ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ
ಲೋಕದರ್ಶನ ವರದಿ
ಕೊಪ್ಪಳ: ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೋಂಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಟಿಪ್ಪು ಒಬ್ಬ ಸಿಪಾಯಿಯ ಮಗನಾಗಿ ಹುಟ್ಟಿ, ಸ್ವ-ಸಾಮಥ್ರ್ಯದಿಂದ ನಾಡಿನ ದೊರೆಯಾದನು. ಮಕ್ಕಳನ್ನು ಅಡವಿಡಲು ಬಯಸುತ್ತೇನೆಯೇ ಹೊರತು ಈ ದೇಶವನ್ನು ಅಡವಿಡಲಾರೆ ಎಂಬ ದಿಟ್ಟ ನಿದರ್ಾರ ಮಾಡಿ ಆಂಗ್ಲರ ಪಾಲಿಗೆ ಹುಲಿಯಾಗಿ ಬಾಳಿದನು. ಇಂತಹ ವ್ಯಕ್ತಿಯ ಆಚರಣೆ ಒಂದು ಧರ್ಮ, ಜಾತಿ, ಭಾಷೆಯ ಸೀಮೆಗೆ ಸೀಮಿತವಾಗರಬಾರದು ಎಂದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯೋಪಾಧ್ಯಾಯ ಫಕೀರಪ್ಪ.ಎನ್.ಅಜ್ಜಿ. ಟಿಪ್ಪುವಿನ ಜೀವನ ಚರಿತ್ರೆಯ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ವೀರಮ್ಮ ಸೋಂಪುರ, ಶಿಕ್ಷರಾದ ಕೊಟ್ರಯ್ಯ ಗುಡ್ಲಾನೂರ, ಫಕೀರಮ್ಮ ತಳವಾರ, ಮರಿಯಮ್ಮ ಹರಿಜನ, ಹುಲಿಗೇಶ ಭೋವಿ, ಪ್ರಮೋಧ ಜಾದವ, ನಾಗರತ್ನ ಮಾಲಿಪಾಟೀಲ್, ರಜಿಯಾ ಬೇಗಂ, ಮಂಜುಳಾ ಬಹದ್ದೂರಬಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 