ಸಿಕ್ಯಾಬ್ ವಿದ್ಯಾಲಯದಿಂದ ರಸ್ತೆ ಸುರಕ್ಷೆ ಮತ್ತು ಜಾಗೃತಿ ಅಭಿಯಾನ ಯಶಸ್ವಿ
ಲೋಕದರ್ಶನ ವರದಿ
ವಿಜಯಪುರ 17: ನಗರದ ಸಿಕ್ಯಾಬ್ ಮಹಾವಿದ್ಯಾಲಯದ ವತಿಯಿಂದ ವಿಜಯಪುರದಲ್ಲಿ ಹಮ್ಮಿಕೊಳ್ಳಲಾದ 'ಟ್ರಾಫಿಕ್ ಸವರ್ೆ ಒಂದು ದಿನದ ವಾಹನ ಗಣತಿ ಮತ್ತು ಪಾದಚಾರಿಗಳ ಸುರಕ್ಷಾ ವ್ಯವಸ್ಥೆಗಳ ಪರಿಶೀಲನೆ ಯಶಸ್ವಿಯಾಗಿ ಜರುಗಿಸಲಾಯಿತು.
ಈ ಗಣತಿಯ ನೇತೃತ್ವ ವಹಿಸಿದ್ದ ಪ್ರೋ ನೂರುದ್ದೀನ್ ಜಂಗಿ ಆಧುನಿಕತೆ ಬೆಳೆದಂತೆ ವಾಹನಗಳ ಸಂಖ್ಯೆ ಅತ್ಯಂತ ಹೆಚ್ಚಳವಾಗುತ್ತಿವೆ. ಯುವಜನಾಂಗವಂತೂ ವಾಹನಗಳಿಲ್ಲದೆ ಸಂಚರಿಸದಂತಾಗಿದೆ. ವಿದ್ಯಾಥರ್ಿಗಳು ವಿಶೇಷವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಥರ್ೀಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಗಣತಿಯ ಮೂಲ ಉದ್ದೇಶವಾಗಿದೆ. ವಿಜಯಪುರ ನಗರದ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ರಸ್ತೆ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಚ್. ಕೋಲ್ಹಾರ್ ಮಾತನಾಡಿ, ವಿದ್ಯಾಥರ್ಿಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆಯ ಈ ಗಣತಿ ಮತ್ತು ಸುರಕ್ಷಾ ಅಭಿಯಾನದಲ್ಲಿ 140 ಕ್ಕೂ ಹೆಚ್ಚು 3ನೇ ವರ್ಷದ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ಗಣತಿ ಮಾಡುವುದರ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು, ಉಪನ್ಯಾಸಕರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಈ ಗಣತಿಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಾಯ ಮಾಡಿದ ಸಂಸ್ಥೆಯ ಸ್ಥಾಪಕರಾದ ಶ್ರೀ. ಎಸ್.ಎ. ಪುಣೇಕರ್, ನಿದರ್ೆಶಕರಾದ ಶ್ರೀ.ಸಲಾವುದ್ದೀನ್ ಎಸ್. ಪುಣೇಕರ್ ಹಾಗೂ ವಲಯದ ಸರ್ಕಲ್ ಇನ್ಸಪೆಕ್ಟಸರ್್ ಮತ್ತು ಸಬ್ ಇನ್ಸಪೆಕ್ಟರ್ ಇವರಿಗೆ ವಿಭಾಗದ ಮುಖ್ಯಸ್ಥರಾದ ಪ್ರೋ.ಎಂ.ಎಚ್. ಕೋಲ್ಹಾರ್ ಅಭಿನಂದಿಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 