ಬಿಲ್ಲಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ

ಬಿಲ್ಲಹಳ್ಳಿ ಗ್ರಾಮದ  ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ National Mathematics Day celebrated at Billahalli village high school

 ರಾಣಿಬೆನ್ನೂರ:26 ತಾಲೂಕಿನ ಬಿಲ್ಲಹಳ್ಳಿ ಗ್ರಾಮದ  ಮಾತಾ ರವೀಂದ್ರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯ ಚಂದ್ರಶೇಖರ  ಅಸುಂಡಿ ಮಾತನಾಡಿ, ಗಣಿತವು ಕಬ್ಬಿಣದ ಕಡಲೆ ಅಲ್ಲ ಅದು ಒಂದು ಸುಲಭವಾದ ವಿಷಯ ಅದನ್ನು ಏಕಾಗ್ರತೆಯಿಂದ ಆಲಿಸಿ ಅದರ ಬಗ್ಗೆ ತಿಳಿದುಕೊಂಡಾಗ ತುಂಬಾ ಸುಲಭವಾಗುವುದು.  ಗಣಿತದಲ್ಲಿ ಮಕ್ಕಳು ಹೆಚ್ಚು ಆಸಕ್ತಿಯನ್ನು ಹೊಂದಬೇಕೆಂದು ಸೂಚಿಸಿದರು ಮತ್ತು  ಗಣಿತದ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ವಿವರಿಸಿದರು. ನವೀನ್ ನಾಯಕ್ ಕಾರ್ಯಕ್ರಮ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಸುಮಾ ಕಾಯಕದ ನಿರೂಪಿಸಿದರು ರೂಪ ಆಡಿನವರ ಸ್ವಾಗತಿಸಿದರು. ಅಮೃತ  ಬಂಗೇರ ವಂದಿಸಿದರು. ಶಾಲೆಯ ಸಿಬ್ಬಂಧಿವರ್ಗ ಸರ್ವ ಶಿಕ್ಷಕರು ಹಾಗೂ  ಮಕ್ಕಳು ಉಪಸ್ಥಿತರಿದ್ದರು.