ್ಡಿ, ಮಂಜುಳಾ ಎಂ, ಸುಭಾನ್ ನೀರಲಗಿ, ಸಾರ್ವಜನಿಕರಾದ ಮಂಗಳೇಶ್ ರಾಥೋಡ್, ದ್ಯಾಮಣ್ಣ ಡೊಳ್ಳಿನ್, ಈರಮ್ಮ, ಲಲಿತ, ಈರಣ್ಣ ತಾಳಕನಕಾಪುರ ಹಾಗೂ ಕೊಪ್ಪಳದ ವಿವಿಧ ಎರಿಯಾಗಳಿಂದ ಮತ್ತು ಹಳ್ಳಿಗಳಿಂದ ಆಗಮಿಸಿದ 30 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು..