ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ
ಲೋಕದರ್ಶನ ವರದಿ
ಕೊಪ್ಪಳ: ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೋಂಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಟಿಪ್ಪು ಒಬ್ಬ ಸಿಪಾಯಿಯ ಮಗನಾಗಿ ಹುಟ್ಟಿ, ಸ್ವ-ಸಾಮಥ್ರ್ಯದಿಂದ ನಾಡಿನ ದೊರೆಯಾದನು. ಮಕ್ಕಳನ್ನು ಅಡವಿಡಲು ಬಯಸುತ್ತೇನೆಯೇ ಹೊರತು ಈ ದೇಶವನ್ನು ಅಡವಿಡಲಾರೆ ಎಂಬ ದಿಟ್ಟ ನಿದರ್ಾರ ಮಾಡಿ ಆಂಗ್ಲರ ಪಾಲಿಗೆ ಹುಲಿಯಾಗಿ ಬಾಳಿದನು. ಇಂತಹ ವ್ಯಕ್ತಿಯ ಆಚರಣೆ ಒಂದು ಧರ್ಮ, ಜಾತಿ, ಭಾಷೆಯ ಸೀಮೆಗೆ ಸೀಮಿತವಾಗರಬಾರದು ಎಂದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯೋಪಾಧ್ಯಾಯ ಫಕೀರಪ್ಪ.ಎನ್.ಅಜ್ಜಿ. ಟಿಪ್ಪುವಿನ ಜೀವನ ಚರಿತ್ರೆಯ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ವೀರಮ್ಮ ಸೋಂಪುರ, ಶಿಕ್ಷರಾದ ಕೊಟ್ರಯ್ಯ ಗುಡ್ಲಾನೂರ, ಫಕೀರಮ್ಮ ತಳವಾರ, ಮರಿಯಮ್ಮ ಹರಿಜನ, ಹುಲಿಗೇಶ ಭೋವಿ, ಪ್ರಮೋಧ ಜಾದವ, ನಾಗರತ್ನ ಮಾಲಿಪಾಟೀಲ್, ರಜಿಯಾ ಬೇಗಂ, ಮಂಜುಳಾ ಬಹದ್ದೂರಬಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 