ಮೂಲಭೂತ ಸೌಕರ್ಯ ಒದಗಿಸುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ :ಜ್ಯೋತಿ ಪಾಟೀಲ

ಮೂಲಭೂತ ಸೌಕರ್ಯ ಒದಗಿಸುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ :ಜ್ಯೋತಿ ಪಾಟೀಲ Providing basic infrastructure is the primary duty of an elected government: Jyoti Patil


ಧಾರವಾಡ 14 : ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ ವಾಗಿದೆ. ಎಂದು 19 ನೇ ವಾರ್ಡ್‌ನ ನಿಸರ್ಗ ನಗರದ ಸಿ.ಸಿ ರಸ್ತೆ ಗೆ ಗುದ್ದಲಿ ಪೂಜೆ ನೆರವೇರಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿದರು. ನಗರವಾಸಿಗಳಿಗೆ ಸುರಕ್ಷಿತವಾದ ರಸ್ತೆ, ಚರಂಡಿ, ಬೀದಿ ಲೈಟು, ಉದ್ಯಾನವನ, ಕಸ ವಿಲೇವಾರಿ, ಕುಡಿಯುವ ನೀರು, ರಕ್ಷಣೆ ಮುಂತಾದವುಗಳನ್ನು ನಿಡುವಂತೆ ಸಾಹಿತಿ ನಾರಾಯಣ ಭಜಂತ್ರಿ ವಿನಂತಿಸಿದರು. ಎಸ್ ಬಿ ಪಾಟೀಲ, ಸತೀಶ್ ಪರ್ವತೀಕರ, ನೀಲಾ ಶಿಗ್ಲಿ, ಅಶೋಕ ಮಣ್ಣೂರ ಮುಂತಾದವರಿದ್ದರು. 


Basic amenities Elected governmen t 19th Ward Nisarga Nagar