ಕ್ರೀಡೆಯಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ: ಕಟ್ಟೀಮನಿ
ಲೋಕದರ್ಶನ ವರದಿ
ಬೆಳಗಾವಿ 27: ವಿವಿಧ ಕ್ರೀಡೆಯಲ್ಲಿ ಯುವ ವಿದ್ಯಾಥರ್ಿಗಳು ಸಾಧನೆ ಮಾಡಿ ಒಲಂಪಿಕನಲ್ಲಿ ಬೆಳಗಾವಿ ಮಿಂಚುವಂತಾಗಲು ಕೆ.ಎಲ್.ಇ ಕಾಯರ್ಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ತನು-ಮನ- ಧನದಿಂದ ಪರಿಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಕ್ರಿಯಾತ್ಮಕ ,ಕೌಶಲ್ಯಯುತವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆಗೈದು ಭಾರತದ ಕ್ರೀಡಾಲೋಕದ ಕಣ್ಮಣಿಗಳಾಗಬೇಕೆಂದು ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ನಿದರ್ೇಶಕ ಎಸ್.ಸಿ. ಕಟ್ಟೀಮನಿ ಹೇಳಿದರು.
ಅವರು ನಗರದ ಕೆಎಲ್ಇ ಜಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನ 2018-19ನೆಯ ಸಾಲಿನ ವಾಷರ್ಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತ, ಸೋಲು ಗೆಲುವಿನ ಸೋಪಾನ. ತಮ್ಮ ಹಣೆಬರಹ ತಮ್ಮ ಕೈಯಲ್ಲಿದೆ. ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಕೆಎಲ್ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಅತಿಥಿಗಳಾಗಿ ಆಗಮಿಸಿ ಪಾರಿವಾಳ, ಬಲೂನ ಹಾರಿಸುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯ ಸಿದ್ಧರಾಮ ಗದಗ ವಹಿಸಿ ಮಾತನಾಡಿದರು. ಆರಂಬದಲ್ಲಿ ಆಕರ್ಷಕ ಪಥಸಂಚಲನ ವಿದ್ಯಾಥರ್ಿಗಳಿಂದ ಜರುಗಿತು. ವೇದಿಕೆ ಮೇಲೆ ಪ್ರಭಾರಿ ಪ್ರಾಚಾರ್ಯ ಬಾಗಪ್ಪ ಮಾರದ ಉಪಸ್ಥಿತರಿದ್ದರು.
ಕ್ರೀಡಾ ಕಮೀಟಿಯ ಪ್ರಭು ನಿಡೋಣಿ, ಹನಮಂತ ವೀರಗಂಟಿ, ಎಸ್.ಜೆ. ಏಳುಕೋಟಿ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಅಲ್ಕಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಚ್.ಜಿ.ವೀರಗಂಟಿ ವಂದಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 