ಭಾರತದ ಪುನರುತ್ಥಾನ ಆರ್‌ಎಸ್‌ಎಸ್ ಗುರಿ

Resurgence of India is the goal of RSS

ಲೋಕದರ್ಶನ ವರದಿ 

ಭಾರತದ ಪುನರುತ್ಥಾನ ಆರ್‌ಎಸ್‌ಎಸ್ ಗುರಿ 

ಬೆಳಗಾವಿ 01: ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶ ಆಚರಣೆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಭಾರತದ ಸರ್ವಾಂಗೀಣ ಪ್ರಗತಿಗೆಆರ್‌ಎಸ್‌ಎಸ್‌ಕಾರ್ಯತತ್ಪರವಾಗಿದೆ. ಭಾರತದ ಪುನರುತ್ಥಾನವೆ ಆರ್‌ಎಸ್‌ಎಸ್ ಗುರಿಯಾಗಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ದೀಪಕ ವಿಸ್ಪುತೆ ಹೇಳಿದರು. 

ಬೆಳಗಾವಿ ನಗರದ ಯೂನಿಯನ್ ಜಿಮಖಾನಾ ಮೈದಾನದಲ್ಲಿ ರವಿವಾರದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬೆಳಗಾವಿ ಘಟಕದಿಂದ ಜರುಗಿದ ಯುಗಾದಿ ಉತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಭೇದ ಭಾವ ಪ್ರಚಲಿತದಲ್ಲಿದೆ. ಆದ್ದರಿಂದ ನಾವೆಲ್ಲರೂ ಹಿಂದು ಮತ್ತು ಒಂದು ಎಂಬ ಭಾವ ಸಮಾಜದಲ್ಲಿ ಮೂಡಿಸಲು ಆರ್‌ಎಸ್‌ಎಸ್ ಕಳೆದ ಹತ್ತು ದಶಕಗಳಿಂದ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಕೌಟುಂಬಿಕ ವ್ಯವಸ್ಥೆ ಬಲಿಷ್ಠವಾಗಿದೆ. ವಿಶ್ವದ ಅನೇಕ ನಾಗರಿಕತೆಗಳ ಸಂಸ್ಕೃತಿ ನಶಿಸಿ ಹೋಗಿದ್ದರು, ಈವರೆಗೂ ಸಿಂಧೂ ನಾಗರಿಕತೆಯ ಸನಾತನ ಸಂಸ್ಕೃತಿ ಮತ್ತು ಧರ್ಮ ಆಚರಣೆಯಿರಲು ಇಲ್ಲಿನ ಕೌಟುಂಬಿಕ ವ್ಯವಸ್ಥೆಯೆ ಕಾರಣವಾಗಿದೆ. ಆದ್ದರಿಂದ ಆಧುನಿಕತೆಯ ಪರಿಣಾಮದಿಂದ ಶೀತಿಲಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆಯನ್ನು ಬಲಗೊಳಿಸಲು ಅವಶ್ಯಕತೆಯಿದೆ ಎಂದರು. 

ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ ಮತ್ತು ನಾಗರಿಕ ಶಿಷ್ಟಾಚಾರ ಪಾಲನೆಯ ಬಗ್ಗೆ ಕೂಡಾಆರ್‌ಎಸ್‌ಎಸ್‌ಗಂಭೀರವಾಗಿ ಹಲವಾರುಯೋಜನೆ ರೂಪಿಸಿದೆ.ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣಗೆ ಒತ್ತು ನೀಡುವಕುರಿತುಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಚರಣೆ, ನಾಗರಿಕ ಶಿಷ್ಟಾಚಾರ ಪಾಲನೆ, ಕುಟುಂಬ ಪ್ರಬೋಧನ ಮತ್ತು ಪರಿಸರ ಸಂರಕ್ಷಣೆ ಈ ಐದು ಕಾರ್ಯಗಳನ್ನು ಪಂಚ ಪರಿವರ್ತನೆ ಎಂಬ ಜಾಗೃತಿಅಭಿಯಾನವನ್ನುಆರ್‌ಎಸ್‌ಎಸ್‌ಕೈಗೊಂಡಿದ್ದು, ಈ ಪಂಚ ಪರಿವರ್ತನೆಕಾರ್ಯದ ಮೂಲಕ ಭಾರತದ ಸಮಗ್ರ ಅಭಿವೃದ್ಧಿಗೆಲಕ್ಷಾಂತರ ಸ್ವಯಂಸೇವಕರು ಶ್ರಮಿಸುತ್ತಿದ್ದಾರೆಎಂದರು.  

