ದುಂದು ವೆಚ್ಚದ ಆಡಂಬರಕ್ಕಿಂತ ಸಾಮೂಹಿಕ ವಿವಾಹ ಉತ್ತಮ : ಶಿವಕುಮಾರ ಸ್ವಾಮೀಜಿ
Mass marriage is better than extravagant pomp and show: Shivakumara Swamiji
ಧಾರವಾಡ 09: ಬಡ ವರ್ಗದ ಜನರು ಸಾಲ ಸೋಲ ಮಾಡಿ ಆಡಂಬರಕ್ಕಾಗಿ ಮದುವೆಗೆ ಹೆಚ್ಚು ಖರ್ಚು ಮಾಡಬಾರದು. ಅದರ ಬದಲು ಮಠಗಳಲ್ಲಿ ಆಯೋಜಿಸುವ ಇಂಥ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ಇಲ್ಲಿನ ರಾಜೀವಗಾಂಧಿ ನಗರದಲ್ಲಿರುವ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ತಾತನವರ 38ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಏರಿ್ಡಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅಲ್ಲೀಪುರ ಮಹಾದೇವ ತಾತನವರು ಭಕ್ತರ ಉದ್ಧಾರಕ್ಕಾಗಿಯೇ ಜನಿಸಿದ ಶಿವಯೋಗಿ ಸಾಮ್ರಾಟರು. ಅವರು ನೆಲೆಸಿದ್ದ ಇಂಥ ಪುಣ್ಯಭೂಮಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿ ನಿಜವಾಗಿ ಪುಣ್ಯವಂತರು. ದಂಪತಿ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು. ಹುಬ್ಬಳ್ಳಿ ವಾಣಿಜ್ಯತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಸಮಾಜದಲ್ಲಿ ದುಷ್ಟ ಶಕ್ತಿಗಳನ್ನು ದಮನ ಮಾಡಿ, ಶಿಷ್ಟರ ರಕ್ಷಣೆಗಾಗಿ ಸಾಕ್ಷಾತ್ ಶಿವನು ಅಲ್ಲೀಪುರ ಮಹಾದೇವ ತಾತನವರ ರೂಪದಲ್ಲಿ ಬಂದು ಭಕ್ತರನ್ನು ಉದ್ಧರಿಸಿದ್ದಾನೆ.
ತಾತನ ಲೀಲಾ ಪವಾಡಗಳು ಅನೇಕ. ತಾತನ ನಾಮ ಸ್ಮರಣೆಯಿಂದಲೇ ಅನೇಕ ಕಷ್ಟಗಳು ದೂರವಾಗುತ್ತವೆ ಎಂದರು. ಸಾಮೂಹಿಕ ವಿವಾಹದಲ್ಲಿ 21 ಜೋಡಿ ನವ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲತಾ ಆನೆಗುಂದಿ ಪ್ರಾರ್ಥಿಸಿದರು. ಸಂತೋಷ ಆನೆಗುಂದಿ, ಸಿದ್ಧಲಿಂಗಪ್ಪ ಹೊಸಕೇರಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಣ್ಣ ಬೆಳಗಾವಿ, ಮಂಜುನಾಥ ಬೆಳಗಾವಿ, ಈರಣ್ಣ ಆಕಳವಾಡಿ, ಶಂಕರ ಕುಂಬಿ, ಮಠದ ಭಕ್ತರು ಉಪಸ್ಥಿತರಿದ್ದರು. ತಾತನ ಮೂರ್ತಿಗೆ ರುದ್ರಾಭಿಷೇಕ: ಭಾನುವಾರ ಬೆಳಗ್ಗೆ 5ಕ್ಕೆ ತಾತನವರ ಗದ್ದುಗೆಗೆ ರುದ್ರಾಭಿಷೇಕ. ನಂತರ ಅಗ್ನಿಕುಂಡ ಕಾರ್ಯಕ್ರಮ. ಪಲ್ಲಕ್ಕಿಉತ್ಸವ, ಆರಾಧನಾ ಮಹೋತ್ಸವ ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 