ಬೋಧನಾ ತರಗತಿ ಸದುಪಯೋಗಕ್ಕೆ ಮನವಿ
ಲೋಕದರ್ಶನ ವರದಿ
ರಾಣೇಬೆನ್ನೂರ .27: ಬಡತನದಿಂದ ಕೂಡಿರುವ ಈ ಭಾರತ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಪೇಡಂಭೂತದಂತೆ ಕಾಡುತ್ತಿದ್ದು, ಇದರ ನಿವಾರಣೆಗಾಗಿ ಸರಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಸಹ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತಲೇ ಇದೆ. ಅದಕ್ಕಾಗಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಓದಿದ ವಿದ್ಯಾಥರ್ಿಗಳು ಸಿಎ, ಸಿಎಂಎ, ಸಿಪಿಟಿ, ಸಿಎಟಿ ಸೇರಿದಂತೆ ಮತ್ತಿತರ ಕೋಸರ್್ಗಳನ್ನು ಮಾಡುವುದರಿಂದ ಉದ್ಯೋಗಸ್ಥರಾಗಬಹುದು ಎಂದು ದಾವಣಗೇರೆ ಕೇರ್ ಅಕಾಡೆಮಿಯ ಮುಖ್ಯಸ್ಥ ಬಿ.ವಿ.ರಮಣಕುಮಾರ ಹೇಳಿದರು.
ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇಂಜನೀಯರಿಂಗ್ ಪದವಿ ಮುಗಿಸಿದ ಬಹಳಷ್ಟು ವಿದ್ಯಾಥರ್ಿಗಳು ಉದ್ಯೋಗ ಅರಸಿ ಬೇರೆ ರಾಜ್ಯ ಹಾಗೂ ವಿದೇಶಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಆದರೆ ಸಿಎ, ಸಿಪಿಟಿ, ಐಪಿಸಿಸಿ, ಐಸಿಡಬ್ಲ್ಯೂಎ, ಸಿಎಟಿ ಮುಂತಾದ ತರಗತಿಗಳನ್ನು ಮುಗಿಸಿದವರು ಯಾರೂ ಸಹ ನಿರುದ್ಯೋಗಿಗಳಾಗಿ ಇಲ್ಲ ಎಂದವರು ವಿವರಿಸಿದರು.
ಕಡಿಮೆ ವೆಚ್ಚದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ದಾವಣಗೇರಿಯ ಕೇರ್ ಅಕಾಡೆಮಿಯವರು ಈ ಸುಲಭ ರೀತಿಯ ತರಗತಿಗಳನ್ನು ಕೈಗೊಂಡಿದ್ದು, ತಾಲೂಕಿನ ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೋ: 7676761186 ಸಂಪಕರ್ಿಸಬಹುದೆಂದರು. ಜಿ.ಜಿ.ಹೊಟ್ಟಿಗೌಡ್ರ, ಪ್ರತೀಕ್ಷಾ, ಪ್ರಭು ಕೋಡದ, ಸುದೀರ್ ಕುರುವತ್ತಿ, ರಾಹುಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 