ದೇಶಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ: ಸೋನಿಯಾ ಗಾಂಧಿ
ರಾಯ್ ಬರೇಲಿ 27 (ಯುಎನ್ಐ): ತಮಗೆ ಮತ ನೀಡಿ ಗೆಲ್ಲಿಸಿದ ಉತ್ತರ ಪ್ರದೇಶದ ರಾಯ್ ಬರೇಲಿಯ ಜನತೆಗೆ ಭಾವನಾತ್ಮಕದ ಪತ್ರದ ಮೂಲಕ ಧನ್ಯವಾದ ಸಮಪರ್ಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶಕ್ಕಾಗಿ ತಾವು ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧ ಎಂದರು.
ಮತದಾರರಿಗೆ ಭಾನುವಾರ ಬರೆದ ಪತ್ರದಲ್ಲಿ ಅವರು, 'ದೇಶದ ಮೂಲ ಮೌಲ್ಯಗಳ ರಕ್ಷಣೆ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯರು ಪಾಲಿಸಿಕೊಂಡು ಬಂದ ಸಂಪ್ರದಾಯವನ್ನು ಕಾಪಾಡಲು ನಾನು ಗಳಿಸಿದ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧ ' ಎಂದಿದ್ದಾರೆ.
ಜೊತೆಗೆ, ರಾಯ್ ಬರೇಲಿಯಲ್ಲಿ ತಮ್ಮ ವಿರುದ್ಧ ಅಭ್ಯಥರ್ಿಯನ್ನು ಕಣಕ್ಕಿಳಿಸದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಸ್ವಾಭಿಮಾನ ದಳ ಪಕ್ಷಗಳಿಗೆ ಧನ್ಯವಾದ ಅಪರ್ಿಸಿದ್ದಾರೆ.
ತಮ್ಮ ಒಂದು ಪುಟದ ಪತ್ರದಲ್ಲಿ ಅವರು, 'ಮುಂದಿನ ದಿನಗಳು ಬಹಳ ಕಠಿಣವಾಗಿರಲಿದೆ ಎಂಬುದು ನನಗೆ ತಿಳಿದಿದೆ. ಆದರೆ, ನಿಮ್ಮ ಬೆಂಬಲ ಹಾಗೂ ನಂಬಿಕೆಯಿಂದ ಕಾಂಗ್ರೆಸ್ ಪ್ರತಿ ಸವಾಲನ್ನೂ ಎದುರಿಸಲಿದೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.
ರಾಯ್ ಬರೇಲಿಯ ಜನರನ್ನು ತಮ್ಮ ವಿಸ್ತಾರಿತ ಕುಟುಂಬ ಎಂದಿರುವ ಸೋನಿಯಾ, 'ನೀವು ನಮ್ಮ ಕುಟುಂಬದಂತೆ. ನಿಮ್ಮಿಂದ ನಾನು ಶಕ್ತಿ ಪಡೆಯುತ್ತೇನೆ. ಹಾಗೂ, ಅದೇ ನನ್ನ ನಿಜವಾದ ಆಸ್ತಿ' ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ 89 ಕ್ಷೇತ್ರಗಳ ಪೈಕಿ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಕ್ಷೇತ್ರದಿಂದ ಸ್ಪಧರ್ಿಸಿದ್ದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ಸೋನಿಯಾ, 1.67 ಲಕ್ಷಗಳಿಂದ ಪರಾಭವಗೊಳಿಸಿದ್ದರು.
ಇದಕ್ಕೆ ಹೊಂದಿಕೊಂಡಂತಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಅವರ ಪುತ್ರ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿಯ ಸ್ಮೃತಿ ಇರಾನಿ ಎದುರು 55 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 