ಜಲ ಸಂರಕ್ಷಣೆಗಾಗಿ ಮಮತಾ ಕಾಲು ನಡಿಗೆ ಜಾಥಾ
ಕೋಲ್ಕತಾ 12: ನೀರಿನ ಸಂರಕ್ಷಣೆ ಹಾಗೂ , ಮಿತ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೆಲವು ,ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು, ಕಾಲು ನಡಿಗೆ ಜಾಥಾ ಮಾಡಿ ನೀರು ಉಳಿಸುವ ದಿನಕ್ಕೆ ಚಾಲನೆ ನೀಡಲಿದ್ದಾರೆ.
ಈ ಆಚರಣೆಯು ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಮಧ್ಯಾಹ್ನ 3 ಗಂಟೆಗೆ ಜೋರಸಂಕೊದಿಂದ ಪ್ರಾರಂಭವಾಗುವ ಜಾಥಾ ಮಾಯೋ ರಸ್ತೆಯಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮುಂದುವರಿಯಲಿದೆ ಇದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ.
ಮಳೆನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವುದು ಈ ಯೋಜನೆಯ ಹಿಂದಿನ ಮೂಲ ಉದ್ದೇಶವಾಗಿದೆ. ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಈ ಯೋಜನೆ ಪ್ರಾಯೋಗಿಕ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಖ್ಯಾತ ವಿಜ್ಞಾನಿ ಡಾ ಎಸ್ ಪಿ ಗೊನ್ ಚೌಧುರಿ ಅವರು ಪರಿಣತಿ ಮಾಹಿತಿ ನೀಡಲಿದ್ದಾರೆ. ಟ್ಯಾಂಕ್ಗಳಲ್ಲಿ ಸಂಗ್ರಹಿಸಿದ ಮಳೆನೀರನ್ನು ಸೌರಶಕ್ತಿಯ ಮೇಲೆ ಚಲಿಸುವ ಪಂಪ್ಗಳನ್ನು ಬಳಸಿ ಮೇಲ್ಚಾವಣಿಯ ಟ್ಯಾಂಕ್ಗಳಿಗೆ ಸಾಗಿಸಲಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಈ ಯೋಜನೆಯನ್ನು ಆರಂಭದಲ್ಲಿ ದಕ್ಷಿಣ 24 ಪರಗಣಗಳಲ್ಲಿ ಎರಡು ಹಳ್ಳಿಗಳು ಮತ್ತು ಎರಡು ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು . ಹೆಚ್ಚು ಯಶಸ್ವಿಯಾದ 'ಜಲ ಧಾರೋ, ಜಲ ಭಾರೋ' ಯೋಜನೆಯು ಮುಂದಿನ ಒಂದು ವರ್ಷದೊಳಗೆ ರಾಜ್ಯ ಸಕರ್ಾರದ ಪ್ರಯತ್ನದ ಭಾಗವಾಗಿ ಇನ್ನೂ 15 ಪುರಸಭೆಗಳ ವ್ಯಾಪ್ತಿಗೆ ಸೇರಲಿದೆ. ನೀರನ್ನು ಉಳಿಸಲು ಕೊಳಗಳನ್ನು ಅಗೆಯುವ ಬಗ್ಗೆ ಹೆಚ್ಚಿನ ಒತ್ತಡ ಹೇರಿದ ಎಂ.ಎಸ್. ಬ್ಯಾನರ್ಜಿ ಯವರ ಮೆದುಳಿನ ಕೂಸು ಜಲ್ ಧರೋ, ಜಲ್ ಭಾರೋ. ನೀರನ್ನು ಮುಖ್ಯವಾಗಿ ಕೃಷಿ ಮತ್ತು ಮೀನುಗಾರಿಕೆಗೆ ಬಳಸಲಾಗುತ್ತದೆ. ಈ ಯೋಜನೆಯನ್ನು 2011 ರಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಕಳೆದ ಎಂಟು ವರ್ಷಗಳಲ್ಲಿ "ಜಲ್ ಧರೋ ಜಲ ಭಾರೋ" ಎಂಬ ನೀರಿನ ಸಂರಕ್ಷಣಾ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 