ಬೆಳಗಾವಿ: ಪ್ಲೇಮ ಟ್ಯೂಬ್ ಅಪರ್ಟಸ್ ಆಧುನಿಕ ಸಂಶೋಧನಾ ಸೌಲಭ್ಯ ಯಶಸ್ವಿ
ಲೋಕದರ್ಶನ ವರದಿ
ಬೆಳಗಾವಿ 20: ಉತ್ತರ ಕರ್ನಾಟಕ ವಿಭಾಗದ ವ್ಹಿಟಿಯುದ ಜೈನ್ ಎಂಜಿನೀಯರಿಂಗ್ ಕಾಲೇಜಿನ ಮೆಕಾನಿಕಲ್ ಎಂಜಿನೀಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾಥರ್ಿಗಳು, ತಮ್ಮ ಯೋಜನಾ ಕಾರ್ಯದ ಭಾಗವಾಗಿ ಪ್ಲೇಮ ಟ್ಯೂಬ್ ಅಪರ್ಟಸ್ ಎಂಬ ಆಧುನಿಕ ಸಂಶೋಧನಾ ಸೌಲಭ್ಯವನ್ನು ಯಶಸ್ವಿಯಾಗಿ ತಯಾರಿಸಿ, ಬೆಳಗಾವಿಯ ಜೈನ್ ಕಾಲೇಜ್ ಆಫ್ ಎಂಜಿನೀಯರಿಂಗದಲ್ಲಿ ನೆಲೆಗೊಳಿಸಿದರು.
ಇಂಥದೊಂದು ಯಶಸ್ವಿ ಹಾಗೂ ಪರಿಣಾಮಕಾರಿ ಸಂಶೋಧನೆ ಬೆಳಕು ಕಾಣಲು ವಿದ್ಯಾರ್ಥಿಗಳ ಪ್ರಯತ್ನ, ಸಂಶೋಧಕ ಸುಪರವೈಜರ್ ಡಾ.ಎಂ. ಶ್ರೀಧರ ಬಾಬುರವರ ಮಾರ್ಗದರ್ಶನ ಹಾಗೂ ಐ.ಐ.ಟಿ-ಬಾಂಬೆ ಇವರೆಕ್ಕರ ಸಹಾಯದಿಂದ ಈ ಸಾಧನೆ ಸಾಧ್ಯವಾಯಿತು.
ಈ ಯೋಜನೆಯು ಅತ್ಯಂತ ಮಹತ್ವದ ಪ್ಲೇಮ ವೆಲೊಸಿಟಿಯ ಮಾಪನದಲ್ಲಿ ಪ್ರಮಾಣಕ್ಕನುಗುಣವಾಗಿ ದಹನ ವಸ್ತುಗಳಾದಂಥ ಐ.ಸಿ. ಎಂಜೀನ್, ಬರ್ನರ್ಸ, ಗ್ಯಾಸ್ ಟಬರ್ೈನ್ ಎಂಜೀನ್ಸ್ ಮುಂತಾದವುಗಳ ಡಿಸೈನ್ ರೂಪಿಸುವಲ್ಲಿ ಸಹಾಯಕವಾಗಿದೆ.
ಇದಕ್ಕಿಂತ ಹೆಚ್ಚಾಗಿ, ಸುಪರವೈಜರ್ ಅಭಿಪ್ರಾಯಪಡುವಂತೆ ಪ್ರದರ್ಶಿಸಲ್ಪಟ್ಟ ಈ ಸಂಶೋಧನಾ ಕಾರ್ಯವು ವಿದ್ಯಾಥರ್ಿಗಳ ಸಂಶೋಧನಾ ಹಸಿವನ್ನು ಅಂದರೆ, ಅವರಲ್ಲಿ ಕೌಶಲ್ಯ ಹೆಚ್ಚಿಸಿಸಲು ಹಾಗೂ ಎನಜರ್ಿ ಲ್ಯಾಬೋರೋಟರಿಗಳಲ್ಲಿ ಸಹಾಯಕವಾಗಿದೆ. ಈ ಕಾರ್ಯದಿಂದ ಬಂದ ಫಲಶೃತಿ ಏನೆಂದರೆ, ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಒಂದು ಸಂಶೋಧನಾ ಲೇಖನದಂರೆ ಸಂಪಕರ್ಿಸಲು ಸಹಾಯಕವಾಗುತ್ತದೆ.
ಈ ವಿಕಾಸಗೊಂಡಿರುವ ಪ್ಲೇಮ್ ಟ್ಯೂಬ್ ಅಪರ್ಟಸ್ ಐ.ಐ.ಟಿ ಪ್ರೊಫೆಸರ್ಗಳಿಂದಲೂ ಪ್ರಶಂಸಿಸಲ್ಪಟ್ಟಿದೆ. ಈ ಸಂಶೋಧನಾ ಕಾರ್ಯವು ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ. ಕೆ.ಜಿ ವಿಶ್ವನಾಥ, ವಿಭಾಗದ ಮುಖ್ಯಸ್ಥರು ಪ್ರೊ. ಡಿ.ಬಿ. ಪಾಟೀಲ ಹಾಗೂ ಮೆಕ್ಯಾನಿಕಲ್ ಎಂಜಿನೀಯರಿಂಗ್ ವಿಭಾಗದ ಹಿರಿಯ ಫ್ಯಾಕಲ್ಟೀ ಸದಸ್ಯರುಗಳ ಬೆಂಬಲ ಪಡೆದಿದೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 