ಅಥಣಿ ತಾಂವಶಿ ಗ್ರಾಮದ ಹೊರ ವಲಯ: ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟ: 4 ಎಮ್ಮೆ, 3 ಮೇಕೆ ಆಹುತಿ
ಸಂಬರಗಿ / ನಾಗನೂರ ಪಿ.ಎ 14: ತಾಂವಶಿ ಗ್ರಾಮದ ಹೊರ ವಲಯ ನಾಗನೂರ ಪಿ.ಎ ರಸ್ತೆ ಬದಿಗಿರುವ ತೋಟದ ವಸತಿಯಲ್ಲಿರುವ ಯಲ್ಲ್ಲಪ್ಪ ದುಂಡಪ್ಪ ಉಪ್ಪಾರ ಇವರ ತೋಟದ ವಸತಿ ಮನೆಯಲ್ಲಿ ಇರುವ ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟಗೊಂಡು 4 ಎಮ್ಮೆ, 3 ಮೇಕೆ, ಮನೆಯಲ್ಲಿರುವ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸುಮಾರು 5 ಲಕ್ಷ ರೂ. ಹಾನಿಯಾಗಿದೆ. ಈ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಘಟನೆ ಹಿನ್ನಲೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಅಡಿಗೆ ಮುಗಿಸಿ ತೋಟದ ಕೆಲಸಕ್ಕೆ ಹೋದ ನಂತರ ತಮ್ಮ ವಾಸಿಸುವ ಮನೆಯಲ್ಲಿ ಅಡಿಗೆ ಅನಿಲ ಆಕಸ್ಮಿಕವಾಗಿ ಸ್ಪೋಟಗೊಂಡಿದ್ದು ಭಾರಿ ಅನಾಹುತವಾಗಿದೆ. ಘಟನಾ ಸ್ಥಳಕ್ಕೆ ಅಥಣಿ ಅಗ್ನಿ ಶಾಮಕ ತಂಡ ತೆರಳಿ ಅಗುವ ದೊಡ್ಡ ಅನಾಹುತವನ್ನು ತಡೆಗಟ್ಟಿಸಿದರು. ಯಲ್ಲಪ್ಪ ಅವರ ಸಹೋದರನಾದ ಸದಾಶಿವ ದುಂಡಪ್ಪ ಉಪ್ಪಾರ, ಬೀರಪ್ಪ ದುಂಡಪ್ಪ ಉಪ್ಪಾರ ಮೂವರ ಕುಟುಂಬಕ್ಕೆ ಹಾನಿಯಾಗಿದೆ.
ಘಟನೆಯಲ್ಲಿ ನಗದು 60 ಸಾವಿರ ರೂಪಾಯಿ, ಸುಮಾರಾಗಿ 30 ಗ್ರಾಮ ಬಂಗಾರ, ಜೋಳ, ಗೋಧಿ, ಕಡಲೆ ಇನ್ನಿತರ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗ್ರಾಮದ ಎಲ್ಲಾ ಜನ ಕೂಡಿಕೊಂಡು ಸಹಾಯ ಮಾಡಿದರು.
ಘಟನಾ ಸ್ಥಳಕ್ಕೆ ಉಪ ತಹಶಿಲ್ದಾರ ಅಮಿತ ಢವಳೇಶ್ವರ, ಅಥಣಿ ಪಿ. ಎಸ್. ಉಸ್ಮಾನ ಅವಟಿ, ಗ್ರಾಮ ಲೆಕ್ಕಾಧಿಕಾರಿ ಎಮ್. ಎಮ್. ಕೋಮರ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದರು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 