ಮಲ್ಲಿಕಾರ್ಜುನ ಜಾತ್ರೆ: ಸತ್ತಿಗೇರಿ, ಸೋಪ್ಪಡ್ಲ, ಕೋರಕೊಪ್ಪದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಆರಂಭ
Mallikarjuna fair: Start of trek from Sattigeri, Soppadla, Korakoppa to Srishaila
ಯರಗಟ್ಟಿ 02 : ಆಂಧ್ರದ ಶ್ರೀಶೈಲ ಕ್ಷೇತ್ರದಲ್ಲಿ ಯುಗಾದಿಯಂದು ಜರುಗುವ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ತಾಲೂಕಿನ ಸತ್ತಿಗೇರಿ, ಸೊಪ್ಪಡ್ಲ, ಕೋರಕೊಪ್ಪ, ತೋರಣಗಟ್ಟಿ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಸೋಮವಾರ ಪಾದಯಾತ್ರೆ ಕೈಗೊಂಡರು.ಪಾದಯಾತ್ರೆ ಆರಂಭಕ್ಕೂ ಮುನ್ನ ಕ್ಷೇತ್ರಾಧಿಪತಿ ಮಲ್ಲಿಕಾರ್ಜುನ, ಮಳಿಮಲ್ಲೇಶ್ವರ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಂಬಿಯೊಂದಿಗೆ ಜಮಾಯಿಸಿದ ಭಕ್ತರು ಬಿರುಬಿಸಿಲನ್ನೂ ಲೆಕ್ಕಿಸದೆ ಒಂದು ತಾಸು ಮಂಗಳಾರತಿಯಲ್ಲಿ ಪಾಲ್ಗೊಂಡರು.ಪರ್ವತ ಮಲ್ಲಯ್ಯ ಉಘೆ, ಉಘೆ ಉದ್ಘೋಷ ಪ್ರತಿ ಭಕ್ತರ ಬಾಯಿಯಿಂದ ಬರುತ್ತಿತ್ತು.ಪಾದಯಾತ್ರಿಕರಿಗೆ ದಾರಿಯುದ್ದಕ್ಕೂ ನೀರು, ಪಾನಕ, ಮಜ್ಜಿಗೆ, ಅಂಬಲಿ, ದ್ರಾಕ್ಷಿ, ಬಾಳೆ ಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನು ವಿತರಿಸುವ ಕಾರ್ಯದಲ್ಲಿ ಅನೇಕರು ತಮ್ಮ ಭಕ್ತಿ ಸಮರ್ಿಸಿದರು.
ಬಳಿಕ ಕೋರಕೊಪ್ಪ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಮತ್ತೊಮ್ಮೆ ಮಂಗಳಾರತಿ ಮಾಡಿದ ಬಳಿಕ ಪಾದಯಾತ್ರೆ ಗ್ರಾಮದಿಂದ ಮುಂದೆ ಸಾಗಿತು.ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರ ಸರಕುಗಳನ್ನು ಹೊತ್ತೊಯ್ಯುವ ಸೇವೆ ಸಲ್ಲಿಸಲು ವಾಹನದ ವ್ಯವಸ್ಥೆ ಕೂಡ ಭಕ್ತರು ಮಾಡಿದ್ದರು.ಈ ವೇಳೆ ಚಂದ್ರಯ್ಯ ಮಠಪತಿ, ದುಂಡಯ್ಯ ಸುಬ್ಬಾಪೂರಮಠ, ಕೋರಕಪ್ಪ ಪೂಜ್ಯ ಶ್ರೀಗಳಾದ ರೇವಣಸಿದ್ದೇಶ್ವರ ಸ್ವಾಮಿಜಿ, ಅಶೋಕ ನಂದಿ, ಸುರೇಶ ನಂದಿ, ಕಿರಣ ನರೇವಾಡಿ, ಹನಮಂತ ಮುನ್ಯಾಳ, ನಿಂಗನಗೌಡ ಪಾಟೀಲ, ಬಾಳಪ್ಪ ಕಾಶನ್ನವರ, ಗುರುನಾಥ ಮಟ್ಟಿ, ಪರ್ಪ ಶಿಂಗಾರಗೊಪ್ಪ, ಬಸನಗೌಡ ಪಾಟೀಲ, ಈರಣ್ಣಾ ಗೌಡರ, ಬಸವಂತ ಪಾಟೀಲ, ಭೀಮಶಿ ಇಟಗೌಡ್ರ, ಮಹಾಂತೇಶ ಕೊಟ್ರಶೆಟ್ಟಿ, ಬಾಳಪ್ಪ ಚಂದರಗಿ, ಲಕ್ಷ್ಮಣ ಬಡೆನ್ನವರ, ರಾಕೇಶ ಹೊಂಗಲ, ಬಸು ತೇಲಿ, ಶಿವಪ್ಪ ಕಾಡವಗೋಳ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 