ಪಾಲಿಕೆ ಅಧಿಕಾರಿಗಳ ನಿರ್ಲಕ್ಷಯ: ಅಪಾರ ನೀರು ಪೋಲು
ಲೋಕದರ್ಶನ ವರದಿ
ಬೆಳಗಾವಿ 9, ನಗರದ ಚನ್ನಮ್ಮ ವೃತ್ತದ ಬಳಿ ಅಪಾರ ನೀರು ಪೋಲಾಗುತ್ತಿದೆ. ಇತ್ತ ಕುಡಿಯುವ ನೀರಿನ ಕೊರತೆ ಇದ್ದಾಗಲೇ ಅತ್ತ ಅಷ್ಟೊಂದು ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರುತ್ತಿದೆ. ನೀರು ಪೋಲಾಗುವದರ ಜೊತೆಗೆ ರಸ್ತೆ ಸಂಚಾರದಲ್ಲಿರುವ ದ್ವಿಚಕ್ರ ವಾಹನದಾರರಿಗೂ ಕಂಟಕವಾಗಿದೆ. ವೃತ್ತದ ತಿರುವಿನಲ್ಲಿ ನೀರು ಹರಿದು ಹೋಗುತ್ತಿರುವುದರಿಂದ ದ್ವಿಚಕ್ರ ವಾಹಗಳು ತಿರುವಿನಲ್ಲಿ ಸಂಚರಿಸುವಾಗ ವಾಹನದ ಜಕ್ರಗಳು ಜಾರುವ ಸಂಭವವಿದ್ದು, ಸವಾರರು ಬಿದ್ದು ಪ್ರಾಣ ಹಾನಿಯಾಗುವ ಸಂಭವವೂ ಇದೆ.
ಹತ್ತಿರದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಲಯ, ಪೊಲೀಸ ಚೌಕಿಗಳಿವೆ. ಎಲ್ಲ ಅಧಿಕಾರಿಗಳು ಇದೇ ಮಾರ್ಗವಾಗಿ ತಮ್ಮ ಕಚೇರಿ-ಕೆಲಸಗಳಿಗೆ ಹೋಗಬೇಕು. ಆದರೂ ಯಾರೋಬ್ಬ ಅಧಿಕಾರಿಗಳ ಕಣ್ಣಿಗೂ ಇದು ಕಂಡುಬಂದಿಲ್ಲವೇ? ಅಥವಾ ಕಂಡರೂ ಕಾಣದಂತೆ ವತರ್ಿಸುತ್ತಿರುವರೇ?
ನಗರದ ಆಡಳಿತ ಮಂಡಳಿ ಆದಷ್ಟೂ ಬೇಗನೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಪೋಲಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 