ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಏಳಿಗೆಯೇ ನನ್ನ ಧ್ಯೇಯ ಶ್ರೀಮತಿ ಪಲ್ಲವಿ ಜಿ

My mission is the prosperity of nomadic community of Scheduled Castes and Scheduled Tribes Smt. Pal

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ  ಅಲೆಮಾರಿ ಸಮುದಾಯದ ಏಳಿಗೆಯೇ ನನ್ನ ಧ್ಯೇಯ ಶ್ರೀಮತಿ ಪಲ್ಲವಿ ಜಿ 

ಇಂಡಿ 18 : ಪಲ್ಲವಿ ಜಿ ಮಾನ್ಯ ಅಧ್ಯಕ್ಷರು ,ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಬೆಂಗಳೂರು ರವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ , ಚವಡಿಹಾಳ ಹಾಗೂ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಜನಾಂಗದ ಕುಟುಂಬಗಳು ವಾಸಿಸುತ್ತಿರುವ ಸ್ಥಳ ಹಾಗೂ ಕುಂದು ಕೊರತೆಗಳನ್ನು ಆಲಿಸಿದರು.ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶ್ವಜ್ಞಾನಿ ಗ್ರಂಥಾಲಯ ಸಭಾ ಭವನದಲ್ಲಿ ಮಾತನಾಡಿ ಪಲ್ಲವಿ  ಗ್ರಾಮದ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಚೆನ್ನದಾಸರ್ ಜನಾಂಗದ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಅಲೆಮಾರಿ ಸಮಸ್ಯೆಗಳ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮ ಸಭೆ ಮಾಡಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆಗಳನ್ನು ಸರ್ಕಾರದ ನಿಯಮದಂತೆ  ಪರಿಹರಿಸಲು ಸೂಚಿಸಿದರು.ಚವಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವಡಿಹಾಳ  ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ  ಬಗ್ಗೆ ಮಾಹಿತಿ ಪಡೆದರು.ಚವಡಿಹಾಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಸಿ ಜೆ ಪಾರೆ ಸರ್  ರವರು ಪಂಚಾಯತ್ ಕಾರ್ಯಾಲಯದಲ್ಲಿ   ವಿಡಿಯೋ ಕ್ಲಿಪ್ ತೋರಿಸುವುದರ ಮೂಲಕ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಕುಟುಂಬಗಳಿಗೆ ನೀಡಿರುವ ಸೌಲ್ಯಭ್ಯಗಳು ಹಾಗೂ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ನೀಡಿರುವ ಕುರಿತು ಮಾಹಿತಿ ಹಂಚಿಕೊಂಡರು.ಪಟ್ಟಣದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದ ಹರಿಣಶಿಕಾರಿ ಜನಾಂಗದ ಕುಟುಂಬಗಳಿಗೆ ಬೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿದರು.ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.ಹಾಗೂ ಪುರಸಭೆ ಅಧಿಕಾರಿಗಳಿಗೆ ಚರಂಡಿ ವ್ಯವಸ್ಥೆ, ಶುದ್ಧ  ಕುಡಿಯುವ ನೀರು ಹಾಗೂ ಪ್ರತ್ಯೇಕ  ಅಂಗನವಾಡಿ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಯ ಅಲೆಮಾರಿ ಸಮುದಾಯದ ಚೆನ್ನದಾಸರ್ ಜನಾಂಗದ ಕುಟುಂಬಗಳ ಸ್ಥಳ ಪರೀಶೀಲನೆ ಹಾಗೂ ಕುಂದು ಕೊರತೆಗಳ ಕುರಿತು ಚರ್ಚಿಸಿ ಸಮುದಾಯದ ಸಮಸ್ಯೆಗಳ ಅಹವಾಲು ಗಳನ್ನು ಸ್ವೀಕರಿಸಿದರು. ತದನಂತರ ಸಮುದಾಯದ ಮಹಿಳೆಯರಿಗೆ ಸ್ವ ಸಹಾಯ ಸಂಘ ಗಳಿಗೆ ಸಾಲಗಳು ಸಹಿತ ಸರ್ಕಾರ ನೀಡುತ್ತದೆ. ಇವುಗಳ ಉಪಯೋಗ ಪಡೆದುಕೊಂಡು ಸಾಮಾಜದ ಮುಖ್ಯ ವಾಹಿನಿಗೆ ತಾವೆಲ್ಲರೂ ಬರಬೇಕು ಎಂದು ತಿಳಿಸಿದರು.ಈ  ಸಂದರ್ಭದಲ್ಲಿ ಇಂಡಿ ತಶೀಲದಾರ ಎಸ್ ಬಿ ಕಡಕಬಾವಿ,ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ನಂದೀಪ ರಾಠೋಡ ,  ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಉಮೇಶ್ ಲಮಾಣಿ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು  ಬಿ ಎಸ್ ಆಲಗೂರ, ಪೊಲೀಸ ಇಲಾಖೆ ಅಧಿಕಾರಿಗಳು ,ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ  ಎಸ್ ಎಂ ಬಿರಾದಾರ, ಸಿ ಜಿ ಪಾರೆ, ಸಿದ್ದರಾಮ ಸಿನಕೇಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.