ಸೋತವನ ಕೈ ಹಿಡಿದ ಗೆಳೆಯರ ಕಾರ್ಯ ಮಾದರಿ: ಪ್ರಭು ಸ್ವಾಮೀಜಿ
Prabhu Swamiji: A role model for friends who hold the hand of a loser
ಮಹಾಲಿಂಗಪುರ 21: ದಿಕ್ಕು ದೆಸೆಯಿಲ್ಲದೆ, ತಂದೆ- ತಾಯಿಗಳಿಲ್ಲದೇ ಏಕಾಂಗಿಯಾಗಿ ಕೇವಲ ಅಂಗವಿಕಲ ಮಾಶಾಸನದಲ್ಲಿಯೇ ಅರೆ ಹೊಟ್ಟೆ ತಿಂದು, ಮೈ ತುಂಬಾ ಬಟ್ಟೆ ಇಲ್ಲದೆ ಮುರುಕಲು ಗುಡಿಸಲಿನಲ್ಲಿ ಸಂಕಷ್ಟದ, ಯಾತನಾಮಯ ಬದುಕು ಸಾಗಿಸುತ್ತಿದ್ದ ಎರಡೂ ಕಾಲುಗಳಿಲ್ಲದ ಅಸಹಾಯಕ ಸಿದ್ದಪ್ಪ ಕಂಬಾರ ಎಂಬ ವಿಶಿಷ್ಟಚೇತನನಿಗೆ ಗೆಳೆಯರ ಬಳಗದ ಬಾಲ್ಯದ ಗೆಳೆಯರು ಸೇರಿ ಸಹಾಯ ಹಸ್ತ ಚಾಚಿ ತಮ್ಮಂತೆಯೇ ತಮ್ಮ ಸ್ನೇಹಿತನು ಸಹ ವಾಹನದಲ್ಲಿ ಓಡಾಡಲಿ ಎಂಬ ಮಹತ್ವಾಕಾಂಕ್ಷೆಯಿಂದ ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ಓಡಬಲ್ಲ ಸ್ವಯಂಚಾಲಿತ ತ್ರಿಚಕ್ರ ವಾಹನ ನೀಡಿ ಓದಾರ್ಯ ಮೆರೆದ ಮಾದರಿ ಕಾರ್ಯ ಸಮೀಪದ ಚಿಮ್ಮಡ ಗ್ರಾಮದಲ್ಲಿ ಜರುಗಿದೆ.
ಸ್ನೇಹಿತರೆಲ್ಲ ಸೇರಿ ತ್ರಿಚಕ್ರ ವಾಹನ ಖರೀದಿಸಿ ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ಸಿದ್ದಪ್ಪ ಕಂಬಾರ ಅವರಿಗೆ ಹಸ್ತಾಂತರ ಮಾಡಿದರು. ಸ್ಥಳೀಯ ಗೆಳೆಯರ ಬಳಗದ ಪ್ರಭಾವಿ ವ್ಯಕ್ತಿಗಳಾದ ಶಂಕರ ಬಟಕುರ್ಕಿ, ನಿಂಗಪ್ಪ ಪೂಜಾರಿ, ಚನ್ನಪ್ಪ ತೇಲಿ, ರಾಜು ಬಗನಾಳ, ಸಿದ್ದು ಯಮಗರಣಿ, ಅವ್ವಣ್ಣ ಮುಗಳಖೋಡ, ಮನೋಜ ಹಟ್ಟಿ, ಬಸು ಬಳಗಾರ, ಸಿದ್ರಾಯಪ್ಪ ಹಳಗಂಳಿ, ಪ್ರಭು ಮುಧೋಳ, ಅಕ್ಷಯ ಕರಡಿ, ರುದ್ರ್ಪ ಹಳಮನಿ, ಶಂಕರ ನಿಡೋಣಿ, ಮಹಾಂತೇಶ ಯಂಕಂಚಿ, ಶೌಕತ್ ಮಿರ್ಜಿ,ಹನಮಂತ ಭಜಂತ್ರಿ ಇವರು ಗೆಳೆಯನಿಗೆ ಆಧಾರವಾಗಿ ಮಾದರಿಯಾಗಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 