ಸಿಕ್ಯಾಬ್ ವಿದ್ಯಾಲಯದಿಂದ ರಸ್ತೆ ಸುರಕ್ಷೆ ಮತ್ತು ಜಾಗೃತಿ ಅಭಿಯಾನ ಯಶಸ್ವಿ
ಲೋಕದರ್ಶನ ವರದಿ
ವಿಜಯಪುರ 17: ನಗರದ ಸಿಕ್ಯಾಬ್ ಮಹಾವಿದ್ಯಾಲಯದ ವತಿಯಿಂದ ವಿಜಯಪುರದಲ್ಲಿ ಹಮ್ಮಿಕೊಳ್ಳಲಾದ 'ಟ್ರಾಫಿಕ್ ಸವರ್ೆ ಒಂದು ದಿನದ ವಾಹನ ಗಣತಿ ಮತ್ತು ಪಾದಚಾರಿಗಳ ಸುರಕ್ಷಾ ವ್ಯವಸ್ಥೆಗಳ ಪರಿಶೀಲನೆ ಯಶಸ್ವಿಯಾಗಿ ಜರುಗಿಸಲಾಯಿತು.
ಈ ಗಣತಿಯ ನೇತೃತ್ವ ವಹಿಸಿದ್ದ ಪ್ರೋ ನೂರುದ್ದೀನ್ ಜಂಗಿ ಆಧುನಿಕತೆ ಬೆಳೆದಂತೆ ವಾಹನಗಳ ಸಂಖ್ಯೆ ಅತ್ಯಂತ ಹೆಚ್ಚಳವಾಗುತ್ತಿವೆ. ಯುವಜನಾಂಗವಂತೂ ವಾಹನಗಳಿಲ್ಲದೆ ಸಂಚರಿಸದಂತಾಗಿದೆ. ವಿದ್ಯಾಥರ್ಿಗಳು ವಿಶೇಷವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಥರ್ೀಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಗಣತಿಯ ಮೂಲ ಉದ್ದೇಶವಾಗಿದೆ. ವಿಜಯಪುರ ನಗರದ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ರಸ್ತೆ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು.
ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಚ್. ಕೋಲ್ಹಾರ್ ಮಾತನಾಡಿ, ವಿದ್ಯಾಥರ್ಿಗಳ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ನಮ್ಮ ಸಂಸ್ಥೆಯ ಈ ಗಣತಿ ಮತ್ತು ಸುರಕ್ಷಾ ಅಭಿಯಾನದಲ್ಲಿ 140 ಕ್ಕೂ ಹೆಚ್ಚು 3ನೇ ವರ್ಷದ ವಿದ್ಯಾಥರ್ಿಗಳು ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನ ಗಣತಿ ಮಾಡುವುದರ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು, ಉಪನ್ಯಾಸಕರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಈ ಗಣತಿಯನ್ನು ಯಶಸ್ವಿಯಾಗಿ ಸಂಘಟಿಸಲು ಸಹಾಯ ಮಾಡಿದ ಸಂಸ್ಥೆಯ ಸ್ಥಾಪಕರಾದ ಶ್ರೀ. ಎಸ್.ಎ. ಪುಣೇಕರ್, ನಿದರ್ೆಶಕರಾದ ಶ್ರೀ.ಸಲಾವುದ್ದೀನ್ ಎಸ್. ಪುಣೇಕರ್ ಹಾಗೂ ವಲಯದ ಸರ್ಕಲ್ ಇನ್ಸಪೆಕ್ಟಸರ್್ ಮತ್ತು ಸಬ್ ಇನ್ಸಪೆಕ್ಟರ್ ಇವರಿಗೆ ವಿಭಾಗದ ಮುಖ್ಯಸ್ಥರಾದ ಪ್ರೋ.ಎಂ.ಎಚ್. ಕೋಲ್ಹಾರ್ ಅಭಿನಂದಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 