ನೇಕಾರರಿಗೆ ಸಮರ​‍್ಕ ಯೋಜನೆ ಒದಗಿಸಿ: ಶಿವಲಿಂಗ ಟಿರಕಿ

ನೇಕಾರರಿಗೆ ಸಮರ​‍್ಕ ಯೋಜನೆ ಒದಗಿಸಿ: ಶಿವಲಿಂಗ ಟಿರಕಿ Provide a strategic plan for weavers: Shivalinga Tiraki

ಮಹಾಲಿಂಗಪುರ 17: ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಸಭೆ ನಡೆಸಿ, ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಇಲಾಖೆಗೆ 1500 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿ ಸಮರ​‍್ಕ ಯೋಜನೆಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿದರು. ಪಟ್ಟಣದ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮೊದಲು ನೇಕಾರರೊಂದಿಗೆ ಪೂರ್ವ ನಿಯೋಜಿತ ಸಭೆ ನಡೆಸಲಿ. ನಂತರ ಇಲಾಖೆಯಲ್ಲಿ ಖಾಲಿ ಇರುವ 55 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ರಾಜ್ಯದ ಕಟ್ಟಕಡೆಯ ವೃತ್ತಿಪರ ನೇಕಾರರಿಗೆ ಸೇವೆ ಒದಗಿಸಿ, ನೇಕಾರರ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸೋಮವಾರ ದಿ.19 ರಂದು ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಮತ್ತು ಉಗ್ರ ಹೋರಾಟಕ್ಕೆ ಸಿದ್ಧತೆ ಮಾಡಲಾಗಿದೆ ಎಂದರು. ರಾಜೇಂದ್ರ ಮಿರ್ಜಿ, ರಮೇಶ ನಾಗರಾಳ, ಮಹಾಲಿಂಗಪ್ಪ ನಂದಿಕೋಲ, ಬಸವರಾಜ ಅಮ್ಮಣಗಿ, ಜಯವಂತ ಮೂಡಲಗಿ, ರಾಘವೇಂದ್ರ ಬೆಳಗಲಿ ಇದ್ದರು.