ಡಾಕ್ಟರ್‌ಜಿಎಂದೆ ಗುರುತಿಸಿಕೊಂಡ ಸಂಘದ ಸ್ಥಾಪಕ ಮತ್ತುಆದ್ಯ ಸರಸಂಘಚಾಲಕರಾದ ಕೇಶವ ಬಲಿರಾಮ ಹೆಡಗೆವಾರ್‌ಅವರುಜನ್ಮಜಾತದೇಶಭಕ್ತರಾಗಿದ್ದರು. ಅವರುತಮ್ಮಕಾಲೇಜು ಶಿಕ್ಷಣದ ಸಮಯದಲ್ಲಿಕೋಲ್ಕತ್ತಾದ ಕ್ರಾಂತಿಕಾರಿಗಳ ಅನುಶೀಲನಾ ಸಮಿತಿಯ ಸಕ್ರಿಯಕಾರ್ಯಕರ್ತರಾಗಿದ್ದರು.ನಂತರಅವರುಕಾಂಗ್ರೆಸ್ ಸೇರೆ​‍್ಡಗೊಂಡು ಮಧ್ಯಪ್ರದೇಶ ಪ್ರಾಂತದ ಬಹು ಮುಖ್ಯಕಾರ್ಯಕರ್ತರಲ್ಲಿಒಬ್ಬರಾಗಿದ್ದರು.ಕಾಂಗ್ರೆಸ್‌ನತುಷ್ಟಿಕರಣ ನೀತಿಧೋರಣೆ ಪರಿಣಾಮಅವರುಕಾಂಗ್ರೆಸ್ಸ್‌ತೊರೆದರುಎಂದರು. 

ದೇಶದ ಗುಲಾಮಗಿರಿಗೆ ಕಾರಣ ಭಾರತೀಯರಲ್ಲಿ ರಾಷ್ಟ್ರದ ಕುರಿತಾಗಿ ಅಭಿಮಾನ ಮತ್ತು ಭಕ್ತಿ ಕೊರತೆಯಿರುವುದನ್ನು ಹೆಡಗೆವಾರ್ ಅವರು ಮನಗೊಂಡು, ಆರ್‌ಎಸ್‌ಎಸ್ ಸ್ಥಾಪಿಸಿ ಶಾಖೆಯ ಮೂಲಕ ಎಲ್ಲರಲ್ಲಿ ದೇಶಭಕ್ತಿ ಭಾವ ಜಾಗೃತಿ ಕಾರ್ಯದಲ್ಲಿ ತೊಡಗಿದರು. ಈ ನೂರು ವರ್ಷದಲ್ಲಿ ದೇಶದ ಐದು ಪೀಳಿಗೆ ನಾಗರಿಕರು ಸೇವೆ ಸಲ್ಲಿಸಿದ್ದಾರೆ. ಮೊದಲ ಏಳೆಂಟು ದಶಕಗಳು ಬಹಳಷ್ಟು ಸಮಸ್ಯೆ - ಸವಾಲು ಎದುರಿಸಿದ ಆರ್‌ಎಸ್‌ಎಸ್ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಇಂದು ವಿಶ್ವದ ಬಹಳಷ್ಟು ದೇಶಗಳಲ್ಲಿ ಆರ್‌ಎಸ್‌ಎಸ್ ಸೇವಾ ಮತ್ತು ಸಂಘಟನೆಯ ಚಟುವಟಿಕೆಗಳು ಭರದಿಂದ ಸಾಗಿವೆ ಎಂದರು. 

ಜಿಲ್ಲಾ ಸಂಘಚಾಲಕ ಚನ್ನಗೌಡದೊಡ್ಡಗೌಡರ, ನಗರದ ಸಂಘಚಾಲಕ ಬಾಳಣ್ಣ ಕಗ್ಗಣಗಿ ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂ ಸೇವಕರು ಹಾಜರಿದ್ದರು. ನಗರ ಕಾರ್ಯವಾಹರಮೇಶಧೋತ್ರೆ ಪರಿಚಯಿಸಿದರು. ಸಂಜಯ ರಣಸುಭೆ ನಿರೂಪಿಸಿದರು. ಗೋವಿಂದಕುಲಕರ್ಣಿ ವಂದಿಸಿದರು.