ಲೋಕದರ್ಶನ ವರದಿ
ಧಾರವಾಡ 17: ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು ಕೇಲಗೇರಿ ಎ ಮತ್ತು ಬಿ, ಆಂಜನೇಯ ನಗರ ಇವರ ಸಂಯುಕ್ತ ಆಶ್ರಯದಲ್ಲಿ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವು ಗುಡ್ಡದ ಮಠ ಕೇಲಗೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗೀತಾ ವೀ ರೆಡ್ಡೇರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರು ಧಾರವಾಡ. ಇವರು ನಡೆಸಿಕೊಟ್ಟರು.
ಅಧ್ಯಕ್ಷತೆಯನ್ನು ರುದ್ರಗೌಡ ಪಾಟೀಲ ಇವರು ವಹಿಸಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಗೆ ಬರುವುದು ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬಂದಷ್ಠೆ ಖುಷಿಯನ್ನು ನೀಡುತ್ತದೆ. ಪೂಜ್ಯ ಖಾವಂದರು ಉತ್ತರ ಕನರ್ಾಟಕ ಭಾಗದ ಜನರಿಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಡುತ್ತಿದ್ದಾರೆ. ಈ ಯೋಜನೆಯಿಂದ ಮಹಿಳೆಯರಿಗೆ ಸಮಾಜದಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಆಥರ್ಿಕ ನೆರವನ್ನು ಪಡೆದುಕೊಂಡು ಸ್ವ ಉದ್ಯೋಗವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸು ಕಂಡುಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಮಾತನಾಡಿದರು.
ನೂತನ ಒಕ್ಕೂಟಗಳ ಜವಾಬ್ದಾರಿ ಹಸ್ತಾಂತರವನ್ನು ಮಾಡಿದ ಮಾಧವ ಗೌಡ ಯೋಜನಾಧಿಕಾರಿ ಕಛೇರಿ ತಪಾಸಣಾ ವಿಭಾಗ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಧಾರವಾಡ ಪ್ರಾದೇಶಿಕ ಕಛೇರಿ ಇವರು ಯೋಜನೆಯು ಬೆಳೆದು ಬಂದ ರೀತಿ ಹಾಗೂ ಉತ್ತರ ಕನರ್ಾಟಕ ಭಾಗದ ಜನರಿಗೆ ಆಸ್ಪತ್ರೆಗಳ ವ್ಯವಸ್ಥೆ, ಮೆಡಿಕಲ್ ಕಾಲೇಜುಗಳ ವ್ಯವಸ್ಥೆಯನ್ನು ಮಾಡಿದ್ದು. ಈ ಗ್ರಾಮಾಭಿವೃದ್ದಿ ಯೋಜನೆಯಿಂದ ಮನೆ ಮನೆಗಳಿಗೆ ಆಥರ್ಿಕ ನೆರವು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು. ಮತ್ತು ನಿರ್ಗತಿಕರಿಗೆ ಮಾಶಾಸನ, ಕೆರೆಗಳ ಹೊಳೆತ್ತುವ ಕಾರ್ಯಕ್ರಮ, ಶ್ರದ್ದಾ ಕೇಂದ್ರಗಳ ಸ್ವಚ್ಚತೆ, ಶಾಲಾ ಕಾಲೇಜುಗಳಿಗೆ ಆಸನದ ವ್ಯವಸ್ಥೆ ಇನ್ನಿತರಗಳ ಬಗ್ಗೆ ಕಾಳಜಿಯನ್ನು ವಹಿಸಿ ಪೂಜ್ಯರು ಅನುದಾನವನ್ನು ನೀಡುತ್ತಿದ್ದಾರೆ. ಯೋಜನೆ ಇಡೀ ರಾಜ್ಯದಲ್ಲಿ ವಿಸ್ತಾರಗೊಂಡಿದೆ ಎಲ್ಲಾ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾತನಾಡಿದರು.
ತಾಲೂಕಿನ ಯೋಜನಾಧಿಕಾರಿಯವರಾದ ಉಲ್ಲಾಸ್ ಮೇಸ್ತ ರವರು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವನೆ ಗೈದು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಸಂಗಯ್ಯ ಗುಡ್ಡದ ಮಠ, ನಿವೃತ ಅಧಿಕಾರಿಗಳು ಕೃ.ವಿ.ವಿ ಧಾರವಾಡ. ಶಾಂತಯ್ಯ ಹಿರೇಮಠ, ಊರಿನ ಗಣ್ಯರು. ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕರಾದ ಧರ್ಮಪ್ಪ ಜೆ ಕೆ ಹಾಗೂ ಸೇವಾಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.