ಮಾಸಿಕ ಅನುಭಾವ ಶರಣ ಸತ್ಸಂಗ ಹಾಗೂ ಗುರುವಂದನಾ ಕಾರ್ಯಕ್ರಮ
ಬೆಳಗಾವಿ 5- ಮಹಾಂತೇಶ ನಗರದಲ್ಲಿರುವ ಮಹಾಂತಭವನದಲ್ಲಿ ಇದೇ ದಿ. 8 ಗುರುವಾರದಂದು ಸಾ. 5-30 ಕ್ಕೆ ಮಾಸಿಕ ಅನುಭಾವ ಶರಣ ಸತ್ಸಂಗ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆ(ರಿ) ಜಿಲ್ಲಾ ಘಟಕ ಹಾಗೂ ರಾಷ್ಟ್ರೀಯ ಬಸವಸೇನಾ ಜಿಲ್ಲಾ ಘಟಕ ಬೆಳಗಾವಿ ಇವರು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಡಾ ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದರ್ಯ ಮಠ ಗದಗ ಹಾಗೂ ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಹಾಗೂ ಇವರು ವಹಿಸಲಿದ್ದಾರೆ. 'ಚನ್ನಬಸವಣ್ಣನವರ ವಚನ ನಿರ್ವಚನ' ಎಂಬ ವಿಷಯ ಕುರಿತು ಹಾರೂಗೇರಿ ಶರಣವಾಯಿನಿಯ ಆಯ್. ಆರ್. ಮಠಪತಿಯವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಷಟ್ಸ್ಥಳ ಧ್ವಜಾರೋಹಣವನ್ನು ಪ್ರೊ. ಸಿದ್ದನಗೌಡ ಚೌಬಾರಿ ದಂಪತಿಗಳು ನಡೆಸಿಕೊಡಲಿದ್ದು ಮುಖ್ಯ ಅತಿಥಗಳಾಗಿ ಎಸ್. ಎಲ್. ಬಾಡಗೆ ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬಸವತತ್ವ ಪ್ರಚಾರ ಭಿತ್ತಿಪತ್ರಗಳ ಬಿಡುಗಡೆ ನಡೆಯಲಿದೆ. ಚೆನ್ನಪ್ಪ ನರಸಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಎಸ್. ಜಿ. ಸಿದ್ನಾಳ ಸ್ವಾಗತಿಸಲಿದ್ದಾರೆ. ಈ ಕಾರ್ಯಕ್ರಮದ ಸದುಪಯೋಗವನ್ನು ಹೆಚ್ಚಿನ ಭಕ್ತರು ಪಡೆಯಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆ(ರಿ) ಹಾಗೂ ರಾಷ್ಟ್ರ್ಯಿಬಸಸೇನಾ ಜಿಲ್ಲ ಘಟಕಗಳ ಪರವಾಗಿ ಬೆಳಗಾವಿ ನಗರ ಘಟಕ ಕಾರ್ಯದಶರ್ಿ ಅಶೋಕ ಮಳಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 